source – prajavani
‘ನಕಲಿ ಎನ್ಕೌಂಟರ್’ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕೆಂಬ ಅರ್ಜಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ಕೇಳಿ ಸುಪ್ರೀಂಕೋರ್ಟ್ ಶುಕ್ರವಾರ ಕೇಂದ್ರ ಹಾಗೂ ಆಂಧ್ರ ಪ್ರದೇಶ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ. |
|||
ನವದೆಹಲಿ (ಪಿಟಿಐ): ಪ್ರಮುಖ ಮಾವೊವಾದಿ ನಾಯಕ ಚೆರುಕುರಿ ರಾಜ್ಕುಮಾರ್ ಅಲಿಯಾಸ್ ಆಜಾದ್ ಮತ್ತು ಅವರ ಸಹಚರ ಎಂದು ಹೇಳಲಾದ ಪತ್ರಕರ್ತ ಹೇಮಚಂದ್ರ ಪಾಂಡೆ ಅವರ ‘ನಕಲಿ ಎನ್ಕೌಂಟರ್’ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕೆಂಬ ಅರ್ಜಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ಕೇಳಿ ಸುಪ್ರೀಂಕೋರ್ಟ್ ಶುಕ್ರವಾರ ಕೇಂದ್ರ ಹಾಗೂ ಆಂಧ್ರ ಪ್ರದೇಶ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.
‘ಗಣರಾಜ್ಯವು ತನ್ನದೇ ಸ್ವಂತ ಮಕ್ಕಳನ್ನು ಕೊಲ್ಲಲು ನಾವು ಅವಕಾಶ ಮಾಡಿಕೊಡುವುದಿಲ್ಲ’ ಎಂದು ನ್ಯಾಯಮೂರ್ತಿಗಳಾದ ಅಫ್ತಾಬ್ ಆಲಂ ಹಾಗೂ ಆರ್.ಎಂ.ಲೋಧ ಅವರನ್ನು ಒಳಗೊಂಡ ಪೀಠ ಈ ಸಂದರ್ಭದಲ್ಲಿ ಹೇಳಿದೆ. ಸಾಮಾಜಿಕ ಕಾರ್ಯಕರ್ತ ಸ್ವಾಮಿ ಅಗ್ನಿವೇಶ್ ಮತ್ತು ಪಾಂಡೆ ಅವರ 30 ವರ್ಷದ ಪತ್ನಿ ಬಬಿತಾ ಈ ಅರ್ಜಿ ಸಲ್ಲಿಸಿದ್ದಾರೆ. ಆರು ವಾರಗಳಲ್ಲಿ ಪ್ರತಿಕ್ರಿಯೆ ನೀಡುವಂತೆ ಸರ್ಕಾರಗಳಿಗೆ ತಿಳಿಸಿರುವ ಪೀಠ, ಉತ್ತಮ ಹಾಗೂ ವಿಶ್ವಾಸಪೂರ್ವಕ ಪ್ರತಿಕ್ರಿಯೆ ಬರುವ ಭರವಸೆ ಇದೆ ಎಂದು ಹೇಳಿದೆ. ನಿಷೇಧಿತ ಸಿಪಿಐ (ಮಾವೊವಾದಿ) ಸಂಘಟನೆಯ ಸದಸ್ಯ ಹಾಗೂ ತಲೆಗೆ 12 ಲಕ್ಷ ರೂಪಾಯಿ ಬಹುಮಾನ ಘೋಷಣೆಯಾಗಿದ್ದ 58 ವರ್ಷದ ಆಜಾದ್, 32 ವರ್ಷದ ಪಾಂಡೆ ಅವರನ್ನು ಮಹಾರಾಷ್ಟ್ರ ಗಡಿಯಲ್ಲಿರುವ ಆಂಧ್ರಪ್ರದೇಶದ ಆದಿಲಾಬಾದ್ ಜಿಲ್ಲೆಯಲ್ಲಿ ಜುಲೈ 1ರ ರಾತ್ರಿ ಪೊಲೀಸರು ಎನ್ಕೌಂಟರ್ನಲ್ಲಿ ಹತ್ಯೆ ಮಾಡಿದ್ದರು. ಈ ಇಬ್ಬರ ಮರಣೋತ್ತರ ವರದಿ ಮತ್ತು ಮಾನವ ಹಕ್ಕು ಕಾರ್ಯಕರ್ತರ ಸ್ಥಳ ಪರಿಶೀಲನೆಯಿಂದ ಎನ್ಕೌಂಟರ್ ನಕಲಿ ಎಂಬುದು ದೃಢಪಡುತ್ತದೆ, ಇಬ್ಬರಿಗೂ ಅತ್ಯಂತ ಸಮೀಪದಿಂದ ಗುಂಡು ಹಾರಿಸಲಾಗಿದೆ. |
Archive for the ‘ನಕ್ಸಲಿಸ೦’ Category
ಕೇಂದ್ರ, ಆಂಧ್ರಕ್ಕೆ ನೋಟಿಸ್
Posted by ajadhind on ಜನವರಿ 15, 2011
Posted in ನಕ್ಸಲಿಸ೦ | Tagged: andhra, azad, hemchandra pandey | Leave a Comment »
ನಕ್ಸಲ್ ವರ್ಗೀಸ್ ಹತ್ಯೆ:ಮಾಜಿ ಐಜಿಪಿ ದೋಷಿ
Posted by ajadhind on ಅಕ್ಟೋಬರ್ 28, 2010
ನಲ್ವತ್ತು ವರ್ಷಗಳ ಹಿಂದೆ ಪೊಲೀಸ್ ಕಾರ್ಯಾಚರಣೆ ವೇಳೆ ಹತನಾದ ನಕ್ಸಲ್ ಮುಂಖಡ ಎ. ವರ್ಗೀಸ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ತೀರ್ಪು ಪ್ರಕಟಿಸಿರುವ ಸಿಬಿಐ ವಿಶೇಷ ನ್ಯಾಯಾಲಯ, ಮಾಜಿ ಪೊಲೀಸ್ ಮಹಾ ನಿರೀಕ್ಷಕ ಕೆ. ಲಕ್ಷ್ಮಣ ದೋಷಿ ಎಂದು ಹೇಳಿದೆ. ಶಿಕ್ಷೆ ಪ್ರಮಾಣವನ್ನು ಗುರುವಾರ ಪ್ರಕಟಿಸಲಿದೆ. | |
