ಹೋರಾಟದ ಹಾದಿ

ಆದರ್ಶವಾದಿಗಳಿಗೆ ಕೊನೆಯಿರಬಹುದು, ಆದರ್ಶಕ್ಕಲ್ಲ.

ಕೇಂದ್ರ, ಆಂಧ್ರಕ್ಕೆ ನೋಟಿಸ್

Posted by ajadhind on ಜನವರಿ 15, 2011

source – prajavani

ಮಾವೊವಾದಿ ನಾಯಕ ಆಜಾದ್ ಎನ್‌ಕೌಂಟರ್ ಪ್ರಕರಣ

‘ನಕಲಿ ಎನ್‌ಕೌಂಟರ್’ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕೆಂಬ ಅರ್ಜಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ಕೇಳಿ ಸುಪ್ರೀಂಕೋರ್ಟ್ ಶುಕ್ರವಾರ ಕೇಂದ್ರ ಹಾಗೂ ಆಂಧ್ರ ಪ್ರದೇಶ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.

ನವದೆಹಲಿ (ಪಿಟಿಐ): ಪ್ರಮುಖ ಮಾವೊವಾದಿ ನಾಯಕ ಚೆರುಕುರಿ ರಾಜ್‌ಕುಮಾರ್ ಅಲಿಯಾಸ್ ಆಜಾದ್ ಮತ್ತು ಅವರ ಸಹಚರ ಎಂದು ಹೇಳಲಾದ ಪತ್ರಕರ್ತ ಹೇಮಚಂದ್ರ ಪಾಂಡೆ ಅವರ ‘ನಕಲಿ ಎನ್‌ಕೌಂಟರ್’ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕೆಂಬ ಅರ್ಜಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ಕೇಳಿ ಸುಪ್ರೀಂಕೋರ್ಟ್ ಶುಕ್ರವಾರ ಕೇಂದ್ರ ಹಾಗೂ ಆಂಧ್ರ ಪ್ರದೇಶ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.

‘ಗಣರಾಜ್ಯವು ತನ್ನದೇ ಸ್ವಂತ ಮಕ್ಕಳನ್ನು ಕೊಲ್ಲಲು ನಾವು ಅವಕಾಶ ಮಾಡಿಕೊಡುವುದಿಲ್ಲ’ ಎಂದು ನ್ಯಾಯಮೂರ್ತಿಗಳಾದ ಅಫ್ತಾಬ್ ಆಲಂ ಹಾಗೂ ಆರ್.ಎಂ.ಲೋಧ ಅವರನ್ನು ಒಳಗೊಂಡ ಪೀಠ ಈ ಸಂದರ್ಭದಲ್ಲಿ ಹೇಳಿದೆ.

ಸಾಮಾಜಿಕ ಕಾರ್ಯಕರ್ತ ಸ್ವಾಮಿ ಅಗ್ನಿವೇಶ್ ಮತ್ತು ಪಾಂಡೆ ಅವರ 30 ವರ್ಷದ ಪತ್ನಿ ಬಬಿತಾ ಈ ಅರ್ಜಿ ಸಲ್ಲಿಸಿದ್ದಾರೆ. ಆರು ವಾರಗಳಲ್ಲಿ ಪ್ರತಿಕ್ರಿಯೆ ನೀಡುವಂತೆ ಸರ್ಕಾರಗಳಿಗೆ ತಿಳಿಸಿರುವ ಪೀಠ, ಉತ್ತಮ ಹಾಗೂ ವಿಶ್ವಾಸಪೂರ್ವಕ ಪ್ರತಿಕ್ರಿಯೆ ಬರುವ ಭರವಸೆ ಇದೆ ಎಂದು ಹೇಳಿದೆ.

