ಹೋರಾಟದ ಹಾದಿ

ಆದರ್ಶವಾದಿಗಳಿಗೆ ಕೊನೆಯಿರಬಹುದು, ಆದರ್ಶಕ್ಕಲ್ಲ.

Archive for the ‘ಅನುವಾದ’ Category

DAYS AND NIGHT IN THE HEARTLAND OF REBELLION – PART 4[KANNADA]

Posted by ajadhind on ಜುಲೈ 4, 2010

days and night in the heartland of rebellion by goutham navlakha – 4

Posted in ಅನುವಾದ, ನಕ್ಸಲಿಸ೦ | Tagged: | Leave a Comment »

ಹತ್ಯೆಗಳ ಬಗ್ಗೆ?

Posted by ajadhind on ಮೇ 2, 2010

ಅಧ್ಯಾಯ 3
ನನ್ನ ಸಹಚರರರಿಗೆ ಬಹಳಷ್ಟು ಪ್ರಶ್ನೆಗಳನ್ನು ಕೇಳಿದೆ. ಪಕ್ಷ ಜನರನ್ನು ಕೊಂದು ಮನೆಗಳನ್ನು ಸುಡುತ್ತದೆ ಎಂದು ಹೇಳುತ್ತಾರೆಂದು ತಿಳಿಸಿದೆ. ‘ಮಾಹಿತಿದಾರನೆಂಬ’ ಚಿಕ್ಕ ಕಾರಣಕ್ಕೂ ಹತ್ಯೆ ಮಾಡಲಾಗುತ್ತದೆ. ಒಗ್ಗಟ್ಟಿನಿಂದ ಸಹಚರರು ಪ್ರತಿಭಟಿಸಿದರು “ನಾವು ಕೊಲೆ, ಲೂಟಿ, ಅತ್ಯಾಚಾರ ಮಾಡುವುದಿಲ್ಲ” ಜನರಿಗೆ ಸಹಾಯ ಮಾಡುತ್ತೇವೆ. ಚೇತು ಹೇಳಿದ , ನಾನು ದಕ್ಷಿಣ ದಂತೆವಾಡದಿಂದ ಬಂದಿದ್ದೇನೆ. ಅಲ್ಲಿ ಸಲ್ವಾ ಜುಡುಂ ಚಿಕ್ಕ ಹುಡುಗಿಯರ ಮೇಲೂ ಅತ್ಯಾಚಾರವೆಸಗಿದ್ದಾರೆ. ಅಸಹಾಯಕ ಜನರನ್ನು ಹೊತ್ತೊಯ್ಯುತ್ತಾರೆ. ಹಳ್ಳಿಗರನ್ನು ಕೊಲ್ಲುವ ಬದಲು ನಮ್ಮೆದುರಿಗೆ ಬಂದು ನಮ್ಮೊಡನ್ಯಾಕೆ ಹೋರಾಡುವುದಿಲ್ಲ? ಸುಖಲಾಲ್ ಹೇಳಿದ, ಅವನ ತಮ್ಮನನ್ನು ಜೈಲಿಗೆ ಹಾಕಿ ‘ಗೋಲಾದಲ್ಲಿ’ ಇಟ್ಟಿದ್ದಾರೆ. ಕೈ, ಪಾದಗಳಿಗೆ ಚೈನನ್ನು ಬಿಗಿದು ತಾಸುಗಟ್ಟಲೆ ಕುಳಿತಿರುವವನ ಭಂಗಿಯಲ್ಲಿರುವ ಶಿಕ್ಷೆ. ದಂಡಕಾರಣ್ಯ ಆದಿವಾಸಿ ಕಿಸಾನ್ ಮಜ್ದೂರ್ ಸಂಘಟನೆಯಲ್ಲಿ ಇದ್ದನೆಂಬುದೇ ಅವನ ಮೇಲಿನ ಅಪರಾಧ. ಇದರರ್ಥ ನೀವು ಹತ್ಯೆಗೈಯುವುದೇ ಇಲ್ಲವಾ? ಇಲ್ಲ ನಾವು ಹೇಳಿದ್ದು ಅದನ್ನಲ್ಲ, ನಾವು ಹತ್ಯೆ ಮಾಡುವುದು ಜನರ ಶತ್ರುಗಳನ್ನು. ಆದರೆ ಈ ಜನರ ಶತ್ರುಗಳ್ಯಾರು? ಪಕ್ಷವನ್ನು ವಿರೋಧಿಸುವ ಪ್ರತಿಯೊಬ್ಬರೂ ಜನರ ಶತ್ರುವಾ? ‘ ಇಲ್ಲ ಅದು ಸತ್ಯವಲ್ಲ. ನಮಗೆ ನೀವು ಪಕ್ಷವನ್ನು ವಿರೋಧಿಸುತ್ತೀರಾ, ಒಪ್ಪುತ್ತೀರಾ ಅಥವಾ ಟೀಕಿಸುತ್ತೀರಾ
ಎಂಬುದು ಮುಖ್ಯವಲ್ಲ, ಆದರೆ ನೀವು ಸರಕಾರೀ ಫೌಜುಗಳ ಪರವಾಗಿ ಕೆಲಸ ಮಾಡಿದರೆ ನೀವು ಜನರ ಶತ್ರು’ ಸರಿ ಅಂತಹವರಿಗೆ ಕೊಡುವ ಶಿಕ್ಷೆ? ‘ಶತ್ರುವೆಂದು ಪರಿಗಣಿಸಲ್ಪಟ್ಟ ಪ್ರತಿಯೊಬ್ಬರನ್ನೂ ಹತ್ಯೆ ಮಾಡಲಾಗುವುದಿಲ್ಲ. ಮಾಹಿತಿದಾರರನ್ನು ಕೊಲ್ಲುವುದನ್ನು ಪಕ್ಷ ತಡೆಯುತ್ತದೆ. ಯಾರು ನಾವು ಪದೇ ಪದೇ ಎಚ್ಚರಿಕೆ ಕೊಟ್ಟ ಮೇಲೂ ತಮ್ಮ ತಪ್ಪುಗಳನ್ನು ಪುನರಾವರ್ತಿಸುತ್ತಾರೋ ಅಂತಹವರನ್ನು ಹತ್ಯೆ ಮಾಡಲಾಗುತ್ತೆ’

