ಇಂತಹದೊಂದು ಪ್ರಜಾಪ್ರಭುತ್ವದಲ್ಲಿ ನಾವು ಭಾಗಿಯಾಗದೆ ಸಶಸ್ತ್ರ ಕ್ರಾಂತಿ ಮಾಡಲು ಹೊರಟಿರುವುದಕ್ಕೆ ಕ್ಷಮೆ ಕೇಳಬೇಕೆ?

Archive for the ‘ಕರ್ನಾಟಕ’ Category
ಇದು ನಮ್ಮ ಪ್ರಜಾಪ್ರಭುತ್ವ?!
Posted by ajadhind on October 12, 2010
Posted in ಇನ್ನೊಂದು ಮುಖ, ಕರ್ನಾಟಕ, ಪ್ರಸ್ತುತ | Leave a Comment »
ಪೋಲೀಸ್ ‘ಮಹಾನ್’ ನಿರ್ದೇಶಕರಿಗೊಂದು ಪತ್ರ
Posted by ajadhind on September 4, 2010
“ಕೆಲವು ವ್ಯಕ್ತಿಗಳು ಅಮಾಯಕರಿಗೆ ದುರ್ಭೋದನೆ ಮಾಡಿ ಎಡಪಂಥೀಯ ಉಗ್ರವಾದದೆಡೆಗೆ ಸೆಳೆಯುತ್ತಿದ್ದಾರೆ” ಎಂದು ನೀವು ಹೇಳಿರುವುದಾಗಿ ವರದಿಯಾಗಿದೆ. ಬಹಳ ಸತ್ಯವಾದ ನುಡಿಮುತ್ತುದುರಿಸಿದ್ದೀರಿ. ಆಹಾ! ಇಂಥ ಒಬ್ಬ ಪೋಲೀಸ್ ಮಹಾನಿರ್ದೇಶಕ ಇಷ್ಥು ದಿನ ಎಲ್ಲಿ ಹೋಗಿದ್ದರು? ಎಂದೆನಿಸುತ್ತಿದೆ.
ಬರೀ ಸ್ವತಂತ್ರ್ಯದಿಂದ ಪ್ರಯೋಜನವಿಲ್ಲ, ಸಮತಾ ಸಮಾಜ ನಮ್ಮ ಕನಸಾಗಬೇಕು ಎಂದ ಭಗತ್ ಸಿಂಗ್, ಗ್ರಾಮಗಳ ಅಭಿವ್ರದ್ಧಿಯೇ ನಿಜವಾದ ಅಭಿವ್ರದ್ಧಿ ಎಂದ ಗಾಂಧಿ. ಇವರ ಮಾತುಗಳೆಲ್ಲ ದುರ್ಭೋಧನೆ ಎಂದು ನಮಗೆ ತಿಳಿಯದೆ ಹೋಯಿತಲ್ಲ ಎಂದು ದುಃಖವಾಗುತ್ತಿದೆ. ದುರ್ಭೋದಕರ ಸಂತತಿ ಇನ್ನು ನಶಿಸಿಲ್ಲ. ದೇಶದ ಸಂಪತ್ತನ್ನು ಲೂಟಿಗೈಯ್ಯುವವರ ಬಗ್ಗೆ ಪುಂಖಾನುಪುಂಖವಾಗಿ ಬರೆಯುವ ಪತ್ರಕರ್ತರು, ಹನ್ನೆರಡು ವರ್ಷದ ಅವಧಿಯಲ್ಲಿ ಮೃತ್ಯುವಿನ ಕುಣಿಕೆಗೆ ಜೋತುಬಿದ್ದ ಕೇವಲ ಒಂದೂವರೆ ಲಕ್ಷ ರೈತರ ಬಗ್ಗೆ ಬರೆದು ನಮ್ಮ ತಲೆಗೆ ದುರ್ಭೋಧನೆ ಬಿತ್ತುವ ಪಿ.ಸಾಯಿನಾಥ್ ರಂತವರ ವಿರುದ್ಧ ನೀವು ಕ್ರಮ ಕೈಗೊಂಡಲ್ಲಿ ಬಹಳ ಉಪಕಾರವಾಗುತ್ತೆ.
