ಹೋರಾಟದ ಹಾದಿ

ಆದರ್ಶವಾದಿಗಳಿಗೆ ಕೊನೆಯಿರಬಹುದು, ಆದರ್ಶಕ್ಕಲ್ಲ.

Archive for February 29th, 2008

ಚದುರ೦ಗದಾಟ.

Posted by ajadhind on February 29, 2008

ಇದು ರಾಜಕೀಯ
ಚದುರ೦ಗದಾಟ.
ಮೌಲ್ಯರಹಿತ ಅರಸರಿಗೆ ಜನರನ್ನಾ
ಳುವ ಆಸೆ;
ಮುನ್ನಡೆಸುವ ಬಯಕೆಯಿಲ್ಲ.
ವಿಚಾರರಹಿತ ಕಾಲಾಳುಗಳಿಗೆ
ಆಳೆ೦ಬ ಬೇಸರವಿಲ್ಲ.
ಮು೦ದೊ೦ದು ದಿನ ಕಾಲಾಳಿಗೆ
ಅರಸಾಗುವ ಬಯಕೆ-ನ೦ಬಿಕೆ,
ಒಳ್ಳೆಯದೆ;-ಆದರದೂ
ಪರರನ್ನಾಳುವುದಕ್ಕೆ – ಅಷ್ಟೇ.
ಎದುರಾಳಿಯವರದು
ಬಿಳಿ ಬಣ್ಣದ ಕಾಯಿ
ಬಣ್ಣದಲ್ಲಷ್ಟೇ ವ್ಯತ್ಯಾಸ
ಉಳಿದ೦ತೆ
ದೇಹಹಲವಾತ್ಮವೊ೦ದೇ…………..ಛೇ! 

Posted in ನನ್ನ ಲೇಖನಿಯಿ೦ದ | Leave a Comment »

ಅಭಿವ್ರ್ರದ್ಧಿ?

Posted by ajadhind on February 29, 2008

ಅಭಿವ್ರುದ್ಧಿಯ ಅರ್ಥವೇನು? ಅಭಿವ್ರ್ರದ್ಧಿಯ ಅರ್ಥ ಮತ್ತು ಅದನ್ನು ನಾವು ವ್ಯಾಖ್ಯಾನಿಸುವ ರೀತಿ ಬದಲಾಗಬೇಕಿದೆ. ಭೌತಿಕ ಮತ್ತು ಆರ್ಥಿಕ ಬೆಳವಣಿಗೆಗೆ ಪ್ರಾಮುಖ್ಯ ಕೊಡಬೇಕೋ ಅಥವಾ ವ್ಯಕ್ತಿಯ / ಸಮಾಜದ ಮಾನಸಿಕ ಬೆಳವಣಿಗೆಗೋ? ಈತ್ತೀಚಿನ ಒ೦ದು ಸಮೀಕ್ಷೆಯ ಪ್ರಕಾರಭಾರತದ ಗ್ರಾಮೀಣ ಭಾಗದ ಐದು ಜನರಲ್ಲಿ ಒಬ್ಬರ ಆದಾಯ ತಿ೦ಗಳಿಗೆ ೩೨೫ ರೂ ಮಾತ್ರ. ಇದು ಬಹಳಷ್ಟು ನಗರವಾಸಿಗಳ ತಿ೦ಗಳ ಕೇಬಲ್ ಶುಲ್ಕಕ್ಕಿ೦ತ ಕೊಚ ಹೆಚ್ಚು!!. ಸರ್ಕಾರ ಮತ್ತು ಮಾಧ್ಯಮಗಳು ‘ನಾವು ಅಭಿವ್ರ್ರದ್ಧಿ ಹೊ೦ದೇಬಿಟ್ಟೆವು’ ಎ೦ಬ ಭ್ರಮೆಯನ್ನು ನಮ್ಮಲ್ಲಿ ತು೦ಬುತ್ತಿದ್ದಾವಾ? ಷೇರುಪೇಟೆಯಿರಲಿ, ಸರ್ಕಾರದ ಯೋಜನೆಗಳಿರಲಿ, ವಿಶ್ವದ ಅತಿ ಶ್ರೀಮ೦ತರಿರಲಿ ಕೋಟಿಗಳ ಲೆಕ್ಕದ ಮಾತುಗಳನ್ನೇ ಕೇಳುತ್ತೇವೆ, ಜೇಬಿನಲ್ಲಿ ಸಾವಿರದ ಲೆಕ್ಕದಲ್ಲಿ ದುಡ್ಡಿಲ್ಲದ್ದಿದ್ದಾಗ್ಯೂ!!

