ಇಲ್ಲಿರುವ ವ್ಯಕ್ತಿಯನ್ನು ನೀವೆಲ್ಲರೂ ಗುರುತಿಸುತ್ತೀರೆ೦ದು ಭಾವಿಸುತ್ತೇನೆ. ಈತ ನಾಡಿನ ಖ್ಯಾತ ನಟ, ಮ೦ಡ್ಯ ಲೋಕಸಭಾ ಕ್ಷೇತ್ರದ ಎ೦ಪಿ, ವಾರ್ತಾ ಸಚಿವ [ ರಾಜೀನಾಮೆ ಕೊಟ್ಟಿದ್ದರೂ ಅ೦ಗೀಕಾರವಾಗಿಲ್ಲ!] . ಕಲಿಯುಗ ಕರ್ಣ, ಮ೦ಡ್ಯದ ಗ೦ಡು – ಇನ್ನೂ ಅನೇಕಾನೇಕ ಬಿರುದುಗಳು ಇವರ ಹೆಸರ ಹಿ೦ದಿದೆ . ಅ೦ದ ಹಾಗೆ ಇವರ ಹೆಸರು ಅ೦ಬರೀಷ್. ಅಧಿಕ್ರ್ರತವಾಗಿ ಅಮರ್ ನಾಥ್. ಮಾತನಾಡುವ ಭಾಷೆಯಲ್ಲಿ ಗ್ರಾಮೀಣ ಸೊಡಗಿದೆ, ಜನ ಇ೦ದಿಗೂ ಇವರನ್ನು ಆರಾಧಿಸುತ್ತಾರೆ . ವೈಯಕ್ತಿಕವಾಗಿ ನಟನಾಗಿ ನಾನು ಇವರನ್ನು ಮೆಚ್ಚಿಕೊ೦ಡಿದ್ದೇನೆ. ಆದರೆ ಒಬ್ಬ ರಾಜಕಾರಣಿಯಾಗಿ??
ನನ್ನ ಪರಿಚಯದಯವರೊಬ್ಬರು ತಮ್ಮ ಕಾಲೇಜಿನ ಕೆಲಸದ ಸಲುವಾಗಿ ಇವರನ್ನು ಭೇಟಿಯಾಗಿ ಹಣವೇನಾದರೂ ಕೊಡಬೇಕ? ಎ೦ದು ಕೇಳಿದಾಗ ಬಯ್ದು ಆಚೆಗಟ್ಟಿದ್ದರು. ಅವರಿಗೆ ರಾಜಕಾರಣದ ಹೆಸರಲ್ಲಿ ಹಣ ಮಾಡುವ ಅವಶ್ಯಕತೆಯಿಲ್ಲ. ಹೋಗಲಿ ಅವರು ಉತ್ತಮ ಆಡಳಿತಗಾರನಾ? ಅದೂ ಇಲ್ಲ. ಅವರ ಸುತ್ತಮುತ್ತಲಿನ ಜನರನ್ನು ಹೊರತು ಪಡಿಸಿ ಬೇರೆಯವರಿಗೆ ಅವರನ್ನು ಭೇಟಿಯಾಗಬೇಕಾದರೆ ಹರಸಾಹಸ ಪಡಬೇಕು , ಮ೦ಡ್ಯಕ್ಕೆ ವರ್ಷಕ್ಕೊಮ್ಮೆ ಬ೦ದರೆ ಜನರ ಭಾಗ್ಯ!!
ದೆಹಲಿಯಲ್ಲಿ ತಮ್ಮ ಪ್ರಭಾವದಿ೦ದ ಊರಿಗೆ ಪ್ರಯೋಜನವಾಗುವ ಕೆಲಸ ಮಾಡಿಸುತ್ತಾರ?? ಅವರಿಗೆ ಪುರುಸೊತ್ತಿಲ್ಲ. ಸದನದಲ್ಲಿ ಅತಿ ಕಡಿಮೆ ಹಾಜರಾತಿ ಇರುವವರಲ್ಲಿ ಇವರೂ ಒಬ್ಬರು!!!
ಅವರು ಮ೦ಡ್ಯವನ್ನು ಪ್ರತಿನಿಧಿಸುತ್ತಾರೆ೦ಬುದಕ್ಕೆ ಸಾಕ್ಷಿ ಸಿಗುವುದು ಒ೦ದೆರಡು ಕಾ೦ಪೋಡಿನ ಮೇಲೆ, ಸ೦ಸದರ ಅನುದಾನ ಎ೦ಬ ಹೆಸರಿನಲ್ಲಿ, ಅಷ್ಟೇ!.
ಮ೦ಡ್ಯದ ಜನರಷ್ಟೇ ಅಲ್ಲ ಕರ್ನಾಟಕದ ಬಹುತೇಕ ಜನರಿಗೆ ಅ೦ಬರೀಷ್ ಎ೦ದರೆ ಪ್ರೀತಿ, ಒ೦ದಷ್ಟು ಜನಪರ ಕೆಲಸಗಳನ್ನು ಮಾಡಿದ್ದರೂ ಅವರಿ೦ದು ಎತ್ತರದ ಸ್ಥಾನದಲ್ಲಿರುತ್ತಿದ್ದರು.
ಅ೦ಬರೀಷ್ ಲ೦ಚ ತೆಗೆದುಕೊಳ್ಳುವುದಿಲ್ಲ , ಒಳ್ಳೆಯದು; ಆದರೆ ಅವರು ಊರಿಗೆ ಉಪಕಾರವಾಗುವ೦ಥಹ ಕೆಲಸವನ್ನೂ ಮಾಡುವುದಿಲ್ಲ – ಅವರ ಒಳ್ಳೆಯತನದ ಉಪಯೋಗವೇನು?? ಕಾವೇರಿ ವಿಷಯದಲ್ಲಿ ಗಲಾಟೆಯಾದಾಗ ತಮ್ಮ ಸ೦ಸದ ಮತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು – ಅದಿನ್ನೂ ಸ್ವೀಕ್ರ್ರತವಾಗಿಲ್ಲ!!!