Archive for the ‘ಕರ್ನಾಟಕ’ Category
ಸೇನಾ ಕಾರ್ಯಾಚರಣೆ ವಿರೋಧಿಸಿ ಯುಧ್ಧ ವಿರೋಧಿ ಜನರ ವೇದಿಕೆಯಿಂದ ಪ್ರಧಾನಿಗೆ ಪತ್ರ.
Posted by ajadhind on November 21, 2009
Posted in ಕರ್ನಾಟಕ, ಪ್ರಸ್ತುತ | Leave a Comment »
Press release over mavinahole encounter.
Posted by ajadhind on June 12, 2009
Posted in ಕರ್ನಾಟಕ, ಪತ್ರಿಕಾ ಪ್ರಕಟಣೆ | Leave a Comment »
ELECTION ILLUSIONS.
Posted by ajadhind on May 9, 2009
Posted in ಕರ್ನಾಟಕ, ಪತ್ರಿಕಾ ಪ್ರಕಟಣೆ, ಪ್ರಸ್ತುತ | Leave a Comment »
ROTTENING DEMOCRACY.
Posted by ajadhind on April 25, 2009
Posted in ಕರ್ನಾಟಕ, ಪ್ರಸ್ತುತ | Tagged: PRAJAVANI | 1 Comment »
election illusions
Posted by ajadhind on April 13, 2009
Posted in ಕರ್ನಾಟಕ, ಪತ್ರಿಕಾ ಪ್ರಕಟಣೆ, ಪ್ರಸ್ತುತ | Leave a Comment »
Comrade Vishnu not arrested.
Posted by ajadhind on March 27, 2009
Posted in ಕರ್ನಾಟಕ, ನಕ್ಸಲಿಸ೦, ಪತ್ರಿಕಾ ಪ್ರಕಟಣೆ | Leave a Comment »
Attack on ANF.
Posted by ajadhind on March 27, 2009
Posted in ಕರ್ನಾಟಕ, ನಕ್ಸಲಿಸ೦, ಪತ್ರಿಕಾ ಪ್ರಕಟಣೆ | Leave a Comment »
ನಕ್ಸಲರ ಬಹಿರಂಗ ಸಭೆ.
Posted by ajadhind on March 7, 2009
ಶೃಂಗೇರಿ ತಾಲ್ಲುಕಿನ ನೆಮ್ಮಾರು ಗ್ರಾಮ ಪಂಚಾಯ್ತಿಯ ಬುಕ್ಕಡಿಬೈಲಿನಲ್ಲಿ ಗುರುವಾರ ರಾತ್ರಿ ಬಿ.ಜಿ.ಕೃಷ್ಣಮೂರ್ತಿ ನೇತ್ರತ್ವದ ನಕ್ಸಲರ ತಂಡ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಬಹಿರಂಗ ಸಭೆ ನಡೆಸಿದೆ.
ಪಶ್ಚಿಮ ಘಟ್ಟದಲ್ಲಿ ನಕ್ಸಲೀಯ ಚಟುವಟಿಕೆ ಆರಂಭಗೊಂಡ ನಂತರ ಇದೇ ಪ್ರಥಮ ಬಾರಿಗೆ ನಕ್ಸಲರು ಇಂತಹ ಬಹಿರಂಗ ಸಭೆ ನಡೆಸಿದ್ದು, ಇದರ ಮೂಲಕ ಮಲೆನಾಡು ಭಾಗದಲ್ಲಿನ ತಮ್ಮ ಪ್ರಾಬಲ್ಯವನ್ನು ಪ್ರದರ್ಶಿಸಿದಂತಾಗಿದೆ.