ಕೊಚ್ಚಿ (ಪಿಟಿಐ): ಆದರೆ, ಇದೇ ಪ್ರಕರಣದಲ್ಲಿ ಆರೋಪಿಯಾಗಿದ್ದ ಮಾಜಿ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಪಿ. ವಿಜಯನ್ ಅವರನ್ನು ನಿರ್ದೋಷಿ ಎಂದು ಬಿಡುಗಡೆ ಮಾಡಿದೆ. ವೈನಾಡ್ ಜಿಲ್ಲೆಯ ತಿರುವೆನಲ್ಲಿ ಅರಣ್ಯ ಪ್ರದೇಶದಲ್ಲಿ 1970ರ ಫೆ. 18ರಂದು ನಡೆದ ಎನ್ಕೌಂಟರ್ ಎನ್ನಲಾದ ಪ್ರಕರಣದಲ್ಲಿ ನಕ್ಸಲ್ ಮುಖಂಡ ವರ್ಗೀಸ್ನ ಹತ್ಯೆಯಾಗಿತ್ತು. ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಲಾಗಿತ್ತು. ‘ಆಗ ಪೊಲೀಸ್ ಉಪ ಅಧೀಕ್ಷಕರಾಗಿದ್ದ ಕೆ. ಲಕ್ಷ್ಮಣ ಅವರ ನಿದೇರ್ಶನದಂತೆ ಸಿಆರ್ಪಿಎಫ್ನ ಕಾನ್ಸ್ಸ್ಟೆಬಲ್ ಪಿ. ರಾಮಚಂದ್ರನ್ ನಾಯರ್, ವರ್ಗೀಸ್ನನ್ನು ಹತ್ಯೆ ಮಾಡಿದ್ದರು’ ಎಂದು ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಎಸ್. ವಿಜಯಕುಮಾರ್ ತೀರ್ಪಿನಲ್ಲಿ ಹೇಳಿದ್ದಾರೆ. ಈ ಪ್ರಕರಣದಲ್ಲಿ ರಾಮಚಂದ್ರ ನಾಯರ್ ಪ್ರಥಮ ಆರೋಪಿಯಾಗಿದ್ದು, ಅವರು ಮೃತರಾದ್ದಾರೆ. ಎರಡನೇ ಆರೋಪಿಯಾಗಿರುವ 80 ವರ್ಷ ವಯಸ್ಸಿನ ಕೆ. ಲಕ್ಷ್ಮಣ ಅವರನ್ನು ನ್ಯಾಯಾಲಯ ದೋಷಿ ಎಂದು ಪರಿಗಣಿಸಿದೆ. ಆದರೆ, ಪ್ರಕರಣದ 3ನೇ ಆರೋಪಿಯಾದ 83 ವರ್ಷ ವಯಸ್ಸಿನ ಪಿ. ವಿಜಯನ್ ಅವರನ್ನು ದೋಷಿ ಎನ್ನಲು ಸಾಕಷ್ಟು ಸಾಕ್ಷ್ಯಗಳು ಇಲ್ಲದ ಕಾರಣ ಅವರನ್ನು ಸಂಶಯದ ಲಾಭದ ಮೇಲೆ ನಿರ್ದೋಷಿ ಎಂದು ಬಿಡುಗಡೆ ಮಾಡಲಾಗಿದೆ ಎಂದು ನ್ಯಾಯಾಲಯ ಹೇಳಿದೆ. ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಈ ಇಬ್ಬರು ಮಾಜಿ ಪೊಲೀಸ್ ಅಧಿಕಾರಿಗಳು ಇಂದು ಗಾಲಿ ಕುರ್ಚಿಯಲ್ಲಿ ಆಗಮಿಸಿದ್ದರು. ನ್ಯಾಯಮೂರ್ತಿಗಳು ತೀರ್ಪು ಪ್ರಕಟಿಸುತ್ತಿದಂತೆ ಕೆ. ಲಕ್ಷ್ಮಣ ಅವರನ್ನು ಎರ್ನಾಕುಲಂನ ಉಪ ಕಾರಾಗೃಹಕ್ಕೆ ಕರೆದೊಯ್ಯಲಾಯಿತು. ಈ ಪ್ರಕರಣ ನಡೆದಾಗ ಕೋಯಿಕೋಡ್ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ವಿಜಯನ್, ತೀರ್ಪಿನ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ. ಕೆ. ಲಕ್ಷ್ಮಣ ಮತ್ತು ಪಿ. ವಿಜಯನ್ ಅವರ ಆದೇಶದಂತೆ ವರ್ಗೀಸ್ನನ್ನು ಗುಂಡಿಕ್ಕಿ ಕೊಂದೆ ಎಂದು ಈ ಪ್ರಕರಣದ ಮೊದಲ ಆರೋಪಿ ರಾಮಚಂದ್ರನ್ ನಾಯರ್ 1998ರಲ್ಲಿ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದರು. ಇದರಿಂದ ಈ ಪ್ರಕರಣ ಬಹುದೊಡ್ಡ ಸುದ್ದಿಯಾಗಿ ಕುತೂಹಲ ಕೆರಳಿಸಿತ್ತು. |
Posted in ಇನ್ನೊಂದು ಮುಖ, ನಕ್ಸಲಿಸ೦, ಪ್ರಸ್ತುತ | Tagged: fake encounter, kerala, verghese | Leave a Comment »
DAYS AND NIGHT IN THE HEARTLAND OF REBELLION – PART 4[KANNADA]
Posted by ajadhind on ಜುಲೈ 4, 2010
Posted in ಅನುವಾದ, ನಕ್ಸಲಿಸ೦ | Tagged: goutham navlaka | Leave a Comment »
ಕರ್ನಾಟಕದ ಗೃಹ ಮಂತ್ರಿಗೊಂದು ಪತ್ರ.
Posted by ajadhind on ಜೂನ್ 23, 2010
” ಕರ್ನಾಟಕದಲ್ಲಿ ಈಗ ನಕ್ಸಲರು ಇಲ್ಲ. ನಕ್ಸಲ್ ಚಟುವಟಿಕೆಯನ್ನು ಸಂಪೂರ್ಣವಾಗಿ ನಿರ್ನಾಮ ಮಾಡಿದ್ದೇವೆ. ನಕ್ಸಲ್ ಪೀಡಿತ ಪಟ್ಟಿಯಿಂದ ಕರ್ನಾಟಕ ಹೊರಕ್ಕೆ.” – ಗೃಹ ಸಚಿವ ವಿ.ಎಸ್.ಆಚಾರ್ಯ.