ಮುಸ್ಲಿಮರ ಕೈಕಡಿಯುವೆವೆಂದು ಅಬ್ಬರಿಸುವವರು, ಹಿಂದೂಗಳ ನಾಲಿಗೆ ಸೀಳಿ ಎಂದು ಉಪದೇಶಿಸುವವರು, ಕ್ರೈಸ್ತ ಪ್ರಾಧ್ಯಾಪಕರ ಕೈ ಕತ್ತರಿಸಿದವರು, ಜಾತಿಯ ಹೆಸರಿನಲ್ಲಿ ಮರ್ಯಾದ ಹತ್ಯೆ ನಡೆಸುವವರು, ಬುರ್ಖಾ ಪರ ವಿರೋಧವಾಗಿ ಚಳುವಳಿ ನಡೆಸುವವರು, ನಗರ ಸ್ವಚ್ಚಗೊಳಿಸಲು ರಸ್ತೆಯಲ್ಲೇ ಹೋಮ ಹವನ ನಡೆಸುವವರು – ಇಂಥವರ ಸಂಖ್ಯೆ ಹೆಚ್ಚಾಗಲಿ. ಈ ಸಂತತಿಯವರ ಸುಭೋದನೆಯಿಂದ ನಾವು ಕೂಡ ಸಮ ಸಮಾಜ, ಭ್ರಷ್ಥಾಚಾರ ಮುಕ್ತ ಸಮಾಜದ ಕನಸು ಮರೆತು ಜಾತಿ ಮತ ಧರ್ಮ ಭಾಷೆ ಪ್ರಾಂತ್ಯದ ಅಮಲಿನಲ್ಲಿ ತೇಲುತ್ತಾ ಚಿಕ್ಕಪುಟ್ಟ ಕೆಲಸಗಳಿಗೂ ಸರ್ವರಿಗೂ ಲಂಚವೆಂಬ ಶ್ರೇಷ್ಠ ಪದಾರ್ಥವನ್ನು ಕೊಡುತ್ತಾ ಪ್ರಜಾಪ್ರಭುತ್ವದ ಚುನಾವಣೆಗಳಲ್ಲಿ ಪ್ರಭುಗಳಿಂದ ಹಣ ಸ್ವೀಕರಿಸಿ, ಹೆಚ್ಚು ಹಣ ಕೊಟ್ಟವರಿಗೆ ವೋಟು ಮಾರಿ ಅವರನ್ನು ಗೆಲ್ಲಿಸಿ ನಂತರ ಆ ಪ್ರಭುಗಳು ಪ್ರಜೆಗಳಿಗೆ ಮಾಡುವ ಅನ್ಯಾಯ, ದೇಶದ ಮೇಲೆ ಮಾಡುವ ಸವಾರಿಯನ್ನು ನೋಡುತ್ತಾ ಆನಂದಿಸುವುದರಲ್ಲಿ ಎಂಥ ಸುಖವಿದೆಯಲ್ಲವೇ? ಮಾನ್ಯ ಪೋಲೀಸ್ ಮಹಾನಿರ್ದೇಶಕರು ಇಂಥ ಸುಭೋದಕರ ಸಂಖ್ಯೆಯನ್ನು ಹೆಚ್ಚಿಸುವುದರ ಕಡೆಗೆ ಗಮನ ಹರಿಸಬೇಕೆಂದು ಈ ಮೂಲಕ ವಿನಂತಿಮಾಡುತ್ತಿದ್ದೇನೆ.
ಎಲ್ಲಕ್ಕಿಂತ ಮೊದಲು ರಾಜ್ಯದ ಪೋಲೀಸರು ಪ್ರತಿ ಕೇಸಿಗೆ average 2,100 ರುಪಾಯಿ ಪಡೆಯುತ್ತಾರೆ ಎಂದು ಅಧ್ಯಯನ ಮಾಡಿದವರಿಗೆ ತಕ್ಕ ಶಿಕ್ಷೆ ಕೊಡಬೇಕಾಗಿ ನಮ್ಮ ಆಗ್ರಹ.
