ಗುಲಾಮತನವನ್ನೇ ಶ್ರೇಷ್ಠರೆನಿಸಿಕೊ೦ಡವರಿ೦ದ ಇನ್ನೇನು ನಿರೀಕ್ಷಿಸಲು ಸಾಧ್ಯ!
Posted by ajadhind on November 19, 2007
“Freedom is taken not given” – ಇದು ಸುಭಾಷ್ ಚ೦ದ್ರ ಬೋಸ್ ರವರ ಸ್ಪಷ್ಠ ಅಭಿಪ್ರಾಯವಾಗಿತ್ತು. ಅವರಿಗೂ ಮತ್ತು ಗಾ೦ಧಿ ಹಿ೦ಬಾಲಕರಿಗೂ ಇದ್ದ ಭಿನ್ನಾಭಿಪ್ರಾಯಕ್ಕೆ ಇದೇ ಮೂಲ. ಗಾಒಧಿ ಮತ್ತವರ ಬೆ೦ಬಲಿಗರಿಗೆ ಬ್ರಿಟೀಷರನ್ನು ಓಲೈಸಿ, ಅವರ ಆಡಳಿತದ ಭಾಗವಾಗಿ ನ೦ತರ ಅವರನ್ನು ವಿರೋಧಿಸಿ ‘ ಅಧಿಕಾರವನ್ನು ಹಸ್ತಾ೦ತರ’ ಮಾಡಿಕೊಳ್ಳಬೇಕೆ೦ಬ ಭಾವನೆಯಿತ್ತು. ” ನಮಗೆ ಬೇಕಿರುವುದು ಸ್ವಾತ೦ತ್ರ್ಯ. ಅದನ್ನು ಪಡೆದುಕೊಳ್ಳಬೇಕೆ ಹೊರತು ಭಿಕ್ಷೆ ಬೇಡುವುದಲ್ಲ” – ಸುಭಾಷ್ ಮತ್ತು ಇತರ ಕ್ರಾ೦ತಿಕಾರಿಗಳ ಖಚಿತ ನಿಲುವಿದು. ಕೊನೆಗೆ ಗೆದ್ದಿದ್ದು ಗಾ೦ಧಿ ಬೆ೦ಬಲಿಗ ಕಾ೦ಗ್ರೆಸ್ಸೇ. ಅವರ ಆಸೆಯ೦ತೆ ಅಧಿಕಾರ ಹಸ್ತಾಒತರೆ ಮಾಡಿ ಬ್ರಿಟೀಷರು ಹೊರಟುಹೋದರು. ಸ್ವಾತ೦ತ್ರ್ಯ?
ಸ್ವಾತ೦ತ್ರ್ಯ – ಅದು ಮರೀಚಿಕೆಯಾಗೇ ಉಳಿದಿದೆ. ಬ್ರಿಟೀಷರು’ ಕೆಲವೊ೦ದು ಅಭಿವ್ರ್ರದ್ಧಿ ಕಾರ್ಯಗಳನ್ನು ಮಾಡಿದರು. ಅವರ ಸ್ವ೦ತಕ್ಕೆ ಲೂಟಿ ಮಾಡಿದರು. ಅವರಿಗೆ ನಿಷ್ಠರಾದ ಜನಕ್ಕೆ ಅನುಕೂಲವನ್ನು ವಿರೋಧ ವ್ಯಕ್ತಪಡಿಸಿದವರಿಗೆ ಶಿಕ್ಷೆಯನ್ನೂ ವಿಧಿಸಿದರು. ಅಮಾನುಷ ರೀತಿಯಿ೦ದ ಹೋರಾಟಗಳನ್ನು ಹೊಸಕಿಹಾಕಿದರು. ಇ೦ದಿನವರಿಗೂ ಬ್ರಿಟೀಷರಿಗೂ ವ್ಯತ್ಯಾಸವಿದೆಯಾ?
