ಇದು ಪ್ರಜಾಪ್ರಭುತ್ವವೆಂದಾದರೆ ಅದನ್ನು ತಿರಸ್ಕರಿಸುವ ಜರೂರತ್ತಿದೆ.
Posted by ajadhind on April 16, 2008
ಕರ್ನಾಟಕದಲ್ಲೀಗ ಚುನಾವಣೆ ಸಮಯ. ಪತ್ರಿಕಾ ಮತ್ತು ದ್ರಶ್ಯ ಮಾಧ್ಯಮಗಳಲೆಲ್ಲ ಪ್ರಣಾಳಿಕೆ, ಭರವಸೆ ಪರಸ್ಪರ ದೋಷಾರೂಪಣೆಯದೇ ವಿಷಯ. ಹಲವೆಡೆ ಸೀರೆ ಹ0ಚುವಿಕೆ, ಬಾಡೂಟದ ಘಮ; ಹಣ ಹೆಂಡದ ಹಂಚುವಿಕೆಯ ಬಗ್ಗೆ ಹೇಳುವುದೇ ಬೇಡ. ಬಿಜೆಪಿಯ ಮುಂಖಡರೊಬ್ಬರು ಹೇಳಿದಂತೆ ಐವತ್ತು ಲಕ್ಷ ಹೊದಿಸಲು ಸಾಧ್ಯವಾಗದ್ದಕ್ಕೆ ಅವರಿಗೆ ಸ್ಪರ್ಧಿಸುವ ಅವಕಾಶದಿಂದ ವಂಚಿತರಾಗಿದ್ದಾರಂತೆ. ಗಣಿ ಧಣಿಗಳು ಲಕಷಗಟ್ಟಲೆ ಸುರಿದು ಟಿಕೇಟ್ ಖರೀದಿಸುತ್ತಿದ್ದಾರೆ.
ಚುನಾವಣೆಗೆ ನಿಂತವರು ಹಣವನ್ನು ಕಸಕ್ಕಿಂತಲೂ ಕಡೆಯಾಗಿ ಕಾಣುತ್ತಾರೆ. ಮುನ್ನೂರು ರೂಪಾಯಿ ,ಒಂದು ಸೀರೆ , ಪಂಚೆ ಕೊಟ್ಟು ವೋಟನ್ನು “ಖರೀದಿಸುತ್ತಾರೆ”. ಇದು ಪ್ರಜಾಪ್ರಭುತ್ವವಾ? ಇದೊದು ಅಪ್ಪಟ ವ್ಯಾಪಾರ. ಕೆಳಮಧ್ಯಮ ಮತ್ತು ಕೆಳವರ್ಗದ ಮತಗಳು ಚುನಾವಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಸ್ಪರ್ಧಿಗಳು [ವ್ಯಾಪಾರಿಗಳು] ಹಣವನ್ನು ಹಂಚಿ ಮತವನ್ನು ಖರೀದಿಸುತ್ತಾರೆ. ಹಣ ಪಡೆದು ಮತ ಹಾಕುವ ಜನರಿಗೂ ನಮ್ಮಲ್ಲಿ ಕೊರತೆಯಿಲ್ಲ. ಹಣ ಪಧೆಯದ ಜನರಿಗೆ ನಾಲ್ವರು ಕಳ್ಳರಲ್ಲಿ ಒಬ್ಬರನ್ನು ಆರಿಸುವ ಅನಿವಾರ್ಯತೆ! ಗೆದ್ದವನಿಗೆ ಹಾಕಿದ ಬಂಡವಾಳವನ್ನು ವಾಪಸ್ಸು ಪಡೆಯುವ ಯೋಚನೆ ಇರುತ್ತದೆಯೇ ಹೊರತು ಜನರ ಸ್ಥಿತಿಗತಿಗಳನ್ನು ಉತ್ತಮಪಡಿಸುವ ಯೋಚನೆಯಿರುವುದಿಲ್ಲ.
ಪ್ರಜಾಪ್ರಭುತ್ವವನ್ನು ಬಲವಾಗಿ ಪ್ರತಿಪಾದಿಸುವವರು ಭಾರತದಲ್ಲಿ ಅಧಿಃಪತನದತ್ತ ಸಾಗುತ್ತಿರುವ ಚುನಾವಣೆ ಮತ್ತು ರಾಜಕೀಯ ಮೌಲ್ಯಗಳತ್ತ ಗಮನಹರಿಸಬೇಕು. ಜಾತಿ, ಧರ್ಮ, ಹಣ, ಹೆಂಡದ ಆಧಾರದಲ್ಲಿ ಮತ ಹಾಕುವವರಿರುವಾಗ ಪ್ರಜಾಪ್ರಭುತ್ವಕ್ಕೆ ಅರ್ಥವಿರುತ್ತದೆಯಾ? ಇದೇ ನಿಜವಾದ ಪ್ರಜಾಪ್ರಭುತ್ವವೆಂದಾದರೆ ಅದನ್ನು ತಿರಸ್ಕರಿಸಬೇಕಾದ ಜರೂರತ್ತು ಹಿಂದೆಂದಿಗಿಂತಲೂ ಹೆಚ್ಚಾಗಿದೆ.