ಇಂತಿ,
‘ದುರ್ಭೋದಕರ ನಡುವೆ ಸಿಕ್ಕಿಹಾಕಿಕೊಂಡಿರುವ ಅಮಾಯಕ’
Posted in ಕರ್ನಾಟಕ, ಪತ್ರಿಕಾ ಪ್ರಕಟಣೆ | Tagged: ajaykumar singh, karnataka police | Leave a Comment »
ತಲೆಯ ಮೇಲೆ ಮಲ ಸುರಿದುಕೊಂಡರು
Posted by ajadhind on July 21, 2010
Posted in ಇನ್ನೊಂದು ಮುಖ, ಕರ್ನಾಟಕ | Tagged: PRAJAVANI | Leave a Comment »
ಕರ್ನಾಟಕದ ಗೃಹ ಮಂತ್ರಿಗೊಂದು ಪತ್ರ.
Posted by ajadhind on June 23, 2010
” ಕರ್ನಾಟಕದಲ್ಲಿ ಈಗ ನಕ್ಸಲರು ಇಲ್ಲ. ನಕ್ಸಲ್ ಚಟುವಟಿಕೆಯನ್ನು ಸಂಪೂರ್ಣವಾಗಿ ನಿರ್ನಾಮ ಮಾಡಿದ್ದೇವೆ. ನಕ್ಸಲ್ ಪೀಡಿತ ಪಟ್ಟಿಯಿಂದ ಕರ್ನಾಟಕ ಹೊರಕ್ಕೆ.” – ಗೃಹ ಸಚಿವ ವಿ.ಎಸ್.ಆಚಾರ್ಯ.
ನಕ್ಸಲರೆಂದರೆ ಕಾಡಿನಲ್ಲಿದ್ದು ಬಂದೂಕು ಹಿಡಿದಿರುವವರು ಮಾತ್ರ ಎಂದು ತಿಳಿದವರಿಂದ ಮಾತ್ರ ಈ ರೀತಿಯ ಹೇಳಿಕೆ ಬರಲು ಸಾಧ್ಯ. ಹೌದು , ಬಹಳಷ್ಟು ಜನ ಪ್ರಮುಖ ನಾಯಕರ ಬಂಧನದಿಂದ ರಾಜ್ಯದಲ್ಲಿ ನಕ್ಸಲರ ಸಂಖ್ಯೆ ಕ್ಷೀಣಿಸಿದೆ. ಆದರೆ ಕರ್ನಾಟಕ ‘ನಕ್ಸಲ್ ಮುಕ್ತ’ರಾಜ್ಯವಾ?.
ಮೊದಲನೆಯದಾಗಿ ನಕ್ಸಲ್ ಚಳುವಳಿ ಭಾರತದಾದ್ಯಂತ ವ್ಯಾಪಿಸಲು ಮೂಲ ಕಾರಣ ದೇಶದ ಆಡಳಿತದಲ್ಲಿನ ಲೋಪದೋಷಗಳು, ರಾಜ್ಯಕ್ಕೂ ಅದು ಅನ್ವಯವಾಗುತ್ತೆ. ಒಂದೊಮ್ಮೆ ನಕ್ಸಲ್ ಹೋರಾಟ ಸಂಪೂರ್ಣವಾಗಿ ನಿಲ್ಲಬೇಕಾದರೆ ಸರಕಾರಗಳು ಸರಿಯಾಗಿ ಕಾರ್ಯ ನಿರ್ವಹಿಸಬೇಕು. ಆದರೆ ಅದು ಆಗುತ್ತಿದೆಯೇ? ಕರ್ನಾಟಕದ ಉದಾಹರಣೆಯನ್ನೇ , ಅದರಲ್ಲೂ ಕೇವಲ ಈಗಿನ ಸರಕಾರದ ಉದಾಹರಣೆಯನ್ನೇ ತೆಗೆದುಕೊಳ್ಳುವುದಾದರೆ ಬಿ.ಜೆ.ಪಿ. ಸರಕಾರ ಅಧಿಕಾರಕ್ಕೆ ಬಂದ ನಂತರ ಕೊಟ್ಟಿರುವ ಆಡಳಿತ ಜನರಲ್ಲಿ ಭರವಸೆ ಮೂಡಿಸುವ ಹಾಗಿದೆಯಾ? ಗಣಿ ಮಾಫಿಯಾದವರ ಅಟ್ಟಹಾಸ , ಮಂತ್ರಿಗಳ ಭ್ರಷ್ಟಾಚಾರ, ಹಾದರ, ಕೋಮುಗಲಭೆಗಳು, ಎಲ್ಲಾ ಕೋಮಿನ ಮೂಲಭೂತವಾದಿಗಳ ಅಟ್ಟಹಾಸ, ಉತ್ತರ ಕರ್ನಾಟಕದಲ್ಲಾದ ಪ್ರವಾಹ ಸಂತ್ರಸ್ತರಿಗೆ ಎಲ್ಲಾ ಪಕ್ಷದವರು ಮಾಡಿದ ಮಾಡುತ್ತಿರುವ ಮೋಸ – ಜನರು ಈ ಕಾರಣಕ್ಕಾಗಿ ‘ಪ್ರಜಾ ಪ್ರಭುತ್ವದಲ್ಲಿ’ ನಂಬಿಕೆ ಇಡಬೇಕಾ? ಅಲ್ಲಿಗೂ ಜನರು ಸರಕಾರಕ್ಕೆ ಬೆಂಬಲ ಕೊಡುವಂತೆ ಇದ್ದಾರೆ ಎಂಬುದಕ್ಕೆ ಕಾರಣ ಅವರಿಗೆ ಮತ್ಯಾವ ಪರ್ಯಾವವೂ ಕಾಣದಿರುವುದೇ ಆಗಿದೆ.