ಸಿ.ಪಿ.ಐ[ಮಾವೋವಾದಿ]ಯ ಕಾರ್ಯದರ್ಶಿ [ ಜನರಲ್ ಸೆಕ್ರೆಟರಿ – ಜಿ.ಎಸ್] ನನಗೆ ಮತ್ತು ಜಾನ್ ಮಿರ್ದಾಲ್ಗೆ ಕೊಟ್ಟ ಸಂದರ್ಶನವನ್ನು ನೆನಪಿಸಿಕೊಂಡೆ “…………ನಮ್ಮ ವಿಸ್ತಾರದ ಪ್ರದೇಶವೊಂದರಲ್ಲಿ ಒಂದು ಘಟನೆ ನಡೆದಿತ್ತು, ಐ.ಜಿ.ಪಿ.ಯೊಡನೆ ಸೇರಿ ಎರಡೂ ಹಳ್ಳಿಗೆ ಸೇರಿದ ಮೂವತ್ಮೂರು ಜನ ಶತ್ರುವಿನ ವಕ್ತಾರರಾಗಿದ್ದರು. ಇದರ ವಿಚಾರವಾಗಿ ನಮ್ಮ ಕಾಮ್ರೇಡ್ ಗಳು ಹಳ್ಳಿಗೆ ಭೇಟಿಯಿತ್ತರು. ಪೊಲೀಸರಿಗೆ ಮುಖ್ಯ ವಕ್ತಾರನಾಗಿದ್ದವನಿಗೆ ಮರಣದಂಡನೆ ವಿಧಿಸಬೇಕೆಂದು ಹಳ್ಳಿಗರು ಒತ್ತಾಯ ಮಾಡಿದರೂ ಪಕ್ಷ ಮಧ್ಯೆ ಪ್ರವೇಶಿಸಿ ಆತನಿಗೆ ತಪ್ಪು ತಿದ್ದುಕೊಳ್ಳಲು ಅವಕಾಶ ನೀಡಲಾಯಿತು” ಜನಾತನ ಸರಕಾರವಿರುವ ಡಿ.ಕೆ.ಯಲ್ಲಿ ಪಕ್ಷದ ಕಾರ್ಯವಿಧಾನ ಬೇರೆಯಿರಬಹುದೇ? ಅಥವಾ ಒಂದು ಅಪರೂಪದ ಘಟನೆಯನ್ನು ಅವರು ಎತ್ತಿ ತೋರಿಸುತ್ತಿದ್ದಾರಾ? ನನಗೆ ತಿಳಿದಿಲ್ಲ. ಆದರೆ ಹೆಚ್ಚು ಯೋಚಿಸಿದಷ್ಟೂ ನನಗನ್ನಿಸಿದ್ದೆಂದರೆ ಕೊಲ್ಲುವುದನ್ನೇ ವ್ರುತ್ತಿಯಾಗಿಸಿಕೊಂಡಿದ್ದರೆ ಡಿ.ಕೆ.ಯಲ್ಲಿ ಜನಾತನ ಸರಕಾರ ಇಷ್ಟು ಕಾಲ ಉಳಿದು ಬೆಳೆಯಲಾಗುತ್ತಿರಲಿಲ್ಲ.