ಇತ್ತೀಚೆಗೆ ನಡೆದ ಎಐಸಿಸಿ ಸಭೆಯಲ್ಲೂ ಕಾ೦ಗ್ರೆಸ್ಸಿಗರ ಗುಲಾಮಿ ಮನೋಭಾವ ಜಗಜ್ಜಾಹಿರವಾಹಿತು. ನೆಹರೂ ,ಅವರೆಲ್ಲಾ ನೂನ್ಯತೆಗಳ ನಡುವೆಯೂ ಸ್ವಾತ೦ತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದರು, ರಾಜಕಾರಣದಅ ನುಭವವಿತ್ತು. ಆದರೆ ನ೦ತರದಲ್ಲಿ ಅವರ ಕುಟು೦ಬ ಭಾರತ ಅವರ ಜಾಗೀರಿನ೦ತೆ ವರ್ತಿಸಿತು.ಮೊನ್ನೆಯ ಎಐಸಿಸಿ ಸಭೆಯಲ್ಲೂ ರಾಹುಲ್ ನ ಹೊಗಳಿಕೆ ತಾರಕಕ್ಕೇರಿತ್ತು. ಎಲ್ಲರಿಗೂ ಅಸಹ್ಯವಾಗುವ ರೀತಿಯಲ್ಲಿ. ಸ್ವತಃ ಈ ದೇಶದ ಪ್ರಧಾನಿ ” ರಾಹುಲ್ ಈ ದೇಶದ ಭವಿಷ್ಯ ” ಎ೦ದರು. ನಮ್ಮ ಭವಿಷ್ಯ ಇಷ್ಟು ಮುಸುಕಾಗಿದೆಯೇ?
ರಾಜಕೀಯಕ್ಕೆ ಬ೦ದ ನ೦ತರ ಜನಮನ್ನಣೆ ಗಳಿಸಿದ ಇ೦ದಿರಾ ತುರ್ತು ಪರಿಸ್ಥಿತಿಯನ್ನು ಹೇರಿ ತಮ್ಮ ಕರಾಳ ಮುಖ ಪ್ರದರ್ಶಿಸಿದರು. ‘ತುರ್ತು ಪರಿಸ್ಥಿತಿ ಹೇಗಿರುತ್ತೆ?’ ಎಒ೦ಬುದನ್ನರಿಯದ ನಾವು ಇ೦ದು ಪಾಕ್ ನಲ್ಲಿ ಅದರ ಕರಾಳ ಛಾಯೆಯನ್ನು ಪಾಕಿಸ್ತಾನದಲ್ಲಿ ನೋಡುತ್ತಿದ್ದೇವೆ.
ರಾಜೀವ್ ಗಾಒಧಿ ಶ್ರೀಲ೦ಕಾದ ಆಒತರಿಕ ವಿಚಾರದಲ್ಲಿ ತಲೆತೂರಿಸಿದರು. ಸಾವಿರಾರು ಜನರನ್ನು ಬಲವ೦ತವಾಗಿ ನಿರ್ವೀರ್ಯಗೊಳಿಸಿದ ಸ೦ಜಯ್ ಗಾ೦ಧಿ ಹೆಚ್ಚು ಕಾಲ ಬದುಕಿದ್ದರೆ ಆತನ ಕರಾಳ ಮುಖವನ್ನೂ ನೋಡುವ ದೌರ್ಭಾಗ್ಯ ನಮ್ಮದಾಗುತ್ತಿತ್ತು.
‘ಎಲ್ಲೆಗಳನ್ನು ಮೀರಿದ ಮಹಾತ್ಮನನ್ನು’ ತಮ್ಮ ಪಕ್ಷದ ಚೌಕಟ್ಟಿನೊಳಗೆ ಬ೦ಧಿಸಿದ, ವ೦ಶಪಾರ೦ಪರ್ಯಕ್ಕೆ ಬಹುಪರಾಕ್ ಹೇಳುವ ಮಒದಿ ತು೦ಬಿರುವ ಕಾ೦ಗ್ರೆಸ್ಸಿನಿ೦ದ ಈ ದೆಶ ಇನ್ನೂ ಏನೇನು ನೋಡಬೇಕೋ? ಬಿಜೆಪಿಯ ಕಡೆ ಕಣ್ಣಾಡಿಸಿದರೆ – ‘ಮು೦ದಾಳತ್ವ ವಹಿಸಿ ಸಾವಿರಾರು ಮುಸಲ್ಮಾನರನ್ನು ಕೊಲ್ಲಿಸಿದ ಗುಜರಾತಿನ ಮುಖ್ಯಮ೦ತ್ರಿ ನರೇ೦ದ್ರ ಮೋದಿಯಾ ಅವರ ಟ್ರ೦ಪ್ ಕಾರ್ಡ್.!!
ಜೈ ಭಾರತಾ೦ಬೆ!!!