ನಕ್ಸಲರೆಂದರೆ ಕಾಡಿನಲ್ಲಿದ್ದು ಬಂದೂಕು ಹಿಡಿದಿರುವವರು ಮಾತ್ರ ಎಂದು ತಿಳಿದವರಿಂದ ಮಾತ್ರ ಈ ರೀತಿಯ ಹೇಳಿಕೆ ಬರಲು ಸಾಧ್ಯ. ಹೌದು , ಬಹಳಷ್ಟು ಜನ ಪ್ರಮುಖ ನಾಯಕರ ಬಂಧನದಿಂದ ರಾಜ್ಯದಲ್ಲಿ ನಕ್ಸಲರ ಸಂಖ್ಯೆ ಕ್ಷೀಣಿಸಿದೆ. ಆದರೆ ಕರ್ನಾಟಕ ‘ನಕ್ಸಲ್ ಮುಕ್ತ’ರಾಜ್ಯವಾ?.
ಮೊದಲನೆಯದಾಗಿ ನಕ್ಸಲ್ ಚಳುವಳಿ ಭಾರತದಾದ್ಯಂತ ವ್ಯಾಪಿಸಲು ಮೂಲ ಕಾರಣ ದೇಶದ ಆಡಳಿತದಲ್ಲಿನ ಲೋಪದೋಷಗಳು, ರಾಜ್ಯಕ್ಕೂ ಅದು ಅನ್ವಯವಾಗುತ್ತೆ. ಒಂದೊಮ್ಮೆ ನಕ್ಸಲ್ ಹೋರಾಟ ಸಂಪೂರ್ಣವಾಗಿ ನಿಲ್ಲಬೇಕಾದರೆ ಸರಕಾರಗಳು ಸರಿಯಾಗಿ ಕಾರ್ಯ ನಿರ್ವಹಿಸಬೇಕು. ಆದರೆ ಅದು ಆಗುತ್ತಿದೆಯೇ? ಕರ್ನಾಟಕದ ಉದಾಹರಣೆಯನ್ನೇ , ಅದರಲ್ಲೂ ಕೇವಲ ಈಗಿನ ಸರಕಾರದ ಉದಾಹರಣೆಯನ್ನೇ ತೆಗೆದುಕೊಳ್ಳುವುದಾದರೆ ಬಿ.ಜೆ.ಪಿ. ಸರಕಾರ ಅಧಿಕಾರಕ್ಕೆ ಬಂದ ನಂತರ ಕೊಟ್ಟಿರುವ ಆಡಳಿತ ಜನರಲ್ಲಿ ಭರವಸೆ ಮೂಡಿಸುವ ಹಾಗಿದೆಯಾ? ಗಣಿ ಮಾಫಿಯಾದವರ ಅಟ್ಟಹಾಸ , ಮಂತ್ರಿಗಳ ಭ್ರಷ್ಟಾಚಾರ, ಹಾದರ, ಕೋಮುಗಲಭೆಗಳು, ಎಲ್ಲಾ ಕೋಮಿನ ಮೂಲಭೂತವಾದಿಗಳ ಅಟ್ಟಹಾಸ, ಉತ್ತರ ಕರ್ನಾಟಕದಲ್ಲಾದ ಪ್ರವಾಹ ಸಂತ್ರಸ್ತರಿಗೆ ಎಲ್ಲಾ ಪಕ್ಷದವರು ಮಾಡಿದ ಮಾಡುತ್ತಿರುವ ಮೋಸ – ಜನರು ಈ ಕಾರಣಕ್ಕಾಗಿ ‘ಪ್ರಜಾ ಪ್ರಭುತ್ವದಲ್ಲಿ’ ನಂಬಿಕೆ ಇಡಬೇಕಾ? ಅಲ್ಲಿಗೂ ಜನರು ಸರಕಾರಕ್ಕೆ ಬೆಂಬಲ ಕೊಡುವಂತೆ ಇದ್ದಾರೆ ಎಂಬುದಕ್ಕೆ ಕಾರಣ ಅವರಿಗೆ ಮತ್ಯಾವ ಪರ್ಯಾವವೂ ಕಾಣದಿರುವುದೇ ಆಗಿದೆ.
ಸದ್ಯದ ಮಟ್ಟಿಗೆ ರಾಜ್ಯದಲ್ಲಿ ನಕ್ಸಲ್ ಚಟುವಟಿಕೆ ಹಿನ್ನೆಡೆ ಅನುಭವಿಸಿರಬಹುದು. ಆದರೆ ರಾಜ್ಯದ ಜನರಿಗೆ ಒಂದು ಸಂದೇಶ ಮುಟ್ಟಿದೆ. ನಮ್ಮನ್ನು ಸರಕಾರ ನಿರ್ಲ್ಯಕ್ಷಿಸುತ್ತಿದ್ದಾಗ ನಕ್ಸಲ್ ಚಳುವಳಿ ಮಾತ್ರ ನಮ್ಮ ಸಮಸ್ಯೆಗಳಿಗೆ ಉತ್ತರವಾಗಬಲ್ಲದು ಎಂದು. ಇದು ಮಲೆನಾಡಿನಲ್ಲಿ ನಕ್ಸಲರಿಗೆ ಸಿಕ್ಕ ಗೆಲುವು. ಸರಕಾರದ ಅಧಿಕಾರಿಗಳೇ ಹೇಳಿರುವಂತೆ ಕೆಲವು ಉತ್ತಮ ಅಧಿಕಾರಿಗಳ ನೆರವಿನಿಂದ ಮಲೆನಾಡಿನಲ್ಲಿ ನಕ್ಸಲ್ ಪ್ರಭಾವ ತಗ್ಗಿದೆಯಂತೆ. ಅಲ್ಲಿಗೆ ಉತ್ತಮ ಕೆಲಸ ಮಾಡುವ ಅಧಿಕಾರಿಗಳು ನಮ್ಮ ಜಾಗಕ್ಕೆ ಬರಬೇಕಾದರೆ ಮತ್ತು ಅಧಿಕಾರಿಗಳು ನಮ್ಮ ಪ್ರದೇಶದಲ್ಲಿ ಉತ್ತಮ ಕೆಲಸ ಮಾಡಬೇಕಾದರೆ ಒಂದಷ್ಟು ದಿನಗಳ ಮಟ್ಟಿಗಾದರೂ ಅಲ್ಲಿನ ಜನರು ನಕ್ಸಲ್ ಹೋರಾಟದಲ್ಲಿ ಭಾಗವಹಿಸಬೇಕೆಂದು ಸರಕಾರವೇ ಪರೋಕ್ಷವಾಗಿ ತಿಳಿಸಿದಂತಾಯಿತು.