ಸುಖಲಾಲ್ ಕೇಳಿದ” ಆ ಹೈ ಟೆನ್ಶನ್ ವೈರ್ ಗಳನ್ನೂ ನೋಡಿದಿರಾ?”
‘ಹು’ ಎಂದೇ.
“ನಿಮಗೆ ಗೊತ್ತಾ ಈ ಪ್ರದೇಶದಲ್ಲಿ ಹೋದ ವರ್ಷ ಕೆಲವರು ಆ ಟವರ್ ಗಳನ್ನೂ ಸ್ಫೋಟಿಸಿದಾಗ ಪಕ್ಷ ಸಭೆ ಕರೆದು ಆ ಕಾರ್ಯವನ್ನು ತಪ್ಪೆಂದು ಖಂಡಿಸಿತು”
‘ಪಕ್ಷ ಏನು ಹೇಳಿತು ಮತ್ತಾ ಘಟನೆ ನಡೆದಿದ್ದಾದರೂ ಯಾಕೆ?’ ನಾ ಕೇಳಿದೆ.
“ಈ ರೀತಿಯ ಕಾರ್ಯಗಳಿಂದ ನಗರದಲ್ಲಿರುವ ಬಡಜನರಿಗೆ ಹೆಚ್ಚು ತೊಂದರೆಯಾಗುತ್ತೆ; ಸಿರಿವಂತರ ಬಳಿ ಜೆನರೇಟರ್ ಗಳಿರುತ್ತೆ”
‘ಜನರ ಸೈನ್ಯ ಏನು ಹೇಳಿತು?’
ತಮ್ಮ ಕಾರ್ಯವನ್ನು ಸಮರ್ಥಿಸಿಕೊಳ್ಳಲು ಯತ್ನಿಸುತ್ತಾ ‘ ನಮಗೆ ಅನ್ನಿಸಿದಂತೆ ಈ ಕಾರ್ಯದಿಂದ ರಿಪೇರಿ ತನ್ಡದೊಡನೆ ಪೊಲೀಸರು ಬಂದಾಗ ಅವರ ಮೇಲೆರಗಬಹುದಿತ್ತು’ ಎಂದರು”
‘ಜನರ ಸೈನ್ಯ ಸ್ವಂತವಾಗಿ ಆ ರೀತಿಯ ಯೋಜನೆ ಹಾಕಿಕೊಳ್ಳಬಹುದಾ?’
ಇಲ್ಲ ದೊಡ್ಡ ದಾಳಿಗಳ ಬಗ್ಗೆ plga ಗೆ ಮಾಹಿತಿ ನೀಡಬೇಕು”

ಪಕ್ಷ ambush ಗಳನ್ನು ತಡೆಯುತ್ತದಾ? ಮತ್ತೆ ಪದೇ ಪದೇ ಕೇಳಿಬರುವ ಹತ್ಯಾ ಯತ್ನಗಳು, ಲ್ಯಾಂಡ್ ಮೈನ್ ಸ್ಪೋಟ? ಈ ಪ್ರಶ್ನೆಯನ್ನು plga ಕಮ್ಯಾಂಡರ್ ರಾಮುವಿಗೆ ಕೇಳಿದೆ.

ರಾಮು ಹೇಳಿದ ” ambush ಗಳನ್ನು ನಡೆಸುತ್ತೇವೆ. ಆದರದು ಎಚ್ಚರಿಕೆಯಿನ ಯೋಜಿಸಿದ ನಂತರ. ಅದು ಸಾಕಷ್ಟು ಸಮಯವನ್ನೂ ಬೇಡುತ್ತೆ, ನಾವು ಶ್ತ್ರುಗಿಂತ ದುರ್ಬಲವಾಗಿರುವುದರಿಂದ ನಮಗೆ ಬೇಕೆಂದಾಗ ಎರಗಲು ಸಾಧ್ಯವಿಲ್ಲ. ನಮ್ಮಲ್ಲಿ ಸಿಧ್ಧತೆಗಳಿಲ್ಲದಿದ್ದರೆ ಶತ್ರುವಿನ ಜೊತೆಗಿನ ಕಾಳಗವನ್ನು ತಡೆಯುತ್ತೇವೆ. ಜೊತೆಗೆ ಯಾವ ದಾಳಿಯಿಂದ ನಮಗೆ ಹೆಚ್ಚು ಶಸ್ತ್ರ ಸಿಗುತ್ತದೋ ಅಂಥವುಗಳ ಕಡೆಗೆ ಹೆಚ್ಚು ಗಮನವಿಯುತ್ತೇವೆ. ರಾಯಪುರದಲ್ಲಿ ಮಾತನಾಡುತ್ತಾ ಪಿ.ಚಿದಂಬರಂ ನಾವು ಸೈನ್ಯಕ್ಕೆ ಸೇರಿದರೆಂಬ ಕಾರಣಕ್ಕೆ ಇಬ್ಬರನ್ನು ಕೊಂಡಿದ್ದೆವೆಂದು ತಿಳಿಸಿದ. ಅದಕ್ಕೂ ನಮಗೂ ಸಂಬಂದವಿಲ್ಲ. ಅಂಥದೊಂದು ಘಟನೆ ನಡೆದಿದೆಯಾ ಎಂಬುದೇ ನಮಗೆ ಅನುಮಾನ”
ಅದರರ್ಥ?

ಮುಂದುವರೆಯುವುದು

Posted in ಅನುವಾದ, ನಕ್ಸಲಿಸ೦ | Tagged: , | Leave a Comment »

ಅವರನ್ನು ಅರ್ಥೈಸಿಕೊಳ್ಳುತ್ತ.

Posted by ajadhind on ಏಪ್ರಿಲ್ 24, 2010

[translation of goutham navlakha’s Days and Nights In the Heartland Of Rebellion]
ಅಧ್ಯಾಯ 2 .
ಮೊದಲ ಕೆಲವು ದಿನ, ನನ್ನೊಡನೆ ಮಾತನಾಡಲು ಜನರು ಹಿಂಜರಿಯುತ್ತಿದ್ದರು. ನಾನು ಭಾರತೀಯನ ? ಹೌದಾದಲ್ಲಿ ಜಾನ್ ಮಿರ್ದಾಲ್‌ನ ಜೊತೆ ಅವನ ಭಾಷೆಯಲ್ಲಿ ಸಂಭಾಷಿಸಲು ಹೇಗೆ ಸಾಧ್ಯ? ಜೊತೆಗೆ ಅವರಿಗೆ ಹಿಂದಿ ಭಾಷೆ ಸರಾಗವಾಗಿ ಬರುತ್ತಿರಲಿಲ್ಲ, ನನಗೆ  ಚತ್ತೀಸ್ಗಡಿ ತಿಳಿಯುತ್ತಿತ್ತಾ? ಎಂಬ ಪ್ರಶ್ನೆಗಳಿದ್ದವು. ಗೋಂದಿ ಮತ್ತು ಕೊಯಮ್ ಭಾಷೆಗಳು ನನಗೆ ತಿಳಿಯುವುದಿಲ್ಲ ಎಂಬುದರ ಅರಿವಿತ್ತು ಅವರಿಗೆ. ಆದರೆ ಕೆಲವು ದಿನಗಳ ನಂತರ, ಕುತೂಹಲ ಕಡಿಮೆಯಾಗಿ ನನ್ನೊಡನೆ ಸಂವಹಿಸಲಾರಂಭಿಸಿದರು. ನಾನು ಹಿಂದಿಯಲ್ಲಿ ಬರೆಯಬಲ್ಲೆ ಮಾತನಾಡಬಲ್ಲೆ ಎಂದವರಿಗೆ ತಿಳಿಯಿತು ಮತ್ತು ನಾನು ವಿದೇಶದಲ್ಲಿ ನೆಲೆಸಿದ್ದ ಭಾರತೀಯ, ಈಗ ಮತ್ತೆ ದೆಹಲಿಯಲ್ಲಿ ವಾಸವಾಗಿದ್ದೇನೆ ಎಂದು ತಿಳಿದ ನಂತರ ನನಗೂ ಅವರ ನಡುವೆ ಒಂದು ಸ್ಥಳ ಸಿಕ್ಕಿತು. ನಮ್ಮ ನಡುವಿನ ಅಂತರ ಜೊತಜೊತೆಯಲಿ ಹಾಡಲಾರಂಭಿಸಿದ ಮೇಲೆ ಕಡಿಮೆಯಾಯಿತು. ದೆಹಲಿಯಲ್ಲಿರುವ ಜನರ ಬಗ್ಗೆ ಬಹಳಷ್ಟು ಪ್ರಶ್ನೆ ಕೇಳಿದರು. ಅಲ್ಲಿನ ಜನ ಕೆಲಸ ಮಾಡುತ್ತಾರಾ? ಎಷ್ಟು ಸಂಪಾದಿಸುತ್ತಾರೆ? ಅವರ ಜೀವನ ರೀತಿ ಹೇಗೆ? ಮಾರ್ಕ್ಶ್ ಮತ್ತು ಎಂಗೆಲ್ಸ್ ನ ವಾಸಸ್ಥಾನವಾಗಿದ್ದರೂ ಯುರೋಪಿನಲ್ಲಿ ಕ್ರಾಂತಿ ಯಾಕೆ ಯಶಸ್ವಿಯಾಗಲಿಲ್ಲಿ? ಅಲ್ಲಿ ವರ್ಗ ಸಂಘರ್ಷ ಇಲ್ಲವಾ? ತಾಲೀಬಾನಿ ಮತ್ತು ಜೆಹಾದಿಗಳ್ಯಾಕೆ ಮಸೀದಿಗಳಿಗೆ ಬಾಂಬ್ ಇಟ್ಟು ತಮ್ಮದೇ ಜನರ ಮೇಲೆ ಆಕ್ರಮಣ ಮಾಡುತ್ತಾರೆ? ಅಮೇರಿಕದ ಸೇನೆಯ ಮೇಲ್ಯಾಕೆ ಮಾಡುವುದಿಲ್ಲ? ಕಾಶ್ಮೀರದಲ್ಯಾಕೆ ವಿಮೋಚನೆಗೆ ಹೋರಾಡಲು ಒಂದೇ ಪಕ್ಷದ ನೇತ್ರತ್ವವಿಲ್ಲ? ಪ್ರತಿ ಪ್ರಶ್ನೆಯೂ ಉತ್ತರ ಬಯಸುತ್ತಿತ್ತು. ಉತ್ತರವೀಯಲು ಶ್ರಮದ ಅವಶ್ಯಕತೆಯಿತ್ತು. ಮೂವತ್ತು ವರ್ಷದ ಚಳುವಳಿ ಕಾಡಿನ ಹೊರಗಿನ ಪ್ರಪಂಚದ ಅರಿವು ಮೂಡಿಸಿದೆ ಅವರಲ್ಲಿ. ಪ್ಯಾಲೆಸ್ತೇನ್, ಇರಾಕ್, ಶ್ರೀಲಂಕಾ, ಆಪ್ಘಾನಿಸ್ತಾನ, ಕಾಶ್ಮೀರ, ನಾಗಾ ಜನ, ಮಣಿಪುರ ಮತ್ತು ಅಸ್ಸಾಮಿನಲ್ಲಿ ಜನರು ದಬ್ಬಾಳಿಕೆಯ ವಿರುದ್ದ ಹೋರಾಡುತ್ತಿರುವುದರ ಅರಿವಿದೆ. ಸುತ್ತಮುತ್ತಲಿಂದ ಆಕ್ರಮಿಸಲ್ಪಟ್ಟಿದ್ದರು ಅವರ ಮನಸ್ಸುಗಳು ಕುಗ್ಗಿಲ್ಲ. ನನಗೆ ನೆನಪಾಯಿತು, ವಿಧ್ಯಾರ್ಥಿ ಜೀವನದಲ್ಲಿ ನಾನು ಕಂಡು ಕೊಂಡಿದ್ದ ಸತ್ಯ – ಹೋರಾಟ ಮಾಡುವ ಜನ ಹೆಚ್ಚು ಭಾವಜೀವಿಗಳಾಗಿರುತ್ತಾರೆಂದು.

