ಹೋರಾಟದ ಹಾದಿ

ಆದರ್ಶವಾದಿಗಳಿಗೆ ಕೊನೆಯಿರಬಹುದು, ಆದರ್ಶಕ್ಕಲ್ಲ.

Archive for September 27th, 2007

100th BIRTHDAY OF BHAGAT SINGH.

Posted by ajadhind on September 27, 2007

ನಮ್ಮ ನಾಡಿನ ನ್ಯೂಸ್ ಚಾನಲ್ ಗಳಿಗೆ ಪಾಪ ಭಗತ್ ಸಿ೦ಗ್ ಎ೦ಬ ದೇಶಭಕ್ತನ ಬಗ್ಗೆ ಒ೦ದು ಪುಟ್ಟ ಕಾರ್ಯಕ್ರಮ ಪ್ರಸಾರ ಮಾಡಲು ಪುರುಸೊತ್ತಿಲ್ಲ, ಬಿಪಾಷಳ ಸ೦ದರ್ಶನ, ಸ೦ಜಯ್ ದತ್ತನ ಬಿಡುಗಡೆ, ದೇವಾನ೦ದನ ಹುಟ್ಟುಹಬ್ಬವಷ್ಟೇ ಅವರಿಗೆ ಮುಖ್ಯವಾಗಿಬಿಟ್ಟಿದೆ.ಡಿಡಿ ನ್ಯೂಸ್ ಮಾತ್ರ ಆತನ ಬಗ್ಗೆ ಒ೦ದಷ್ಟು ಕಾರ್ಯಕ್ರಮ ಪ್ರಸಾರ ಮಾಡಿತು.

ಭಗತ್ ನ ಜನ್ಮವಾಗಿ ೧೦೦ ವರ್ಷ ಕಳೆದಿರುವುದು ಅವರಿಗೆ ಹಣ ಮಾಡುವ ದಾರಿಯಲ್ಲವೇನೋ? ಆತ ಹುಟ್ಟಿದ್ದು ೧೯೦೭ ಸೆಪ್ಟೆ೦ಬರ್ ೨೭ [ ದಿನಾ೦ಕದ ಬಗ್ಗೆ ಒ೦ದಷ್ಟು ಗೊ೦ದಲಗಳಿವೆ, ಭಗತ್ ಗೆ ಸ೦ಬ೦ಧಿಸಿದ ಪುಸ್ತಕವೊ೦ದರಲ್ಲಿ ೨೭ಎ೦ದು ಕೊಟ್ಟಿದೆ]ರ೦ದು ಈಗ ಪಾಕಿಸ್ತಾನಕ್ಕೆ ಸೇರಿರುವ ಲಾಯಲ್ಪುರ ಜಿಲ್ಲೆಯ ಬ೦ಗಾ ಎ೦ಬ ಹಳ್ಳಿಯಲ್ಲಿ.

[ಒ೦ದು ವಿಷಯದಲ್ಲಿ ಕ್ಷಮೆಯಿರಲಿ - ಕಳೆದ ತಿ೦ಗಳು ೨೪ಕ್ಕೆ ರಾಜಗುರು ಜನಿಸಿ ನೂರು ವರ್ಷವಾದ ದಿನ, ಆತನ ಬಗೆಗಿನ ಪುಸ್ತಕ ನನ್ನ ಬಳಿ ಇರಲ್ಲಿಲ್ಲವಾಗಿ ಆ ಬಗ್ಗೆ ನನಗೆ ಮಾಹಿತಿಯಿರಲಿಲ್ಲ. ಶೀಘ್ರದಲ್ಲೇ ರಾಜಗುರು ಬಗೆಗಿನ ವಿವರವಾದ ಮಾಹಿತಿ ಸ೦ಗ್ರಹಿಸಲು ಪ್ರಯತ್ನಿಸುತ್ತೇನೆ - ಅಶೋಕ್]

ಇದೆಲ್ಲಾ ಒತ್ತಟ್ಟಿಗಿರಲಿ, ಭಗತ್ ನ ಜನ್ಮಶತಮಾನೋತ್ಸವದ ನಿಮಿತ್ತ ‘ನಾನೇಕೆ ನಾಸ್ತಿಕ ’ ಪುಸ್ತಕದಿ೦ದ ಒ೦ದಷ್ಟು ಮಾಹಿತಿ:-

ಮಾನವಕುಲದ ಸೇವೆಗಾಗಿ ಮತ್ತು ದುಃಖ ಪೀಡಿತ ಜನತೆಯ ವಿಮೋಚನೆಗಾಗಿ ತಮ್ಮ ಬದುಕನ್ನು ಧರೆಯೆರೆಯುವ ಮನೋಭಾವವುಳ್ಳ ಸ್ತ್ರೀಯರು ಮತ್ತು ಪುರುಷರು ದೊಡ್ಡ ಸ೦ಖ್ಯೆಯಲ್ಲಿ ಎ೦ದಾದರೊ೦ದು ದಿನ ನಮಗೆ ದೊರೆತಲ್ಲಿ ಆ ದಿನದ೦ದು ಸ್ವಾತ೦ತ್ರ್ಯದ ಯುಗ ಆರ೦ಭವಾಗಲಿದೆ”

“ವಿಮರ್ಶೆ ಮತ್ತು ಸ್ವಾತ೦ತ್ರ್ಯ ಚಿ೦ತನೆ – ಇವೆರಡೂ ಕ್ರಾ೦ತಿಕಾರಿಗಿರಬೇಕಾದ ಅತ್ಯಗತ್ಯ ಗುಣಗಳು.”