ಉಳಿದಂತೆ ರಾಜ್ಯದ ಬಹುತೇಕ ಶಾಂತ ರೀತಿಯ ಹೋರಾಟಗಳನ್ನು ರಾಜ್ಯ ಸರಕಾರ ತನ್ನ ಕುತಂತ್ರದಿಂದ, ಅಧಿಕಾರದ ಬಲಪ್ರಯೋಗದಿಂದ ಹತ್ತಿಕ್ಕಿರುವುದನ್ನು ಜನರು ನೋಡಿದ್ದಾರೆ. ಇತ್ತೀಚಿನ ಉದಾಹರಣೆ ಗುಲ್ಬರ್ಗದ ಅಣು ವಿದ್ಯುತ್ ಸ್ಥಾವರ.
ಅಭಿವೃದ್ಧಿಯ ಹೆಸರಿನಲ್ಲಿ ಸಾವಿರಾರು ಎಕರೆಗಳನ್ನು ಕೃಷಿಯೇತರ ಚಟುವಟಿಕೆಗಳಿಗೆ ಕೊಡಲು ಹೊರಟಿದೆ ನಮ್ಮ ಸರಕಾರ. ನಕ್ಸಲ್ ಹೋರಾಟವನ್ನು ಬಿಟ್ಟು ಉಳಿದ ಯಾವುದೇ ಹೋರಾಟವನ್ನು ಅಲ್ಲಿನ ಜನ ನೆಚ್ಚಿಕೊಂಡರೆ ಗುಲ್ಬರ್ಗದ ರೈತರಿಗಾದ ಸ್ಥಿತಿಯೇ ಅವರಿಗೂ ಆಗುವ ಸಾಧ್ಯತೆಗಳು ಅಧಿಕ. ಒಂದೊಮ್ಮೆ ಸರಕಾರ ತನ್ನ ಅಧಿಕಾರದ ಬಲದಿಂದ ಜನರನ್ನು ಬೆದರಿಸಿ ಕೃಷಿಯೋಗ್ಯ ಭೂಮಿಯನ್ನು ವಶಪಡಿಸಿಕೊಂಡರೆ ನಂತರದ ದಿನಗಳಲ್ಲಿ ಆಕಾಶದ ಕಡೆ ಮುಖ ಮಾಡುವ ಆಹಾರ ಉತ್ಪನ್ನಗಳ ಬೆಲೆಯ ಬಿಸಿ ಜನರಿಗಿ ಮುಟ್ಟಿದಾಗ ಶುರುವಾಗುವ ಹೋರಾಟವನ್ನು ತಡೆಯಲು ಸರಕಾರದ ಬಳಿ ‘ ಅಪರೇಷನ್ ಗ್ರೀನ್ ಹಂಟ್’ ನಂತಹ ಯೋಜನೆಗಳನ್ನು ಬಿಟ್ಟು ಬೇರೆ ಯೋಚನೆಗಳಿವೆಯೇ?
Posted in ಕರ್ನಾಟಕ, ನಕ್ಸಲಿಸ೦, ಪತ್ರಿಕಾ ಪ್ರಕಟಣೆ, ಪ್ರಸ್ತುತ | Tagged: naxalism, naxalism in karnataka, press release, v s acharya | Leave a Comment »
ನಕ್ಸಲ್ ನಾಯಕ ನಂದಕುಮಾರ್ ಬಂಧನ
Posted by ajadhind on ಜೂನ್ 2, 2010
ಪ್ರಜಾವಾಣಿ ವಾರ್ತೆ
ಶಿವಮೊಗ್ಗ: ನಂದಕುಮಾರ್ನನ್ನು ನಾಲ್ಕೈದು ದಿನಗಳ ಹಿಂದೆಯೇ ಬಂಧಿಸಿದ್ದು, ಮತ್ತಷ್ಟು ವಿಚಾರಣೆ ಹಿನ್ನೆಲೆಯಲ್ಲಿ ಸುದ್ದಿ ಬಹಿರಂಗಪಡಿಸಿಲ್ಲ ಎಂದು ತಿಳಿದು ಬಂದಿದೆ. ಬಂಧಿತ ನಂದಕುಮಾರ್ ಕೆಲ ದಿನಗಳಿಂದ ಹೈದರಾಬಾದ್ನಲ್ಲಿದ್ದ. ಖಚಿತ ಮಾಹಿತಿ ಆಧರಿಸಿ ಜಿಲ್ಲಾ ಪೊಲೀಸರು ವಶಕ್ಕೆ ಪಡೆದಿದ್ದಾರೆಂದು ಹೇಳಲಾಗುತ್ತಿದೆ. ಆದರೆ, ಈ ಬಂಧನವನ್ನು ಪೊಲೀಸರು ನಿರಾಕರಿಸಿದ್ದಾರೆ.
ಶಿವಮೊಗ್ಗ, ರಾಯಚೂರು ಜಿಲ್ಲೆಗಳಲ್ಲಿ ಕಳೆದ ಹಲವು ವರ್ಷಗಳಿಂದ ನಕ್ಸಲ್ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದ ನಂದಕುಮಾರ್ ಹಲವು ಆರೋಪಗಳನ್ನು ಎದುರಿಸುತ್ತಿದ್ದ. ನಕ್ಸಲ್ ಮುಖಂಡನಾಗಿದ್ದ ಈತನ ಮಾಹಿತಿ ನೀಡಿವರಿಗೆ ಪೊಲೀಸ್ ಇಲಾಖೆ ಒಂದು ಲಕ್ಷ ರೂ ಬಹುಮಾನ ಘೋಷಿಸಿತ್ತು.