ವಿಶ್ವಮಾನ್ಯ ಭಾಷೆ ಮಾತನಾಡುವ – ತಮ್ಮ ಹೋರಾಟಗಳನ್ನು ಇತರ ಹೋರಾಟಗಳೊಂದಿಗೆ ಸಮೀಕರಿಸಿ ಮಾತನಾಡಬಲ್ಲರೂ. ಇನ್ನೊಂದೆಡೆ ಸಂಕುಚಿತ ದೃಷ್ಟಿಕೋನ ಹೊಂದಿರುವವರು ತಮ್ಮ ಮತ್ತು ಇತರರ ಹೋರಾಟದ ನಡುವೆ ಅಂತರ ಬೆಳೆಸಿಕೊಳ್ಳುವರು. ನನಗೆ ಅನ್ನಿಸಿದಂತೆ ಜಾಗತೀಕರಣದ ಪ್ರಭಾವಕ್ಕೆ ಒಳಗಾದ ಭಾರತದ ಬುದ್ಧಿಜೀವಿಗಳು ಆಶ್ಚರ್ಯವೆಂಬಂತೆ ಜನಾತನ ಸರಕಾರದಡಿಯಲ್ಲಿ ಭಾರತದ ಕಾಡಿನಲ್ಲಿ ವಾಸಿಸುತ್ತಿರುವ ಜನರಿಗಿಂತ ಹೆಚ್ಚು ಸಂಕುಚಿತ ಮನೋಭಾವ ಹೊಂದಿದ್ದಾರೆ. ಕಾಡಿನಲ್ಲಿರುವವರಿಗೆ ಪ್ರಪಂಚದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಹೋರಾಟಗಳ ಬಗ್ಗೆ ಅರಿವಿದೆ, ಅದೇ ನಗರ ಕೇಂದ್ರಿತ ಜನರಲ್ಲಿ ಮಾಹಿತಿ ಲಭ್ಯವಿದ್ದರು ಕೂಡ – ಒಂದೋ ತಿಳಿಯಲು ಆಸಕ್ತಿಯಿಲ್ಲ ಅಥವಾ ತಿಳಿದ ಮೇಲೂ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ.