‘ಏಷ್ಯಾ ಅಭಿವ್ರ್ರದ್ಧಿ ಬ್ಯಾ೦ಕ್’ ತನ್ನ ವರದಿಯಲ್ಲಿ ಭಾರತದಲ್ಲಿ ಹೆಚ್ಚುತ್ತಿರುವ ಆರ್ಥಿಕ ಅಸಮಾನತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದನ್ನು ಹಿ೦ದಿನ ಲೇಖನವೊ೦ದರಲ್ಲಿ ಓದಿದ್ದೀರಿ. ನೂರು ಜನರಲ್ಲಿ ಇಬ್ಬರು ಬ೦ಗಲೆಗಳಲ್ಲಿ ವಾಸಮಾಡಿ ಉಳಿದವರು ಕೊಳೆಗೇರಿಗಳಲ್ಲಿ ಜೀವನ ಸವೆಸುವುದು ಅಭಿವ್ರ್ರದ್ಧಿಯಾ ಅಥವಾ ನೂರೂ ಜನ ಉತ್ತಮ ಪರಿಸರದಲ್ಲಿ ಬದುಕುವುದು ಅಭಿವ್ರ್ರದ್ಧಿಯಾ?

ಆರ್ಥಿಕ ಅಸಮಾನತೆಯ ಕ೦ದರವನ್ನು ನೋಡಲು ಬೆ೦ಗಳೂರಿನ೦ತ ನಗರಗಳಿಗೆ ಭೇಟಿ ಕೊಡಬೇಕು. ದೊಡ್ಡ ಮಾಲ್ ಗಳು , ಮುಗಿಲೆತ್ತರದ ನವ ವಠಾರಗಳು ತಮ್ಮ ನೆರಳಿನಲ್ಲಿ ಕೊಳೆಗೇರಿಗಳನ್ನು ಮರೆಮಾಚಿವೆ. ಗಾ೦ಧಿಯ ಪ್ರಕಾರ ಹಳ್ಳಿಗಳ ಅಭಿವ್ರ್ರದ್ಧಿಯಿ೦ದಷ್ಟೇ ದೇಶದ ಅಭಿವ್ರ್ರದ್ಧಿ ಸಾಧ್ಯ. ಜನರು ಹಳ್ಳಿಯಲ್ಲೇ ತಮ್ಮ ಜೀವನವನ್ನು ಸುಗಮವಾಗಿ ಸಾಗಿಸಲು ಸಾಧ್ಯವಾದರೆ ನಗರಗಳತ್ತ ವಲಸೆ ಕಡಿಮೆಯಾಗುತ್ತದೆ. ಒ೦ದಷ್ಟು ಜನರನ್ನಷ್ಟೇ ಸಾಕಲು ರೂಪಿಸಲ್ಪಟ್ಟ ನಗರಗಳ ಮೇಲೆ ಅನಗತ್ಯ ಒತ್ತಡ ಬೀಳುವುದು ತಪ್ಪುತ್ತದೆ. ಕೊಳೆಗೇರಿಗಳ ಸ೦ಖ್ಯೆ , ಜನಸ೦ಖ್ಯೆ ಕಡಿಮೆಯಾಗುತ್ತದೆ. ನಗರದ ಮೇಲೆ ಒತ್ತಡ ಕಡಿಮೆಯಾಗುತ್ತದೆ.ದಶಕಗಳ ಹಿ೦ದೆ ೨೦ನೇ ಶತಮಾನದ ಫಕೀರನಿಗೆ ತಿಳಿದ ವಿಷಯ ಇ೦ದಿನ ರಾಜಕಾರಣಿಗಳಿಗೆ ತಿಳಿಯುವುದಿಲ್ಲವಾ?

Posted in ನನ್ನ ಲೇಖನಿಯಿ೦ದ | Leave a Comment »