ಸದ್ಯದ ಮಟ್ಟಿಗೆ ರಾಜ್ಯದಲ್ಲಿ ನಕ್ಸಲ್ ಚಟುವಟಿಕೆ ಹಿನ್ನೆಡೆ ಅನುಭವಿಸಿರಬಹುದು. ಆದರೆ ರಾಜ್ಯದ ಜನರಿಗೆ ಒಂದು ಸಂದೇಶ ಮುಟ್ಟಿದೆ. ನಮ್ಮನ್ನು ಸರಕಾರ ನಿರ್ಲ್ಯಕ್ಷಿಸುತ್ತಿದ್ದಾಗ ನಕ್ಸಲ್ ಚಳುವಳಿ ಮಾತ್ರ ನಮ್ಮ ಸಮಸ್ಯೆಗಳಿಗೆ ಉತ್ತರವಾಗಬಲ್ಲದು ಎಂದು. ಇದು ಮಲೆನಾಡಿನಲ್ಲಿ ನಕ್ಸಲರಿಗೆ ಸಿಕ್ಕ ಗೆಲುವು. ಸರಕಾರದ ಅಧಿಕಾರಿಗಳೇ ಹೇಳಿರುವಂತೆ ಕೆಲವು ಉತ್ತಮ ಅಧಿಕಾರಿಗಳ ನೆರವಿನಿಂದ ಮಲೆನಾಡಿನಲ್ಲಿ ನಕ್ಸಲ್ ಪ್ರಭಾವ ತಗ್ಗಿದೆಯಂತೆ. ಅಲ್ಲಿಗೆ ಉತ್ತಮ ಕೆಲಸ ಮಾಡುವ ಅಧಿಕಾರಿಗಳು ನಮ್ಮ ಜಾಗಕ್ಕೆ ಬರಬೇಕಾದರೆ ಮತ್ತು ಅಧಿಕಾರಿಗಳು ನಮ್ಮ ಪ್ರದೇಶದಲ್ಲಿ ಉತ್ತಮ ಕೆಲಸ ಮಾಡಬೇಕಾದರೆ ಒಂದಷ್ಟು ದಿನಗಳ ಮಟ್ಟಿಗಾದರೂ ಅಲ್ಲಿನ ಜನರು ನಕ್ಸಲ್ ಹೋರಾಟದಲ್ಲಿ ಭಾಗವಹಿಸಬೇಕೆಂದು ಸರಕಾರವೇ ಪರೋಕ್ಷವಾಗಿ ತಿಳಿಸಿದಂತಾಯಿತು.
ಉಳಿದಂತೆ ರಾಜ್ಯದ ಬಹುತೇಕ ಶಾಂತ ರೀತಿಯ ಹೋರಾಟಗಳನ್ನು ರಾಜ್ಯ ಸರಕಾರ ತನ್ನ ಕುತಂತ್ರದಿಂದ, ಅಧಿಕಾರದ ಬಲಪ್ರಯೋಗದಿಂದ ಹತ್ತಿಕ್ಕಿರುವುದನ್ನು ಜನರು ನೋಡಿದ್ದಾರೆ. ಇತ್ತೀಚಿನ ಉದಾಹರಣೆ ಗುಲ್ಬರ್ಗದ ಅಣು ವಿದ್ಯುತ್ ಸ್ಥಾವರ.