ಬಸ್ತಾರಿನಲ್ಲಿ ಇತ್ತೀಚೆಗೆ ಶುರುವಾಗಿರುವ ಯುಧ್ಧದ ಬಗ್ಗೆ ಮೂರು ವಾದಗಳನ್ನು ಕೇಳಿದೆ, ಗೆರಿಲ್ಲಾ ವಲಯ ಮತ್ತು ಸುತ್ತಮುತ್ತಲಿನ ಆದಿವಾಸಿ ಜನಗಳ ಜೊತೆ ಮಾತನಾಡಿದಾಗ. ಮೊದಲನೆಯದಾಗಿ, ಸರಕಾರದಿಂದ ಘೋಷಿಸಲಾಗಿರುವ ಈ ಯುದ್ಧ ಆದಿವಾಸಿಗಳ ಭೂಮಿಯನ್ನು ವಶಪಡಿಸಿಕೊಳ್ಳಲು ಹವಣಿಸುತ್ತಿರುವ ದೊಡ್ಡ ಕಂಪನಿಗಳ ಸಲುವಾಗಿ. ಒಂದೋ ಒಪ್ಪಿಗೆಯನಿತ್ತು ಕೊಟ್ಟಷ್ಟು ಪರಿಹಾರ ತೆಗೆದುಕೊಂಡು ಜಾಗ ಖಾಲಿ ಮಾಡಬೇಕು, ಇಲ್ಲವಾದಲ್ಲಿ ಭೂಮಿ ಕಳೆದುಕೊಳ್ಳುವುದಷ್ಟೇ  ಅಲ್ಲ ಯಾವುದೇ ಪರಿಹಾರ ದೊರಕದು ಎಂದು ಬೆದರಿಕೆಯೊಡ್ಡಲಾಗಿದೆ [ ಸಿ.ಪಿ.ಐ ಬೆಂಬಲಿತ ಆದಿವಾಸಿ ಮಹಾಸಭಾ ಹೆಚ್ಚು ಪರಿಹಾರವನ್ನೂ ಒಪ್ಪಿಕೊಳ್ಳಿ ಎಂದು ಜನರನ್ನು ಒತ್ತಾಯಿಸುತ್ತಿರುವ ವರದಿಗಳಿವೆ] ಇವರ ಈ ಹೇಳಿಕೆ ನನ್ನಲ್ಲಿ ಕುತೂಹಲವನ್ನು ಹೆಚ್ಚಿಸಿತು. ಅದರ ಬಗ್ಗೆ ಮತ್ತಷ್ಟು ವಿವರ ಕಲೆಹಾಕಲಾರಂಭಿಸಿದೆ. ಪರಿಹಾರ ಸಿಗುವುದಿಲ್ಲ ಎಂಬುದರ ಅರ್ಥವೇನು? “ಕಂಪೆನಿಯ ವಕ್ತಾರರು ನಮಗೆ ಎಚ್ಚರಿಕೆ ನೀಡಿದ್ದಾರೆ, ಅವರು ಕೊಡುವ ಪರಿಹಾರವನ್ನು  ಒಪ್ಪಿಕೊಳ್ಳದಿದ್ದಲ್ಲಿ ಆ ಹಣ ಇತರರ ಕೈಗೆ ಸೇರುತ್ತೆ ಎಂದು” ನಂತರ ವಿವರಿಸಿದರು, ನಕಲಿ ಚೆಕ್ಕುಗಳು, ಚೆಕ್ಕುಗಳು ಬೌನ್ಸ್ ಆಗಿರುವುದು, ಭೂಮಿಯ ಒಡೆಯರಿಗಲ್ಲದೇ ಇತರರಿಗೆ ಚೆಕ್ಕು ವಿತರಿಸಿರುವುದು – ಇವೆಲ್ಲಾ ಆಗಾಗ್ಯೆ ನಡೆಯುವ ಘಟನೆಗಳೆಂದು. ಎರಡನೆಯದಾಗಿ, ಅವರು ಭೂಮಿಗೆ ಬದಲಾಗಿ ಕೊಡುವ ಹಣದ ರೂಪದ ಪರಿಹಾರ ಎಷ್ಟರ ಮಟ್ಟಿಗೆ ಸಾಧು? ಅವರ ಭೂಮಿ ಇಲ್ಲಿಯವರೆಗೆ ಅವರ ಜೀವನವನ್ನಷ್ಟೇ ಅಲ್ಲ ಮುಂಬರುವ ಪೀಳಿಗೆಯ ಜೀವನಕ್ಕೂ ಭದ್ರತೆ ಒದಗಿಸುತ್ತದೆ. ಇದರೊಟ್ಟಿಗೆ ಇವರ ಜೀವನಕ್ಕೆ ಆಧಾರವಾಗಿರುವುದು ಕೇವಲ ಭೂಮಿಯಷ್ಟೇ ಅಲ್ಲ, ಮರಗಳಾದ ಸುಳ್ಫಿ, ಮಾವು, ಹುಣಿಸೆ – ಇವೆಲ್ಲ ಅವರಿಗೆ ಜೀವನೋಪಾಯ ರೂಪಿಸಿಕೊಳ್ಳಲು ಸಹಾಯ ಮಾಡಿವೆ, ಹಸಿವನ್ನು ನೀಗಿಸುವುದರ ಜೊತೆಗೆ. ಮೂರನೆಯದಾಗಿ ಸರಕಾರ ಹೇಳುತ್ತಿರುವ ಅಭಿವೃಧ್ಧಿ, ವಿಕಾಸ ಕೇವಲ ಬಕ್ವಾಸ್ ಮಾತುಗಳಷ್ಟೇ, ಬೈಲಾದಿಲ್ಲಾದಲ್ಲಿ ನಡೆದಿರುವುದನ್ನು ನೋಡಿದ ನಂತರ. ಇಷ್ಟೆಲ್ಲಾ ವರುಷಗಳಲ್ಲಿ ಆದಿವಸಿಗಳು ತಮ್ಮ ಜೀವನೋಪಾಯವನ್ನು ತಾವೇ ನಡೆಸಿಕೊಂಡಿದ್ದಾರೆ, ಸರಕಾರಗಳು ಮಾಡಿದ ಸಹಾಯ ಕಿಂಚಿತ್ ಗಿಂತಲೂ  ಕಡಿಮೆ. ಆದರೀಗ ಕಂಪನಿಗಳಿಗೆ ಭೂಮಿ ಬೇಕಾದಾಗ ‘ಅಭಿವೃದ್ಧಿಯ ಮಾತನಾಡುತ್ತದೆ. ನಮ್ಮನ್ನು ನಮ್ಮ ಪಾಡಿಗೆ ಬಿಡಲಿ ಎನ್ನುತ್ತಾರವರು. ಒಬ್ಬ ಹಿರಿಯ ಆದಿವಾಸಿ ಹೇಳಿದ ” ಸರಕಾರಕ್ಕೆ ಅಭಿವೃಧ್ಧಿಯ ಬಗ್ಗೆ ಅಷ್ಟೊಂದು ಕಾಳಜಿ ಇದ್ದಾರೆ ಇಷ್ಟೆಲ್ಲಾ ವರ್ಷಗಳು ವ್ಯವಸಾಯವನ್ನು ಅಭಿವೃಧ್ಧಿ ಪಡಿಸಲು ಅವರಿಗಿದ್ದ ಅಡ್ಡಿಯಾದರೂ ಏನು?”