ಗುರುವಾರ ಸಂಜೆ ೬.೩೦ ರ ಸುಮಾರಿಗೆ ನಕ್ಸಲ್ ನಾಯಕ ಬಿ.ಜಿ.ಕೃಷ್ಣಮೂರ್ತಿ , ಮಂದಗಾರು ಲತಾ, ಹೊಸಗದ್ದೆ ಪ್ರಭಾ ಒಳಗೊಂಡಂತೆ ೧೩ ಜನರ ಶಸ್ತ್ರಸಜ್ಜಿತ ತಂಡ ಬುಕ್ಕಡಿಬೈಲಿಗೆ ಭೇಟಿ ನೀಡಿ ಅಲ್ಲಿನ ಮನೆಮನೆಗೆ ತೆರಳಿ ಸಭೆಗೆ ಬರುವಂತೆ ಸೂಚಿಸಿದ್ದಾರೆ. ನಂತರ ಆರಂಭಗೊಂಡ ಸಭೆಯಲ್ಲಿ ಬಿ.ಜಿ. ಕೃಷ್ಣಮೂರ್ತಿ ಮಾತನ್ನಾಡಿ ಪಿ.ವಿ ನರಸಿಂಹರಾವ್ ಕಾಲದಿಂದ ಆರಂಭಗೊಂಡು ಈಗಿನವರೆಗಿನ ಕೇಂದ್ರ ಸರಕಾರದ ನೀತಿಗಳನ್ನು ಬಲವಾಗಿ ಖಂಡಿಸುವುದರೊಂದಿಗೆ ರಾಜ್ಯ ಸರಕಾರದ ನಿಲುವುಗಳ ವಿರುದ್ಧವೂ ಕಿಡಿಕಾರಿದ್ದಾಗಿ ತಿಳಿದುಬಂದಿದೆ.
ಸಭೆಯಲ್ಲಿ ಇದರ ಕುರಿತು ಕ್ರಾಂತಿಗೀತೆಗಳನ್ನು ಹಾಡಿ, ಕರಪತ್ರಗಳನ್ನು ಹಂಚಲಾಗಿದೆ. ತಮ್ಮ ಹೋರಾಟವನ್ನು ಬೆಂಬಲಿಸುವಂತೆ ಕರೆನೀಡಿ ಹಳ್ಳಿಬಿದರಗೊಡಿನಲ್ಲಿ ಇತ್ತೀಚಿಗೆ ಮನೆಯೊಂದಕ್ಕೆ ಬೆಂಕಿ ಹಚ್ಚಿದ ಪ್ರಕರಣವನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.
ಪೂರ್ಣ ವಿವರಳಿಗೆ ಇಲ್ಲಿ ಕ್ಲಿಕ್ ಮಾಡಿ.
Posted in ಕರ್ನಾಟಕ, ನಕ್ಸಲಿಸ೦ | Leave a Comment »
ಪಬ್ಬು ಮತ್ತು ಮಬ್ಬು.
Posted by ajadhind on February 10, 2009
ಮೊನ್ನೆ ಮೊನ್ನೆ ಕರ್ನಾಟಕದಿಂದ ಕೇರಳಕ್ಕೆ ಲಾರಿಯೊಂದು ಸಾಗುತ್ತಿತ್ತು. ಕಂಟೈನರ್ ಹೊತ್ತಿದ್ದ ಲಾರಿ. ಕಂಟೈನರ್ ಗೊತ್ತಿರಬೇಕು ನಿಮಗೆ; ಕಬ್ಬಿಣದ ದೊಡ್ಡ ಡಬ್ಬಿ, ಆರೂ ಕಡೆಯಿಂದ ಗಾಳಿಯಾಡಲು ಸ್ವಲ್ಪವೂ ಅನುಕೂಲವಿರುವುದಿಲ್ಲ. ಇಂತಿಪ್ಪ ಲಾರಿ ಕರ್ನಾಟಕ, ಕೇರಳದ ಬಿಗಿ ಭದ್ರತೆಯ ಗಡಿ ದಾಟಿ ಕೇರಳದ ಹಳ್ಳಿಯೊಂದರಲ್ಲಿ ಸಾಗುತ್ತಿತ್ತು. ಅಲ್ಲೇ ಹರಟುತ್ತಿದ್ದ ಯುವಕರಿಗೆ ಲಾರಿಯಿಂದ ಮಕ್ಕಳು ಅಳುವ ಶಬ್ದ ಕೇಳಿ ಬಂತು, ಅ ಯುವಕರು ಲಾರಿ ತಡೆದು ಕಂಟೈನರ್ ಬಾಗಿಲು ತೆಗೆಸಿದರೆ ಕಂಡಿದ್ದು ಕುರಿಮಂದೆಯ ರೀತಿ ತುಂಬಿದ್ದ ನಲವತ್ತು ಹೆಂಗಸರು ಮತ್ತು ಮಕ್ಕಳು. ಉಸಿರಾಟಕ್ಕೆ ಗಾಳಿ ಸಿಗದೇ ಮಕ್ಕಳು ಅಳುತ್ತಿದ್ದವು.
