Archive for April, 2008
ನಂದಿಗ್ರಾಮದಲ್ಲಿ ಮತ್ತೆ ಹಿಂಸಾಚಾರ.
Posted by ajadhind on April 21, 2008
Posted in ಪ್ರಸ್ತುತ | Leave a Comment »
ತಮಿಳುನಾಡಿನಲ್ಲಿ ನಕ್ಸಲೀಯನ ಸಾವು.
Posted by ajadhind on April 21, 2008
Posted in ತಮಿಳುನಾಡು, ನಕ್ಸಲಿಸ೦ | Leave a Comment »
ಇದು ಪ್ರಜಾಪ್ರಭುತ್ವವೆಂದಾದರೆ ಅದನ್ನು ತಿರಸ್ಕರಿಸುವ ಜರೂರತ್ತಿದೆ.
Posted by ajadhind on April 16, 2008
ಕರ್ನಾಟಕದಲ್ಲೀಗ ಚುನಾವಣೆ ಸಮಯ. ಪತ್ರಿಕಾ ಮತ್ತು ದ್ರಶ್ಯ ಮಾಧ್ಯಮಗಳಲೆಲ್ಲ ಪ್ರಣಾಳಿಕೆ, ಭರವಸೆ ಪರಸ್ಪರ ದೋಷಾರೂಪಣೆಯದೇ ವಿಷಯ. ಹಲವೆಡೆ ಸೀರೆ ಹ0ಚುವಿಕೆ, ಬಾಡೂಟದ ಘಮ; ಹಣ ಹೆಂಡದ ಹಂಚುವಿಕೆಯ ಬಗ್ಗೆ ಹೇಳುವುದೇ ಬೇಡ. ಬಿಜೆಪಿಯ ಮುಂಖಡರೊಬ್ಬರು ಹೇಳಿದಂತೆ ಐವತ್ತು ಲಕ್ಷ ಹೊದಿಸಲು ಸಾಧ್ಯವಾಗದ್ದಕ್ಕೆ ಅವರಿಗೆ ಸ್ಪರ್ಧಿಸುವ ಅವಕಾಶದಿಂದ ವಂಚಿತರಾಗಿದ್ದಾರಂತೆ. ಗಣಿ ಧಣಿಗಳು ಲಕಷಗಟ್ಟಲೆ ಸುರಿದು ಟಿಕೇಟ್ ಖರೀದಿಸುತ್ತಿದ್ದಾರೆ.
ಚುನಾವಣೆಗೆ ನಿಂತವರು ಹಣವನ್ನು ಕಸಕ್ಕಿಂತಲೂ ಕಡೆಯಾಗಿ ಕಾಣುತ್ತಾರೆ. ಮುನ್ನೂರು ರೂಪಾಯಿ ,ಒಂದು ಸೀರೆ , ಪಂಚೆ ಕೊಟ್ಟು ವೋಟನ್ನು “ಖರೀದಿಸುತ್ತಾರೆ”. ಇದು ಪ್ರಜಾಪ್ರಭುತ್ವವಾ? ಇದೊದು ಅಪ್ಪಟ ವ್ಯಾಪಾರ. ಕೆಳಮಧ್ಯಮ ಮತ್ತು ಕೆಳವರ್ಗದ ಮತಗಳು ಚುನಾವಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಸ್ಪರ್ಧಿಗಳು [ವ್ಯಾಪಾರಿಗಳು] ಹಣವನ್ನು ಹಂಚಿ ಮತವನ್ನು ಖರೀದಿಸುತ್ತಾರೆ. ಹಣ ಪಡೆದು ಮತ ಹಾಕುವ ಜನರಿಗೂ ನಮ್ಮಲ್ಲಿ ಕೊರತೆಯಿಲ್ಲ. ಹಣ ಪಧೆಯದ ಜನರಿಗೆ ನಾಲ್ವರು ಕಳ್ಳರಲ್ಲಿ ಒಬ್ಬರನ್ನು ಆರಿಸುವ ಅನಿವಾರ್ಯತೆ! ಗೆದ್ದವನಿಗೆ ಹಾಕಿದ ಬಂಡವಾಳವನ್ನು ವಾಪಸ್ಸು ಪಡೆಯುವ ಯೋಚನೆ ಇರುತ್ತದೆಯೇ ಹೊರತು ಜನರ ಸ್ಥಿತಿಗತಿಗಳನ್ನು ಉತ್ತಮಪಡಿಸುವ ಯೋಚನೆಯಿರುವುದಿಲ್ಲ.
