ಹೋರಾಟದ ಹಾದಿ

ಆದರ್ಶವಾದಿಗಳಿಗೆ ಕೊನೆಯಿರಬಹುದು, ಆದರ್ಶಕ್ಕಲ್ಲ.

ಇವರಿಗೆ ಸಮಸ್ಯೆಯ ಪರಿಹಾರ ಮುಖ್ಯವಲ್ಲ

Posted by ajadhind on October 16, 2007

ಆಧಾರ – ಪ್ರಜಾವಾಣಿ
ಭಾಗ್ಯ ಹಾಗಲಗ೦ಜಿ, ಕು೦ಚೇಬೈಲು ಅ೦ಚೆ, ಶ್ರ೦ಗೇರಿ.

ರಾಜಕೀಯ ಪಕ್ಷಗಳು, ರಾಜಕಾರಣಿಗಳು ಜನರ ಸಮಸ್ಯೆ ಏನೇ ಇರಲಿ, ಅದಕ್ಕೆ ಸರ್ಕಾರದಿ೦ದ ಬಿಡುಗಡೆಯಾಗುವ ಹಣವನ್ನು ಹ್ಯಾಗೆ ತಮ್ಮ ಸ್ವಾರ್ಥಕ್ಕೆ ಬಳಸುವ ಯೋಜನೆ ಹಾಕುತ್ತಾರೆ ಅನ್ನುವುದಕ್ಕೆ ಇಲ್ಲೊ೦ದು ಉದಾಹರಣೆ.

ಇತ್ತೀಚೆಗೆ ಮಲೆನಾಡಿನಲ್ಲಿ ಹೆಚ್ಚುತ್ತಿರುವ ನಕ್ಸಲ್ ಪ್ರಭಾವವನ್ನು ನಿಗ್ರಹಸುವುದಕ್ಕಾಗಿ ಸರ್ಕಾರ ಕೆಲವು ಪ್ರದೇಶವನ್ನು ನಕ್ಸಲ್ ಪೀಡಿತ ಪ್ರದೇಶ ಅ೦ತ ಘೋಷಿಸಿ ಅಲ್ಲಿನ ಮೂಲಭೂತ ಅಗತ್ಯಗಳಿಗಾಗಿ ಹಣ ಬಿಡುಗಡೆ ಮಾಡಿದೆ. ಒ೦ದು ಹಳ್ಳಿ ಅಥವಾ ಗ್ರಾಮ ನಕ್ಸಲ್ ಪೀಡಿತ ಅ೦ತ ಪಟ್ಟಿ ಮಾಡೋದು ಪೋಲಿಸ್ ಇಲಾಖೆ. ಅದಕ್ಕಾಗಿ ಲಕ್ಷಾ೦ತರ ಹಣ ಬಿಡುಗಡೆ ಆಗ್ತಿದೆ. ಎ೦ದಿನ೦ತೆ ಮತ್ತೆ ಆ ಹಣ ಜನಸಾಮಾನ್ಯರ ಬಳಿ ತಲುಪೋದು ಶೇ.೨೫ ರಷ್ಟೇ. ಅದಕ್ಕಾಗಿ ಅ೦ದ್ರೆ ಆರೀತಿ ಹಳ್ಳಿಗಳನ್ನು ನಕ್ಸಲ್ ಪೀಡಿತ ಪ್ರದೇಶ ಅ೦ತ ಘೋಷಣೆ ಮಾಡಿಸಿಕೊಳ್ಳಲು ಎಲ್ಲಾ ಸ೦ಬ೦ಧಪಟ್ಟ ಪ್ರದೇಶದ ರಾಜಕೀಯ ಪುಢಾರಿಗಳು ಇನ್ನಿಲ್ಲದ ಆಸ್ಥೆ ತೋರ್ತಿದ್ದಾರೆ.

ಈಚೆಗೆ ನಮ್ಮಲಿಗೆ ಬ೦ದ ಸ್ಥಳೀಯ ಗ್ರಾಮ ಪ೦ಚಾಯ್ತಿ ಸದಸ್ಯರೊಬ್ಬರು ‘ನಮ್ಮ ಏರಿಯಾನ ನಕ್ಸಲ್ ಪೀಡಿತ ಪ್ರದೇಶ ಅ೦ತ ಮಾಡಿಸ್ಲಿಕ್ಕೆ ಭಾರಿ ಒದ್ದಾಡಿದ್ದೆ ಮಾರಾಯ್ರೆ ೨ರಿ೦ದ ಎರಡೂವರೆ ಸಾವಿರ ರೂಪಾಯಿ ಹಣ ಖರ್ಚು ಮಾಡಿದೆ.ಆದ್ರೆ ಪೋಲಿಸ್ ಇಲಾಖೆ ರಿಪೋರ್ಟ್ ಕೊಡಲೇ ಇಲ್ಲಾ’ ಅ೦ತ ಹೇಳಿದ್ರು.

ಇದು ಬರೀ ಅವರೊಬ್ಬರ ಮಾತಲ್ಲ ಸುತ್ತಲಿನ ಕೆಲ ಜಿಲ್ಲಾ ಪ೦ಚಾಯ್ತಿ, ತಾಲ್ಲೂಕು ಹಾಗೂ ಗ್ರಾಮ ಪ೦ಚಾಯ್ತಿಯ ರಾಜಕಾರಣಿಗಳ ಮಾತು.

ಒಮ್ಮೆ ನಕ್ಸಲ್ ಪೀಡೀತ ಪ್ರದೇಶ ಅ೦ತ ರಿಪೋರ್ಟ್ ಆದ್ರೆ ಬಿಡುಗಡೆ ಆಗುವ ಹಣ ಲ೦ಕ್ಷಾ೦ತರ ರೂಪಾಯಿ.ಅದನ್ನ ತಮ್ಮ ಸ್ವಾರ್ಥಕ್ಕೆ ಬಳಸಬಹುದೆ೦ಬ ದೂರದ ಆಸೆ ಇವರಿಗೆ. ಒಟ್ಟಾರೆ ಸಮಸ್ಯೆಯ ಪರಿಹಾರ ಇವರ ಗುರಿ ಅಲ್ಲ.

Leave a Reply

XHTML: You can use these tags: <a href="" title=""> <abbr title=""> <acronym title=""> <b> <blockquote cite=""> <cite> <code> <pre> <del datetime=""> <em> <i> <q cite=""> <strike> <strong>