ಕಾಡಿನೊಳಗೆ ಹಿರಿಯರ ಬಳಿ ಸಭೆ ನಡೆಸುತ್ತಿದ್ದಾಗ ಅವರಾಡಿದ ಮಾತುಗಳು ಮನ ತಟ್ಟಿತು. “ನಮಗೆ ವಯಸ್ಸಾಗಿದೆ, ಜೀವನ ಜೀವಿಸಿಯಾಯಿತು. ಆದ್ದರಿಂದ ಸರಕಾರ ಈ ಭೂಮಿ ಪರಭಾರೆ ಮಾಡಿಕೊಳ್ಳುವುದರ ವಿರುದ್ಧ ನನ್ನ ಪ್ರಾಣ ಮುಡಿಪಾಗಿಡಲೂ  ತಯಾರು. ನಾನಿದನ್ನು ಖಂಡಿತ ಮಾಡ್ತೀನಿ. ನಾವೆಲ್ಲರೂ” ತನ್ನ ತಲೆಮಾರಿನ ಇತರರೆಡೆಗೆ ಕೈ ತೋರುತ್ತಾ ಹೇಳಿದ ” ಇಲ್ಲೇ ಇರ್ತೀವಿ ಮತ್ತು ಹೋರಾಡುತ್ತಿವಿ, ನೋಡೋಣ ನಮ್ಮಲ್ಲೆಷ್ಟು ಜನರನ್ನು ಸೈನಿಕರು ಸಾಯಿಸುತ್ತಾರೆಂದು. ನಮ್ಮೆಲ್ಲರನ್ನು ಸಾಯಿಸಬಲ್ಲರಾ ಅವರು?” ” ನಮಗೆ ಹೋರಾಡುವುದು ತಿಳಿದಿದೆ” ಸಿಟ್ಟು ಕಣ್ಣಿಗೆ ಕಾಣುತ್ತಿತ್ತು. ಹೊರಗಿನ ಜನರಿಗೆ ಏನು ಹೇಳಬೇಕೆಂದು ಕೇಳಿದೆ. ” ದಯವಿಟ್ಟು ಅವರಿಗೆ ಹೇಳಿ ಅವರ ಸರಕಾರ ಸುಳ್ಳಾಡುತ್ತಿದೆಯೆಂದು. ಇವತ್ತು ನನ್ನ ಭೂಮಿ ಮತ್ತು ಕಾಡು ಕಸಿಯುತ್ತಾರೆ , ಇವರ ಈ ಕಾರ್ಯ ನಾಳೆ ನನ್ನ ಜೀವ ಕಸಿಯುತ್ತದೆ” ಇದರ ಅರ್ಥವೇನೆನ್ದು ಕೇಳಿದೆ? ” ಈ ಕಾಡು ಮತ್ತು ಭೂಮಿಯೇ ನಮ್ಮ ಜೀವ”

