Posted by ajadhind on March 31, 2009
ಯಾರಿಗೆ ಬಂತು
ಎಲ್ಲಿಗೆ ಬಂತು
ನಲವತ್ತೇಳರ ಸ್ವಾತಂತ್ರ್ಯ?
ಅವರ ಕುರ್ಚಿಯಲಿ
ಇವರು ಕುಳಿತರು
ಯಾರಿಗೆ ಬಂತು ಸ್ವಾತಂತ್ರ್ಯ?
ಕೆಂಪು ಕೋಟೆಯಲಿ
ಬದಲಾಯಿತು ಬಾವುಟ
ಬಾವುಟವಷ್ಟೇ ಬದುಕಲ್ಲ!!
ಗರಿ ಗರಿ ನೋಟಿನ
ಪರಿಮಳದಲ್ಲಿ
ರೊಟ್ಟಿ ತಟ್ಟಲೂ ಹಿಟ್ಟಿಲ್ಲ.
ಪಬ್ಬು ದಿಸ್ಕೋಗಳ
ಗೊಂದಲದಲ್ಲಿ ಮಬ್ಬಾಗಿ
ಹೋದವರ ಲೆಕ್ಕಿಲ್ಲ.
ಒಂದು ಓಟಿಗೆ
ಸಾವಿರವಂತೆ
ಎಲ್ಲಿಗೆ ಬಂತು ಸ್ವಾತಂತ್ರ್ಯ?
Posted in ನನ್ನ ಲೇಖನಿಯಿ೦ದ | Tagged: independence, kavite | Leave a Comment »
Posted by ajadhind on March 27, 2009
Posted in ಕರ್ನಾಟಕ, ನಕ್ಸಲಿಸ೦, ಪತ್ರಿಕಾ ಪ್ರಕಟಣೆ | Leave a Comment »
Posted by ajadhind on March 27, 2009
Posted in ಪತ್ರಿಕಾ ಪ್ರಕಟಣೆ | Leave a Comment »
Posted by ajadhind on March 27, 2009
Posted in ಕರ್ನಾಟಕ, ನಕ್ಸಲಿಸ೦, ಪತ್ರಿಕಾ ಪ್ರಕಟಣೆ | Leave a Comment »
Posted by ajadhind on March 27, 2009
Posted in ಪತ್ರಿಕಾ ಪ್ರಕಟಣೆ, ಪ್ರಸ್ತುತ | Tagged: bjp, sriramasene, vhp | Leave a Comment »
Posted by ajadhind on March 7, 2009
ಶೃಂಗೇರಿ ತಾಲ್ಲುಕಿನ ನೆಮ್ಮಾರು ಗ್ರಾಮ ಪಂಚಾಯ್ತಿಯ ಬುಕ್ಕಡಿಬೈಲಿನಲ್ಲಿ ಗುರುವಾರ ರಾತ್ರಿ ಬಿ.ಜಿ.ಕೃಷ್ಣಮೂರ್ತಿ ನೇತ್ರತ್ವದ ನಕ್ಸಲರ ತಂಡ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಬಹಿರಂಗ ಸಭೆ ನಡೆಸಿದೆ.
ಪಶ್ಚಿಮ ಘಟ್ಟದಲ್ಲಿ ನಕ್ಸಲೀಯ ಚಟುವಟಿಕೆ ಆರಂಭಗೊಂಡ ನಂತರ ಇದೇ ಪ್ರಥಮ ಬಾರಿಗೆ ನಕ್ಸಲರು ಇಂತಹ ಬಹಿರಂಗ ಸಭೆ ನಡೆಸಿದ್ದು, ಇದರ ಮೂಲಕ ಮಲೆನಾಡು ಭಾಗದಲ್ಲಿನ ತಮ್ಮ ಪ್ರಾಬಲ್ಯವನ್ನು ಪ್ರದರ್ಶಿಸಿದಂತಾಗಿದೆ.
ಗುರುವಾರ ಸಂಜೆ ೬.೩೦ ರ ಸುಮಾರಿಗೆ ನಕ್ಸಲ್ ನಾಯಕ ಬಿ.ಜಿ.ಕೃಷ್ಣಮೂರ್ತಿ , ಮಂದಗಾರು ಲತಾ, ಹೊಸಗದ್ದೆ ಪ್ರಭಾ ಒಳಗೊಂಡಂತೆ ೧೩ ಜನರ ಶಸ್ತ್ರಸಜ್ಜಿತ ತಂಡ ಬುಕ್ಕಡಿಬೈಲಿಗೆ ಭೇಟಿ ನೀಡಿ ಅಲ್ಲಿನ ಮನೆಮನೆಗೆ ತೆರಳಿ ಸಭೆಗೆ ಬರುವಂತೆ ಸೂಚಿಸಿದ್ದಾರೆ. ನಂತರ ಆರಂಭಗೊಂಡ ಸಭೆಯಲ್ಲಿ ಬಿ.ಜಿ. ಕೃಷ್ಣಮೂರ್ತಿ ಮಾತನ್ನಾಡಿ ಪಿ.ವಿ ನರಸಿಂಹರಾವ್ ಕಾಲದಿಂದ ಆರಂಭಗೊಂಡು ಈಗಿನವರೆಗಿನ ಕೇಂದ್ರ ಸರಕಾರದ ನೀತಿಗಳನ್ನು ಬಲವಾಗಿ ಖಂಡಿಸುವುದರೊಂದಿಗೆ ರಾಜ್ಯ ಸರಕಾರದ ನಿಲುವುಗಳ ವಿರುದ್ಧವೂ ಕಿಡಿಕಾರಿದ್ದಾಗಿ ತಿಳಿದುಬಂದಿದೆ.
ಸಭೆಯಲ್ಲಿ ಇದರ ಕುರಿತು ಕ್ರಾಂತಿಗೀತೆಗಳನ್ನು ಹಾಡಿ, ಕರಪತ್ರಗಳನ್ನು ಹಂಚಲಾಗಿದೆ. ತಮ್ಮ ಹೋರಾಟವನ್ನು ಬೆಂಬಲಿಸುವಂತೆ ಕರೆನೀಡಿ ಹಳ್ಳಿಬಿದರಗೊಡಿನಲ್ಲಿ ಇತ್ತೀಚಿಗೆ ಮನೆಯೊಂದಕ್ಕೆ ಬೆಂಕಿ ಹಚ್ಚಿದ ಪ್ರಕರಣವನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.
ಪೂರ್ಣ ವಿವರಳಿಗೆ ಇಲ್ಲಿ ಕ್ಲಿಕ್ ಮಾಡಿ.
Posted in ಕರ್ನಾಟಕ, ನಕ್ಸಲಿಸ೦ | Leave a Comment »