ನಂದಕುಮಾರ್ ಮೂಲತಃ ಚಿಕ್ಕಮಗಳೂರಿನ ಕೊಪ್ಪ ತಾಲ್ಲೂಕಿನ ಕಾಚಿಕೊಪ್ಪ ಗ್ರಾಮದವನು. ಓದಿದ್ದು ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ. ವಿದ್ಯಾರ್ಥಿದೆಸೆಯಲ್ಲಿಯೇ ಹಲವು ಸಂಘಟನೆಗಳಲ್ಲಿ ಸಕ್ರಿಯವಾಗಿದ್ದ. ಕುದುರೆಮುಖ ಗಣಿಗಾರಿಕೆ ವಿರುದ್ಧ, ಅಲ್ಲಿನ ರಾಷ್ಟ್ರೀಯ ಉದ್ಯಾನ ವಿರುದ್ಧದ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದ. ಕುವೆಂಪು ವಿಶ್ವವಿದ್ಯಾಲಯದಲ್ಲಿ ಎಂಎ ಪದವಿ ಪಡೆದಿದ್ದು, ಸ್ನಾತಕೋತ್ತರ ಪದವಿ ಪಡೆದ ನಂತರ ಮಲವಗೊಪ್ಪದ ಆಶಾ ಎಂಬುವರನ್ನು ಮಂತ್ರಮಾಂಗಲ್ಯ ಪದ್ಧತಿಯಂತೆ ವಿವಾಹವಾಗಿದ್ದ. ಆಶಾ ಕೂಡ ಶಂಕಿತ ನಕ್ಸಲ್ ಆಗಿದ್ದು, ಆಶಾಳನ್ನು ಈಚೆಗೆ ಬೆಂಗಳೂರಿನಲ್ಲಿ ಪೊಲೀಸರು ಬಂಧಿಸಿದ್ದು, ಸದ್ಯ ಪೊಲೀಸ್ ವಶದಲ್ಲಿದ್ದಾಳೆ. ನಂದಕುಮಾರ್ ಮತ್ತು ಆಶಾ 1999ರಿಂದ ನಾಪತ್ತೆಯಾಗಿ ನಕ್ಸಲ್ ಚಟುವಟಿಕೆಯಲ್ಲಿ ತೊಡಗಿದ್ದರು.
ಬಂಧಿತ ನಂದಕುಮಾರ್ನನ್ನು ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸಲಾಗುತ್ತಿದೆ ಎನ್ನಲಾಗಿದೆ. ಆದರೆ, ಎಸ್ಪಿ ಎಸ್. ಮುರುಗನ್, ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
Posted in ಕರ್ನಾಟಕ, ನಕ್ಸಲಿಸ೦ | Tagged: nandakumar, shimoga | Leave a Comment »
ಆಪರೇಷನ್ ಗ್ರೀನ್ ಹಂಟ್ ನಿಂದ ನಕ್ಸಲರ ದಮನ ಸಾಧ್ಯವೇ?
Posted by ajadhind on ಮೇ 31, 2010
Posted in ನಕ್ಸಲಿಸ೦, ನನ್ನ ಲೇಖನಿಯಿ೦ದ, ಪ್ರಸ್ತುತ | Leave a Comment »
ಹತ್ಯೆಗಳ ಬಗ್ಗೆ?
Posted by ajadhind on ಮೇ 2, 2010
ಅಧ್ಯಾಯ 3
ನನ್ನ ಸಹಚರರರಿಗೆ ಬಹಳಷ್ಟು ಪ್ರಶ್ನೆಗಳನ್ನು ಕೇಳಿದೆ. ಪಕ್ಷ ಜನರನ್ನು ಕೊಂದು ಮನೆಗಳನ್ನು ಸುಡುತ್ತದೆ ಎಂದು ಹೇಳುತ್ತಾರೆಂದು ತಿಳಿಸಿದೆ. ‘ಮಾಹಿತಿದಾರನೆಂಬ’ ಚಿಕ್ಕ ಕಾರಣಕ್ಕೂ ಹತ್ಯೆ ಮಾಡಲಾಗುತ್ತದೆ. ಒಗ್ಗಟ್ಟಿನಿಂದ ಸಹಚರರು ಪ್ರತಿಭಟಿಸಿದರು “ನಾವು ಕೊಲೆ, ಲೂಟಿ, ಅತ್ಯಾಚಾರ ಮಾಡುವುದಿಲ್ಲ” ಜನರಿಗೆ ಸಹಾಯ ಮಾಡುತ್ತೇವೆ. ಚೇತು ಹೇಳಿದ , ನಾನು ದಕ್ಷಿಣ ದಂತೆವಾಡದಿಂದ ಬಂದಿದ್ದೇನೆ. ಅಲ್ಲಿ ಸಲ್ವಾ ಜುಡುಂ ಚಿಕ್ಕ ಹುಡುಗಿಯರ ಮೇಲೂ ಅತ್ಯಾಚಾರವೆಸಗಿದ್ದಾರೆ. ಅಸಹಾಯಕ ಜನರನ್ನು ಹೊತ್ತೊಯ್ಯುತ್ತಾರೆ. ಹಳ್ಳಿಗರನ್ನು ಕೊಲ್ಲುವ ಬದಲು ನಮ್ಮೆದುರಿಗೆ ಬಂದು ನಮ್ಮೊಡನ್ಯಾಕೆ ಹೋರಾಡುವುದಿಲ್ಲ? ಸುಖಲಾಲ್ ಹೇಳಿದ, ಅವನ ತಮ್ಮನನ್ನು ಜೈಲಿಗೆ ಹಾಕಿ ‘ಗೋಲಾದಲ್ಲಿ’ ಇಟ್ಟಿದ್ದಾರೆ. ಕೈ, ಪಾದಗಳಿಗೆ ಚೈನನ್ನು ಬಿಗಿದು ತಾಸುಗಟ್ಟಲೆ ಕುಳಿತಿರುವವನ ಭಂಗಿಯಲ್ಲಿರುವ ಶಿಕ್ಷೆ. ದಂಡಕಾರಣ್ಯ ಆದಿವಾಸಿ ಕಿಸಾನ್ ಮಜ್ದೂರ್ ಸಂಘಟನೆಯಲ್ಲಿ ಇದ್ದನೆಂಬುದೇ ಅವನ ಮೇಲಿನ ಅಪರಾಧ. ಇದರರ್ಥ ನೀವು ಹತ್ಯೆಗೈಯುವುದೇ ಇಲ್ಲವಾ? ಇಲ್ಲ ನಾವು ಹೇಳಿದ್ದು ಅದನ್ನಲ್ಲ, ನಾವು ಹತ್ಯೆ ಮಾಡುವುದು ಜನರ ಶತ್ರುಗಳನ್ನು. ಆದರೆ ಈ ಜನರ ಶತ್ರುಗಳ್ಯಾರು? ಪಕ್ಷವನ್ನು ವಿರೋಧಿಸುವ ಪ್ರತಿಯೊಬ್ಬರೂ ಜನರ ಶತ್ರುವಾ? ‘ ಇಲ್ಲ ಅದು ಸತ್ಯವಲ್ಲ. ನಮಗೆ ನೀವು ಪಕ್ಷವನ್ನು ವಿರೋಧಿಸುತ್ತೀರಾ, ಒಪ್ಪುತ್ತೀರಾ ಅಥವಾ ಟೀಕಿಸುತ್ತೀರಾ
ಎಂಬುದು ಮುಖ್ಯವಲ್ಲ, ಆದರೆ ನೀವು ಸರಕಾರೀ ಫೌಜುಗಳ ಪರವಾಗಿ ಕೆಲಸ ಮಾಡಿದರೆ ನೀವು ಜನರ ಶತ್ರು’ ಸರಿ ಅಂತಹವರಿಗೆ ಕೊಡುವ ಶಿಕ್ಷೆ? ‘ಶತ್ರುವೆಂದು ಪರಿಗಣಿಸಲ್ಪಟ್ಟ ಪ್ರತಿಯೊಬ್ಬರನ್ನೂ ಹತ್ಯೆ ಮಾಡಲಾಗುವುದಿಲ್ಲ. ಮಾಹಿತಿದಾರರನ್ನು ಕೊಲ್ಲುವುದನ್ನು ಪಕ್ಷ ತಡೆಯುತ್ತದೆ. ಯಾರು ನಾವು ಪದೇ ಪದೇ ಎಚ್ಚರಿಕೆ ಕೊಟ್ಟ ಮೇಲೂ ತಮ್ಮ ತಪ್ಪುಗಳನ್ನು ಪುನರಾವರ್ತಿಸುತ್ತಾರೋ ಅಂತಹವರನ್ನು ಹತ್ಯೆ ಮಾಡಲಾಗುತ್ತೆ’
ಸಿ.ಪಿ.ಐ[ಮಾವೋವಾದಿ]ಯ ಕಾರ್ಯದರ್ಶಿ [ ಜನರಲ್ ಸೆಕ್ರೆಟರಿ – ಜಿ.ಎಸ್] ನನಗೆ ಮತ್ತು ಜಾನ್ ಮಿರ್ದಾಲ್ಗೆ ಕೊಟ್ಟ ಸಂದರ್ಶನವನ್ನು ನೆನಪಿಸಿಕೊಂಡೆ “…………ನಮ್ಮ ವಿಸ್ತಾರದ ಪ್ರದೇಶವೊಂದರಲ್ಲಿ ಒಂದು ಘಟನೆ ನಡೆದಿತ್ತು, ಐ.ಜಿ.ಪಿ.ಯೊಡನೆ ಸೇರಿ ಎರಡೂ ಹಳ್ಳಿಗೆ ಸೇರಿದ ಮೂವತ್ಮೂರು ಜನ ಶತ್ರುವಿನ ವಕ್ತಾರರಾಗಿದ್ದರು. ಇದರ ವಿಚಾರವಾಗಿ ನಮ್ಮ ಕಾಮ್ರೇಡ್ ಗಳು ಹಳ್ಳಿಗೆ ಭೇಟಿಯಿತ್ತರು. ಪೊಲೀಸರಿಗೆ ಮುಖ್ಯ ವಕ್ತಾರನಾಗಿದ್ದವನಿಗೆ ಮರಣದಂಡನೆ ವಿಧಿಸಬೇಕೆಂದು ಹಳ್ಳಿಗರು ಒತ್ತಾಯ ಮಾಡಿದರೂ ಪಕ್ಷ ಮಧ್ಯೆ ಪ್ರವೇಶಿಸಿ ಆತನಿಗೆ ತಪ್ಪು ತಿದ್ದುಕೊಳ್ಳಲು ಅವಕಾಶ ನೀಡಲಾಯಿತು” ಜನಾತನ ಸರಕಾರವಿರುವ ಡಿ.ಕೆ.ಯಲ್ಲಿ ಪಕ್ಷದ ಕಾರ್ಯವಿಧಾನ ಬೇರೆಯಿರಬಹುದೇ? ಅಥವಾ ಒಂದು ಅಪರೂಪದ ಘಟನೆಯನ್ನು ಅವರು ಎತ್ತಿ ತೋರಿಸುತ್ತಿದ್ದಾರಾ? ನನಗೆ ತಿಳಿದಿಲ್ಲ. ಆದರೆ ಹೆಚ್ಚು ಯೋಚಿಸಿದಷ್ಟೂ ನನಗನ್ನಿಸಿದ್ದೆಂದರೆ ಕೊಲ್ಲುವುದನ್ನೇ ವ್ರುತ್ತಿಯಾಗಿಸಿಕೊಂಡಿದ್ದರೆ ಡಿ.ಕೆ.ಯಲ್ಲಿ ಜನಾತನ ಸರಕಾರ ಇಷ್ಟು ಕಾಲ ಉಳಿದು ಬೆಳೆಯಲಾಗುತ್ತಿರಲಿಲ್ಲ.
ಸುಖಲಾಲ್ ಕೇಳಿದ” ಆ ಹೈ ಟೆನ್ಶನ್ ವೈರ್ ಗಳನ್ನೂ ನೋಡಿದಿರಾ?”
‘ಹು’ ಎಂದೇ.
“ನಿಮಗೆ ಗೊತ್ತಾ ಈ ಪ್ರದೇಶದಲ್ಲಿ ಹೋದ ವರ್ಷ ಕೆಲವರು ಆ ಟವರ್ ಗಳನ್ನೂ ಸ್ಫೋಟಿಸಿದಾಗ ಪಕ್ಷ ಸಭೆ ಕರೆದು ಆ ಕಾರ್ಯವನ್ನು ತಪ್ಪೆಂದು ಖಂಡಿಸಿತು”
‘ಪಕ್ಷ ಏನು ಹೇಳಿತು ಮತ್ತಾ ಘಟನೆ ನಡೆದಿದ್ದಾದರೂ ಯಾಕೆ?’ ನಾ ಕೇಳಿದೆ.