ಭಾರತದ ಗೃಹಮಂತ್ರಿ ಪಿ. ಚಿದಂಬರಂ ತೆಹೆಲ್ಕಾಗೆ ಹೇಳಿದ್ದನ್ನು ಓದಿ ಹೇಳಿದೆ ” ನನ್ನ ಮನಕ್ಕೆ ಸಂಪೂರ್ಣ ಮನವರಿಕೆಯಾಗಿದೆ, ಯಾವುದೇ ದೇಶ ತನ್ನಲ್ಲಿರುವ ನೈಸರ್ಗಿಕ ಮತ್ತು ಮಾನವ ಸಂಪನ್ಮೂಲವನ್ನು ಉಪಯೋಗಿಸದೆ ಅಭಿವೃಧ್ಧಿ ಹೊಂದಲಾರದು. ಗನಿಗಳಲ್ಲಿನ ಆಸ್ತಿಯನ್ನು ಕೊಯ್ಲು ಮಾಡಬೇಕು ಮತ್ತು ಜನರಿಗಾಗಿ ಉಪಯೋಗಿಸಬೇಕು. ಆದಿವಾಸಿಗಳು ಬೇಟೆಗಾರರಾಗಿಯೇ ಉಳಿಯಬೇಕೆಂದು ಬಯಸುತ್ತಿರಾ? ಅವರನ್ನು anthropology ವಸ್ತು ಸಂಗ್ರಹಾಲಯದಲ್ಲಿ ಇಡಲು ಬಯಸುತ್ತಿರಾ? ಹೌದು , ಗನಿಗಳಲ್ಲಿನ ವಸ್ತುಗಳನ್ನು ಇನ್ನು ಹತ್ತು ಸಾವಿರ ವರ್ಷಗಳು ಭೂಮಿಯಲ್ಲೇ ಇರುವಂತೆ ಮಾಡಬಹುದು, ಆದರದು ಈ ಜನರಿಗೆ ಅಭಿವೃದ್ಧಿ ತರುತ್ತದಾ? ಅವರು ನಿಯಂ ಗಿರಿ ಬೆಟ್ಟವನ್ನು ಪೂಜಿಸುತ್ತಾರೆ ಎನ್ನುವ ಸಂಗತಿಯನ್ನು ಗೌರವಿಸೋಣ, ಆದರದು ಅವರ ಕಾಲಿಗೆ ಶೂ ಒದಗಿಸುತ್ತದೆಯೇ? ಅಥವಾ ಅವರ ಮಕ್ಕಳಿಗೆ ಶಾಲೆ? ಅವರು ಪೌಷ್ಟಿಕಾಮಶದಿಂದ ನರಳುತ್ತಿರುವುದನ್ನು ತಪ್ಪಿಸುತ್ತದೆಯೇ? ಆರೋಗ್ಯಡೆದೆಗಿನ ಗಮನ? ಗಣಿಗಾರಿಕೆಯ ಬಗೆಗಿನ ಚರ್ಚೆ ಶತಮಾನಗಳಿಂದ ನಡೆದಿದೆ. ಅದರಲ್ಲಿ ಹೊಸದೇನೂ ಇಲ್ಲ.”

“ನಾವಿಲ್ಲಿ ಹಸಿವಿನಿಂದ ಸಾಯುತ್ತಿಲ್ಲ” ಅವರು ಹೇಳಿದರು. ಆದರೆ ವಲಯದ ಹೊರಗಿರುವವರು? ” ಜನಾತನ ಸರಕಾರವನ್ನು ತಲುಪಲು ಅವಕಾಶವನ್ನಿತ್ತರೆ ಅವರಿಗೂ ಅನುಕೂಲವಾಗುತ್ತೆ” ನಿಮಗೆ ಅಭಿವೃದ್ಧಿ ಬೇಡವಾ? ನಾನು ಒತ್ತಾಯಿಸಿ ಕೇಳಿದೆ. ” ಇಲ್ಲ ಲೂಟಿ ಮಾಡಲು ಹೊರಗಿನಿಂದ ದೊಡ್ಡ ಬಂಡವಾಳಶಾಹಿಗಳು ಬರುವುದು ಬೇಡ. ಬೈಲಾದಿಲ್ಲಾದಲ್ಲಿ ಏನಾಯಿತೆಂದು ನಮಗೆ ತಿಳಿದಿದೆ” ಈ ವಾಕ್ಯ ಬಹುಮುಖ್ಯವಾದುದು ” ನೋಡಿ ಅವರು ಬೈಲಾದಿಲ್ಲಾದಲ್ಲಿ ಏನು ಮಾಡಿದರು”

Posted in ಅನುವಾದ | Tagged: , | Leave a Comment »