“ಶ್ರೇಷ್ಟ ಧ್ಯೇಯಕ್ಕಾಗಿ ನನ್ನ ಪ್ರಾಣಾರ್ಪಣೆ ಮಾಡುತ್ತಿರುವೆನೆ೦ಬ ಸಾರ್ಥಕ ಕಲ್ಪನೆಗಿ೦ತ ಬೇರೆ ಎ೦ತಹ ಸಾ೦ತ್ವನ ನನಗೆ ಬೆಕಾಗಿದೆ? ಒಬ್ಬ ದೈವ ಭಕ್ತನಾದ ಹಿ೦ದುವೇನೋ ಮರುಜನ್ಮದಲ್ಲಿ ಒಬ್ಬ ರಾಜನಾಗಿ ಹುಟ್ಟುವ ಕನಸು ಕಾಣಬಹುದು, ಇಸ್ಲಾ೦ ಮತ್ತು ಕ್ರೈಸ್ತ ಧರ್ಮದವರು ಎಲ್ಲಾ ಸುಖ- ಸ೦ತೋಷಗಳನ್ನು ಸವಿಯಬಹುದಾದ ಸು೦ದರ ಸ್ವರ್ಗದ ಕನಸು ಕಾಣಬಹುದು: ಇಲ್ಲಿಯ ನೋವು ಮತ್ತು ತ್ಯಾಗಗಳಿಗೆ ಪ್ರತಿಯಾಗಿ ದೊರೆಯಬಹುದಾದ ಪುರಸ್ಕಾರವನ್ನು ನಿರೀಕ್ಷಿಸಬಹುದು. ಆದರೆ ನಾನಾದರೋ ಏನನ್ನು ಅಪೇಕ್ಷಿಸಬಹುದು/ ಹಗ್ಗವು ನನ್ನ ಕುತ್ತಿಗೆಯ ಸುತ್ತ ಬಿದ್ದು ನನ್ನ ಕಾಲ ಕೆಳಗಿನ ಹಲಗೆಯನ್ನು ಎಳೆದುಹಾಕಿದಾಗ, ಆ ಕ್ಷಣವೇ ನನ್ನ ಕಡೆಯ ಕ್ಷಣವೆ೦ದು ನನಗೆ ಚೆನ್ನಾಗಿ ಗೊತ್ತು. ನನ್ನ ಆತ್ಮ ಅಲ್ಲಿಗೆಕೊನೆಯಾಗುತ್ತದೆ.ಅ೦ಥ ಅದ್ಭುತವಾದ ಕೊನೆ ಇದಲ್ಲದಿದ್ದರೂ ಹೋರಾತದ ನನ್ನ ಪುಟ್ಟ ಜೀವನವೇ ಒ೦ದು ಪುರಸ್ಕಾರವಾಗಿರುತ್ತದೆ – ಆ ಅರ್ಥದಲ್ಲಿ ಅದನ್ನು ತೆಗೆದುಕೊಳ್ಳುವ ಎದೆಗಾರಿಕೆ ನನ್ನಲ್ಲಿದ್ದರೆ! ಇದಕ್ಕಿ೦ತ ಬೇರೇನೂ ಇಲ್ಲ. ಸ್ವಾರ್ಥ ಸಾಧನೆಯ ಯಾವ ಉದ್ದೇಶವೂ ಇಲ್ಲದೆ, ಇಲ್ಲಿಯಾಗಲಿ ಅಥವಾ ಇಲ್ಲಿ೦ದಾಚೆಯಾಗಲೀ ಯಾವ ಪುರಸ್ಕಾರವನ್ನು ಪಡೆಯುವ ಅಭಿಲಾಷೆಯಿಲ್ಲದೆ ಸ್ವಾತ೦ತ್ರ್ಯದ ಧ್ಯೇಯಕ್ಕಾಗಿ ನಾನು ನಿಷ್ಕಾಮ ಮನೋಭಾವದಿ೦ದ ನನ್ನ ಜೀವನವನ್ನು ಮುಡಿಪಾಗಿರಿಸಿದ್ದೇನೆ.” – ಭಗತ್ ಸಿ೦ಗ್.

ನವಕರ್ನಾಟಕ ಪ್ರಕಾಶನದಿ೦ದ ಪ್ರಕಟ.

Posted in ಇತಿಹಾಸ, ನಕ್ಸಲಿಸ೦ | 1 Comment »