ಅಷ್ಟೂ ಜನ ಕೇರಳಕ್ಕೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಗುತ್ತಿಗೆದಾರನೊಬ್ಬ ಈ ವ್ಯವಸ್ಥೆ ಮಾಡಿದ್ದ. ಅಲ್ಲಿದ್ದವರು ಮುಸ್ಲಿಮರಾ? ಹಿಂದುಗಳಾ? ಬಡವರ ಧರ್ಮ ಯಾವುದಾದರೇನು?
‘ಹಿಂದೂ ಹೆಂಗಸರಿಗೆ ಅವಮಾನ’ ಎಂದು ಯಾರು ಬೊಬ್ಬಿಡಲಿಲ್ಲ. ಪಾಪ ಅವರಿಗೆ ಸಿರಿವಂತರು ದುಡ್ಡು ಪೋಲು ಮಾಡುವುದನ್ನು ತಪ್ಪಿಸಲೇ ಸಮಯವಿಲ್ಲ. ಒಂದಷ್ಟು ಪತ್ರಿಕೆಗಳ ಮುಖಪುಟಗಳಲ್ಲಿ, ಬಹಳಷ್ಟರ ಒಳಪುಟಗಳಲ್ಲಿ ಸುದ್ದಿಯಾಯಿತು. ಯಾವ ಟಿ.ವಿಯವನೂ ಮುಖ್ಯಮಂತ್ರಿಯ ಮುಖಕ್ಕೆ ಮೈಕ್ ಹಿಡಿದು ‘ ಇಂಥ ಘಟನೆ ನಡೆದಿದೆಯಲ್ಲಾ ನಾಚಿಕೆಯಾಗೊಲ್ವಾ ನಿಮಗೆ’ ಅಂಥ ಕೇಳಲಿಲ್ಲ. ರಾಷ್ಟ್ರೀಯ ವಾಹಿನಿಗಳಿಗೆ ಇದು ‘ ಹಾರರ್’ ವಿಷಯವಾಗಿ ಕಾಣಲಿಲ್ಲ. ಪಾಪ ಕೇಂದ್ರ ಮಂತ್ರಿಗಳಿಗೆ ‘ಪಬ್ ಭರೋ ‘ ಮಾಡಿಸುವ ಆತುರ.
ನಲವತ್ತು ಮಂದಿ ಮಕ್ಕಳು ಹೆಂಗಸರು ಅನುಭವಿಸಿದ ಸಂಕಟಕ್ಕಿಂತ ನಾಲ್ಕು ಮಂದಿ ಸಿರಿವಂತರಿಗೆ ಬಿದ್ದ ಹೊಡೆತ ಹೆಚ್ಚಿನದಾಗಿ ಹೋಯಿತಾ ನಮಗೆ!?
ಕೊನೆಗೆ ಈ ಭಾರತ ದೇಶ ಯಾರಿಗೆ ಸೇರಿದ್ದು ? ಉತ್ತರ ತಿಳಿದಿರಬೇಕಲ್ಲ…….
ಜೈ ಭಾರತಾಂಬೆ.
Posted in ಕರ್ನಾಟಕ, ನನ್ನ ಲೇಖನಿಯಿ೦ದ, ಪ್ರಸ್ತುತ | 6 Comments »