“ಈ ರೀತಿಯ ಕಾರ್ಯಗಳಿಂದ ನಗರದಲ್ಲಿರುವ ಬಡಜನರಿಗೆ ಹೆಚ್ಚು ತೊಂದರೆಯಾಗುತ್ತೆ; ಸಿರಿವಂತರ ಬಳಿ ಜೆನರೇಟರ್ ಗಳಿರುತ್ತೆ”
‘ಜನರ ಸೈನ್ಯ ಏನು ಹೇಳಿತು?’
ತಮ್ಮ ಕಾರ್ಯವನ್ನು ಸಮರ್ಥಿಸಿಕೊಳ್ಳಲು ಯತ್ನಿಸುತ್ತಾ ‘ ನಮಗೆ ಅನ್ನಿಸಿದಂತೆ ಈ ಕಾರ್ಯದಿಂದ ರಿಪೇರಿ ತನ್ಡದೊಡನೆ ಪೊಲೀಸರು ಬಂದಾಗ ಅವರ ಮೇಲೆರಗಬಹುದಿತ್ತು’ ಎಂದರು”
‘ಜನರ ಸೈನ್ಯ ಸ್ವಂತವಾಗಿ ಆ ರೀತಿಯ ಯೋಜನೆ ಹಾಕಿಕೊಳ್ಳಬಹುದಾ?’
ಇಲ್ಲ ದೊಡ್ಡ ದಾಳಿಗಳ ಬಗ್ಗೆ plga ಗೆ ಮಾಹಿತಿ ನೀಡಬೇಕು”
ಪಕ್ಷ ambush ಗಳನ್ನು ತಡೆಯುತ್ತದಾ? ಮತ್ತೆ ಪದೇ ಪದೇ ಕೇಳಿಬರುವ ಹತ್ಯಾ ಯತ್ನಗಳು, ಲ್ಯಾಂಡ್ ಮೈನ್ ಸ್ಪೋಟ? ಈ ಪ್ರಶ್ನೆಯನ್ನು plga ಕಮ್ಯಾಂಡರ್ ರಾಮುವಿಗೆ ಕೇಳಿದೆ.
ರಾಮು ಹೇಳಿದ ” ambush ಗಳನ್ನು ನಡೆಸುತ್ತೇವೆ. ಆದರದು ಎಚ್ಚರಿಕೆಯಿನ ಯೋಜಿಸಿದ ನಂತರ. ಅದು ಸಾಕಷ್ಟು ಸಮಯವನ್ನೂ ಬೇಡುತ್ತೆ, ನಾವು ಶ್ತ್ರುಗಿಂತ ದುರ್ಬಲವಾಗಿರುವುದರಿಂದ ನಮಗೆ ಬೇಕೆಂದಾಗ ಎರಗಲು ಸಾಧ್ಯವಿಲ್ಲ. ನಮ್ಮಲ್ಲಿ ಸಿಧ್ಧತೆಗಳಿಲ್ಲದಿದ್ದರೆ ಶತ್ರುವಿನ ಜೊತೆಗಿನ ಕಾಳಗವನ್ನು ತಡೆಯುತ್ತೇವೆ. ಜೊತೆಗೆ ಯಾವ ದಾಳಿಯಿಂದ ನಮಗೆ ಹೆಚ್ಚು ಶಸ್ತ್ರ ಸಿಗುತ್ತದೋ ಅಂಥವುಗಳ ಕಡೆಗೆ ಹೆಚ್ಚು ಗಮನವಿಯುತ್ತೇವೆ. ರಾಯಪುರದಲ್ಲಿ ಮಾತನಾಡುತ್ತಾ ಪಿ.ಚಿದಂಬರಂ ನಾವು ಸೈನ್ಯಕ್ಕೆ ಸೇರಿದರೆಂಬ ಕಾರಣಕ್ಕೆ ಇಬ್ಬರನ್ನು ಕೊಂಡಿದ್ದೆವೆಂದು ತಿಳಿಸಿದ. ಅದಕ್ಕೂ ನಮಗೂ ಸಂಬಂದವಿಲ್ಲ. ಅಂಥದೊಂದು ಘಟನೆ ನಡೆದಿದೆಯಾ ಎಂಬುದೇ ನಮಗೆ ಅನುಮಾನ”
ಅದರರ್ಥ?
ಮುಂದುವರೆಯುವುದು
Posted in ಅನುವಾದ, ನಕ್ಸಲಿಸ೦ | Tagged: dantewaada, goutham navlaka | Leave a Comment »
ಛತ್ತೀಸ್ಗಢದಲ್ಲಿ ನಕ್ಸಲರಿಂದ 73 ಪೊಲೀಸರ ಮಾರಣಹೋಮ
Posted by ajadhind on ಏಪ್ರಿಲ್ 6, 2010
ಮಾವೋವಾದಿಗಳನ್ನು ಪುಕ್ಕಲರು ಎಂದು ಕೇಂದ್ರ ಗೃಹ ಸಚಿವ ಪಿ. ಚಿದಂಬರಂ ಜರೆದ ಬೆನ್ನಿಗೆ ಛತ್ತೀಸ್ಗಢದಲ್ಲಿನ ದಂತೇವಾಡದ ಸಿಆರ್ಪಿಎಫ್ ಭದ್ರತಾ ಸಿಬ್ಬಂದಿಗಳು ಮತ್ತು ಪೊಲೀಸ ಮೇಲೆ ಗುಂಡಿನ ಮಳೆಗರೆದಿರುವ ನಕ್ಸಲರು 73 ಮಂದಿಯ ಮಾರಣಹೋಮ ನಡೆಸಿದ್ದಾರೆ.
ದಂತೇವಾಡದ ನಕ್ಸಲ್ ಬಾಧಿತ ಮುಕ್ರಾನಾ ಅರಣ್ಯ ಪ್ರದೇಶದಲ್ಲಿನ ರಸ್ತೆ ತೆರೆಯುವ ಕರ್ತವ್ಯ ಮುಗಿಸಿ ವಾಪಸ್ ಬರುವ ಹೊತ್ತಿಗೆ ಬೆಳಿಗ್ಗೆ ಆರರಿಂದ ಏಳು ಗಂಟೆಯ ನಡುವೆ ಸಿಆರ್ಪಿಎಫ್ ಪಡೆಯ ಮೇಲೆ ದಾಳಿ ನಡೆಸಲಾಗಿದೆ.