ಅಭಿವೃದ್ಧಿಯ ಹೆಸರಿನಲ್ಲಿ ಸಾವಿರಾರು ಎಕರೆಗಳನ್ನು ಕೃಷಿಯೇತರ ಚಟುವಟಿಕೆಗಳಿಗೆ ಕೊಡಲು ಹೊರಟಿದೆ ನಮ್ಮ ಸರಕಾರ. ನಕ್ಸಲ್ ಹೋರಾಟವನ್ನು ಬಿಟ್ಟು ಉಳಿದ ಯಾವುದೇ ಹೋರಾಟವನ್ನು ಅಲ್ಲಿನ ಜನ ನೆಚ್ಚಿಕೊಂಡರೆ ಗುಲ್ಬರ್ಗದ ರೈತರಿಗಾದ ಸ್ಥಿತಿಯೇ ಅವರಿಗೂ ಆಗುವ ಸಾಧ್ಯತೆಗಳು ಅಧಿಕ. ಒಂದೊಮ್ಮೆ ಸರಕಾರ ತನ್ನ ಅಧಿಕಾರದ ಬಲದಿಂದ ಜನರನ್ನು ಬೆದರಿಸಿ ಕೃಷಿಯೋಗ್ಯ ಭೂಮಿಯನ್ನು ವಶಪಡಿಸಿಕೊಂಡರೆ ನಂತರದ ದಿನಗಳಲ್ಲಿ ಆಕಾಶದ ಕಡೆ ಮುಖ ಮಾಡುವ ಆಹಾರ ಉತ್ಪನ್ನಗಳ ಬೆಲೆಯ ಬಿಸಿ ಜನರಿಗಿ ಮುಟ್ಟಿದಾಗ ಶುರುವಾಗುವ ಹೋರಾಟವನ್ನು ತಡೆಯಲು ಸರಕಾರದ ಬಳಿ ‘ ಅಪರೇಷನ್ ಗ್ರೀನ್ ಹಂಟ್’ ನಂತಹ ಯೋಜನೆಗಳನ್ನು ಬಿಟ್ಟು ಬೇರೆ ಯೋಚನೆಗಳಿವೆಯೇ?
Posted in ಕರ್ನಾಟಕ, ನಕ್ಸಲಿಸ೦, ಪತ್ರಿಕಾ ಪ್ರಕಟಣೆ, ಪ್ರಸ್ತುತ | Tagged: naxalism, naxalism in karnataka, press release, v s acharya | Leave a Comment »
ನಕ್ಸಲ್ ನಾಯಕ ನಂದಕುಮಾರ್ ಬಂಧನ
Posted by ajadhind on June 2, 2010
ಪ್ರಜಾವಾಣಿ ವಾರ್ತೆ
ಶಿವಮೊಗ್ಗ: ನಂದಕುಮಾರ್ನನ್ನು ನಾಲ್ಕೈದು ದಿನಗಳ ಹಿಂದೆಯೇ ಬಂಧಿಸಿದ್ದು, ಮತ್ತಷ್ಟು ವಿಚಾರಣೆ ಹಿನ್ನೆಲೆಯಲ್ಲಿ ಸುದ್ದಿ ಬಹಿರಂಗಪಡಿಸಿಲ್ಲ ಎಂದು ತಿಳಿದು ಬಂದಿದೆ. ಬಂಧಿತ ನಂದಕುಮಾರ್ ಕೆಲ ದಿನಗಳಿಂದ ಹೈದರಾಬಾದ್ನಲ್ಲಿದ್ದ. ಖಚಿತ ಮಾಹಿತಿ ಆಧರಿಸಿ ಜಿಲ್ಲಾ ಪೊಲೀಸರು ವಶಕ್ಕೆ ಪಡೆದಿದ್ದಾರೆಂದು ಹೇಳಲಾಗುತ್ತಿದೆ. ಆದರೆ, ಈ ಬಂಧನವನ್ನು ಪೊಲೀಸರು ನಿರಾಕರಿಸಿದ್ದಾರೆ.