ಪ್ರಜಾಪ್ರಭುತ್ವವನ್ನು ಬಲವಾಗಿ ಪ್ರತಿಪಾದಿಸುವವರು ಭಾರತದಲ್ಲಿ ಅಧಿಃಪತನದತ್ತ ಸಾಗುತ್ತಿರುವ ಚುನಾವಣೆ ಮತ್ತು ರಾಜಕೀಯ ಮೌಲ್ಯಗಳತ್ತ ಗಮನಹರಿಸಬೇಕು. ಜಾತಿ, ಧರ್ಮ, ಹಣ, ಹೆಂಡದ ಆಧಾರದಲ್ಲಿ ಮತ ಹಾಕುವವರಿರುವಾಗ ಪ್ರಜಾಪ್ರಭುತ್ವಕ್ಕೆ ಅರ್ಥವಿರುತ್ತದೆಯಾ? ಇದೇ ನಿಜವಾದ ಪ್ರಜಾಪ್ರಭುತ್ವವೆಂದಾದರೆ ಅದನ್ನು ತಿರಸ್ಕರಿಸಬೇಕಾದ ಜರೂರತ್ತು ಹಿಂದೆಂದಿಗಿಂತಲೂ ಹೆಚ್ಚಾಗಿದೆ.
Posted in ನನ್ನ ಲೇಖನಿಯಿ೦ದ | Leave a Comment »
ಕ್ಯೂಬಾ ಮತ್ತು ಭಾರತ.
Posted by ajadhind on April 9, 2008
ಆ ದೇಶದ ಸಾಕ್ಷರತಾ ಪ್ರಮಾಣ ೧೦೦ರ ಸಮೀಪವಿದೆ, ಜಗತ್ತಿನಲ್ಲೇ ಶೇಕಡವಾರು ಅತಿ ಹೆಚ್ಚು ವೈದ್ಯರು ಪ್ರತಿ ವರ್ಷ ಹೊರಬರುತ್ತಿರುವ ದೇಶವದು; ಅಲ್ಲಿ ದೇಶ ಮುನ್ನಡೆಸುವವರ ಮೊದಲ ಆದ್ಯತೆ ಶಿಕ್ಷಣ , ವೈದ್ಯಕೀಯ ಸೌಲಭ್ಯ, ಪ್ರಜೆಗಳಿಗೆ ಅದರಲ್ಲೂ ಮಕ್ಕಳಿಗೆ ಉತ್ತಮ ಆಹಾರ – ಆ ದೇಶದಲ್ಲಿ ಪೌಷ್ಟಿಕಾ೦ಶದಿ೦ದ ನರಳುವವರ ಸ೦ಕ್ಯೆ ಅತಿ ಕಡಿಮೆ!!
ಭಾರತದ ಸಾಕ್ಷರತೆಯ ಪ್ರಮಾಣ ೬೦ರ್ ಆಸುಪಾಸಿನಲ್ಲಿ , ಇನ್ನೂ ಲಕ್ಷ ವೈದ್ಯರ ಕೊರತೆಯಿದೆ ನಮ್ಮಲ್ಲಿ , ಪೌಷ್ಟಿಕಾ೦ಷದ ಕೊರತೆ ನಿಮಗೇ ತಿಳಿದಿದೆ – ಮೇಲೆ ತಿಳಿಸಿದ ವಿಷ್ಯಗಳಿರುವದು ಕ್ಯೂಬಾ ಎ೦ಬ ಪುಟ್ಟ ದೇಶದಲ್ಲಿ – ಎರಡರಲ್ಲಿ ನಿಜವಾದ ಅಭಿವ್ರ್ರದ್ಧಿ ಯಾವುದು?
ಅಮೆರಿಕಾದ ದಿಗ್ಭ೦ಧನಗಳನ್ನು ಮೀರಿ ಬೆಳೆದ ದೇಶ ಕೂಬಾ, ಅಮೆರಿಕಾದಲ್ಲಿ ಚ೦ಡಮಾರುತ ಉ೦ಟಾದಾಗ ಅಲ್ಲಿಗೂ ತನ್ನ ವೈದ್ಯರನ್ನು ಕಳಿಸಿ ಮಾನವೀಯತೆಯೇ ಮುಖ್ಯವಾದುದು ಎ೦ದು ತೋರಿಸಿದ್ದು ಕ್ಯಾಸ್ಟ್ರೊ . ಕ್ಯಾಪಿಟಲಿಸ್ಟ್ ಆದರೆ ಕೇವಲ ಕೊಳ್ಳುವುದು ಮತ್ತು ಮಾರುವುದರ ಬಗ್ಗೆಯಷ್ಟೇ ಯೋಚಿಸಬೇಕಾಗುತ್ತದೆ ಎ೦ದವರವರು.
ನಮಗೆ ನಿಜವಾಗಿಯೂ ಎ೦ಥ ಅಭಿವ್ರ್ರದ್ಧಿ ಬೇಕು?
Posted in ನನ್ನ ಲೇಖನಿಯಿ೦ದ | Leave a Comment »
ದ೦ಡಿ ಸತ್ಯಾಗ್ರಹ ನಡೆದ ನಾಡಿನಲ್ಲಿ ಉಪ್ಪಿಗೂ ಬರ!!
Posted by ajadhind on April 9, 2008
ಆಧಾರ: ಪ್ರಜಾವಾಣಿ
Posted in ಕರ್ನಾಟಕ, ಪ್ರಸ್ತುತ | Leave a Comment »