ಸುಮಾರು 1000ರಷ್ಟಿದ್ದ ನಕ್ಸಲರು ಸಿಆರ್ಪಿಎಫ್ ತಂಡದ ಮೇಲೆ ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ 80 ಸಿಬ್ಬಂದಿಗಳು ವಾಹನದಲ್ಲಿದ್ದರು. ಅವರಲ್ಲಿ ಡೆಪ್ಯುಟಿ ಕಮಾಂಡೆಂಟ್ ಮತ್ತು ಅಸಿಸ್ಟೆಂಟ್ ಕಮಾಂಡೆಂಟ್ ಸೇರಿದಂತೆ 72 ಸಿಆರ್ಪಿಎಫ್ ಸಿಬ್ಬಂದಿಗಳು ಹಾಗೂ ಜಿಲ್ಲಾ ಪೊಲೀಸ್ ವಿಭಾಗದ ಓರ್ವ ಹೆಡ್ ಕಾನ್ಸ್ಟೇಬಲ್ ಸಾವನ್ನಪ್ಪಿರುವುದು ಖಚಿತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಟ್ಟಗುಡ್ಡ ಪ್ರದೇಶದಲ್ಲಿ ಮರಗಳ ಎಡೆಯಲ್ಲಿ ಅಡಗಿ ಕುಳಿತಿದ್ದ ನಕ್ಸಲರು ಮೊದಲು ಸಿಆರ್ಪಿಎಫ್ ಜವಾನರ ವಾಹನವನ್ನು ತಡೆಯಲು ನೆಲಬಾಂಬುಗಳನ್ನು ಸ್ಫೋಟಿಸಿದ್ದರು. ಬಳಿಕ ಇದ್ದಕ್ಕಿದ್ದಂತೆ ಗುಂಡಿನ ಮಳೆಗರೆದರು. ಈ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿಗಳು ಕೂಡ ಪ್ರತಿ ದಾಳಿ ನಡೆಸಿದ್ದಾರೆ. ಆದರೆ ಭಾರೀ ಸಂಖ್ಯೆಯಲ್ಲಿದ್ದ ನಕ್ಸಲರು ಸಿಆರ್ಪಿಎಫ್ ಸಿಬ್ಬಂದಿಗಳನ್ನು ಕೊಂದು ಹಾಕಿದರು ಎಂದು ವರದಿಗಳು ಹೇಳಿವೆ.
ತಕ್ಷಣವೇ ನಾವು ಹೆಲಿಕಾಫ್ಟರುಗಳ ಮೂಲಕ ಸ್ಥಳಕ್ಕೆ ಧಾವಿಸಿದ್ದೇವೆ. ಎಂಟು ಮಂದಿ ಸಿಆರ್ಪಿಎಫ್ ಸಿಬ್ಬಂದಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗಳಿಗೆ ದಾಖಲಿಸಿದ್ದೇವೆ ಎಂದು ಛತ್ತೀಸಗಢ ಪೊಲೀಸ್ ಮಹಾ ನಿರ್ದೇಶಕ ವಿಶ್ವ ರಂಜನ್ ತಿಳಿಸಿದ್ದಾರೆ.
ಸಿಆರ್ಪಿಎಫ್ ಸಿಬ್ಬಂದಿಗಳು ತೆರಳುತ್ತಿದ್ದ ವಾಹನವನ್ನು ನಕ್ಸಲೀಯರು ಸ್ಫೋಟಿಸಿದ್ದರಿಂದಾಗಿ ದುರ್ಘಟನೆ ಸಂಭವಿಸಿದೆ ಎಂದು ದಂತೇವಾಡ ಪೊಲೀಸ್ ವರಿಷ್ಠಾಧಿಕಾರಿ ಅಮರೇಶ್ ಮಿಶ್ರಾ ತಿಳಿಸಿದ್ದಾರೆ.
ಜಿಲ್ಲೆಯ ಚಿಂತಾಲ್ನಾರ್ – ತಾರ್ಮೆತ್ಲಾ ಗ್ರಾಮದ ನಡುವೆ ಇಂದು ಮುಂಜಾನೆ ಈ ಘಟನೆ ನಡೆದಿದೆ. ಸಿಆರ್ಪಿಎಫ್, ಜಿಲ್ಲಾ ಪಡೆಗಳು ಮತ್ತು ವಿಶೇಷ ಪೊಲೀಸರ ಜಂಟಿ ತಂಡದ ಮೇಲೆ ಮಾವೋವಾದಿಗಳು ದಾಳಿ ನಡೆಸಿದ್ದಾರೆ ಎಂದು ಅವರು ವಿವರಣೆ ನೀಡಿದ್ದಾರೆ.
ಕಳೆದ ಮೂರು ದಿನಗಳಿಂದ ತಾರ್ಮೇತ್ಲಾ ಅರಣ್ಯ ಪ್ರದೇಶದಲ್ಲಿ ಈ ಜಂಟಿ ತಂಡವು ಕೂಂಬಿಂಗ್ ಕಾರ್ಯಾಚರಣೆಗಾಗಿ ಶಿಬಿರ ನಡೆಸುತ್ತಿತ್ತು. ಇದೀಗ ಅದರ ಮೇಲೆಯೇ ನಕ್ಸಲರು ಕ್ರೂರವಾದ ದಾಳಿ ನಡೆಸಿದ್ದಾರೆ.
Posted in ಚತ್ತೀಸಗಢ, ನಕ್ಸಲಿಸ೦ | Tagged: bastar, dantewada | Leave a Comment »
ಪತ್ರಿಕಾ ಪ್ರಕಟಣೆ – ಕಾಮ್ರೇಡ್ ವಸಂತ್.
Posted by ajadhind on ಮಾರ್ಚ್ 6, 2010
Posted in ಕರ್ನಾಟಕ, ನಕ್ಸಲಿಸ೦, ಪತ್ರಿಕಾ ಪ್ರಕಟಣೆ | Tagged: comrade, vasant | Leave a Comment »
ಕಾಮ್ರೇಡರ ಮೇಲೆ ನಡೆಸಲು ಉದ್ದೇಶಿಸಿರುವ ಮಂಪರು ಪರೀಕ್ಷೆಯ ಬಗ್ಗೆ ಪತ್ರಿಕಾ ಪ್ರಕಟಣೆ
Posted by ajadhind on ಡಿಸೆಂಬರ್ 3, 2009
Posted in ಕರ್ನಾಟಕ, ನಕ್ಸಲಿಸ೦, ಪತ್ರಿಕಾ ಪ್ರಕಟಣೆ | Leave a Comment »