ಶಿವಮೊಗ್ಗ, ರಾಯಚೂರು ಜಿಲ್ಲೆಗಳಲ್ಲಿ ಕಳೆದ ಹಲವು ವರ್ಷಗಳಿಂದ ನಕ್ಸಲ್ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದ ನಂದಕುಮಾರ್ ಹಲವು ಆರೋಪಗಳನ್ನು ಎದುರಿಸುತ್ತಿದ್ದ. ನಕ್ಸಲ್ ಮುಖಂಡನಾಗಿದ್ದ ಈತನ ಮಾಹಿತಿ ನೀಡಿವರಿಗೆ ಪೊಲೀಸ್ ಇಲಾಖೆ ಒಂದು ಲಕ್ಷ ರೂ ಬಹುಮಾನ ಘೋಷಿಸಿತ್ತು.
ನಂದಕುಮಾರ್ ಮೂಲತಃ ಚಿಕ್ಕಮಗಳೂರಿನ ಕೊಪ್ಪ ತಾಲ್ಲೂಕಿನ ಕಾಚಿಕೊಪ್ಪ ಗ್ರಾಮದವನು. ಓದಿದ್ದು ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ. ವಿದ್ಯಾರ್ಥಿದೆಸೆಯಲ್ಲಿಯೇ ಹಲವು ಸಂಘಟನೆಗಳಲ್ಲಿ ಸಕ್ರಿಯವಾಗಿದ್ದ. ಕುದುರೆಮುಖ ಗಣಿಗಾರಿಕೆ ವಿರುದ್ಧ, ಅಲ್ಲಿನ ರಾಷ್ಟ್ರೀಯ ಉದ್ಯಾನ ವಿರುದ್ಧದ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದ. ಕುವೆಂಪು ವಿಶ್ವವಿದ್ಯಾಲಯದಲ್ಲಿ ಎಂಎ ಪದವಿ ಪಡೆದಿದ್ದು, ಸ್ನಾತಕೋತ್ತರ ಪದವಿ ಪಡೆದ ನಂತರ ಮಲವಗೊಪ್ಪದ ಆಶಾ ಎಂಬುವರನ್ನು ಮಂತ್ರಮಾಂಗಲ್ಯ ಪದ್ಧತಿಯಂತೆ ವಿವಾಹವಾಗಿದ್ದ. ಆಶಾ ಕೂಡ ಶಂಕಿತ ನಕ್ಸಲ್ ಆಗಿದ್ದು, ಆಶಾಳನ್ನು ಈಚೆಗೆ ಬೆಂಗಳೂರಿನಲ್ಲಿ ಪೊಲೀಸರು ಬಂಧಿಸಿದ್ದು, ಸದ್ಯ ಪೊಲೀಸ್ ವಶದಲ್ಲಿದ್ದಾಳೆ. ನಂದಕುಮಾರ್ ಮತ್ತು ಆಶಾ 1999ರಿಂದ ನಾಪತ್ತೆಯಾಗಿ ನಕ್ಸಲ್ ಚಟುವಟಿಕೆಯಲ್ಲಿ ತೊಡಗಿದ್ದರು.
ಬಂಧಿತ ನಂದಕುಮಾರ್ನನ್ನು ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸಲಾಗುತ್ತಿದೆ ಎನ್ನಲಾಗಿದೆ. ಆದರೆ, ಎಸ್ಪಿ ಎಸ್. ಮುರುಗನ್, ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
Posted in ಕರ್ನಾಟಕ, ನಕ್ಸಲಿಸ೦ | Tagged: nandakumar, shimoga | Leave a Comment »
Press Release over haalappa’s sex scandal and vijaya karnataka’a news for money[?] attitude.
Posted by ajadhind on May 10, 2010
Posted in ಕರ್ನಾಟಕ, ಪತ್ರಿಕಾ ಪ್ರಕಟಣೆ, ಪ್ರಸ್ತುತ | Tagged: haalappa, vk | Leave a Comment »
Press Release.
Posted by ajadhind on April 29, 2010
Posted in ಕರ್ನಾಟಕ, ಪತ್ರಿಕಾ ಪ್ರಕಟಣೆ | Leave a Comment »