ನಿಷೇಧಿತ ಸಿಪಿಐ (ಮಾವೊವಾದಿ) ಸಂಘಟನೆಯ ಸದಸ್ಯ ಹಾಗೂ ತಲೆಗೆ 12 ಲಕ್ಷ ರೂಪಾಯಿ ಬಹುಮಾನ ಘೋಷಣೆಯಾಗಿದ್ದ 58 ವರ್ಷದ ಆಜಾದ್, 32 ವರ್ಷದ ಪಾಂಡೆ ಅವರನ್ನು ಮಹಾರಾಷ್ಟ್ರ ಗಡಿಯಲ್ಲಿರುವ ಆಂಧ್ರಪ್ರದೇಶದ ಆದಿಲಾಬಾದ್ ಜಿಲ್ಲೆಯಲ್ಲಿ ಜುಲೈ 1ರ ರಾತ್ರಿ ಪೊಲೀಸರು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿದ್ದರು.

ಈ ಇಬ್ಬರ ಮರಣೋತ್ತರ ವರದಿ ಮತ್ತು ಮಾನವ ಹಕ್ಕು ಕಾರ್ಯಕರ್ತರ ಸ್ಥಳ ಪರಿಶೀಲನೆಯಿಂದ ಎನ್‌ಕೌಂಟರ್ ನಕಲಿ ಎಂಬುದು ದೃಢಪಡುತ್ತದೆ, ಇಬ್ಬರಿಗೂ ಅತ್ಯಂತ ಸಮೀಪದಿಂದ ಗುಂಡು ಹಾರಿಸಲಾಗಿದೆ.

Posted in ನಕ್ಸಲಿಸ೦ | Tagged: , , | Leave a Comment »

ನಕ್ಸಲ್ ವರ್ಗೀಸ್ ಹತ್ಯೆ:ಮಾಜಿ ಐಜಿಪಿ ದೋಷಿ

Posted by ajadhind on ಅಕ್ಟೋಬರ್ 28, 2010

ನಲ್ವತ್ತು ವರ್ಷಗಳ ಹಿಂದೆ ಪೊಲೀಸ್ ಕಾರ್ಯಾಚರಣೆ ವೇಳೆ ಹತನಾದ ನಕ್ಸಲ್ ಮುಂಖಡ ಎ. ವರ್ಗೀಸ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ತೀರ್ಪು ಪ್ರಕಟಿಸಿರುವ ಸಿಬಿಐ ವಿಶೇಷ ನ್ಯಾಯಾಲಯ, ಮಾಜಿ ಪೊಲೀಸ್ ಮಹಾ ನಿರೀಕ್ಷಕ ಕೆ. ಲಕ್ಷ್ಮಣ ದೋಷಿ ಎಂದು ಹೇಳಿದೆ. ಶಿಕ್ಷೆ ಪ್ರಮಾಣವನ್ನು ಗುರುವಾರ ಪ್ರಕಟಿಸಲಿದೆ.

ಕೊಚ್ಚಿ (ಪಿಟಿಐ): ಆದರೆ, ಇದೇ ಪ್ರಕರಣದಲ್ಲಿ ಆರೋಪಿಯಾಗಿದ್ದ ಮಾಜಿ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಪಿ. ವಿಜಯನ್ ಅವರನ್ನು ನಿರ್ದೋಷಿ ಎಂದು ಬಿಡುಗಡೆ ಮಾಡಿದೆ. ವೈನಾಡ್ ಜಿಲ್ಲೆಯ ತಿರುವೆನಲ್ಲಿ ಅರಣ್ಯ ಪ್ರದೇಶದಲ್ಲಿ  1970ರ ಫೆ. 18ರಂದು ನಡೆದ ಎನ್‌ಕೌಂಟರ್ ಎನ್ನಲಾದ ಪ್ರಕರಣದಲ್ಲಿ ನಕ್ಸಲ್ ಮುಖಂಡ ವರ್ಗೀಸ್‌ನ ಹತ್ಯೆಯಾಗಿತ್ತು. ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಲಾಗಿತ್ತು.

‘ಆಗ ಪೊಲೀಸ್ ಉಪ ಅಧೀಕ್ಷಕರಾಗಿದ್ದ ಕೆ. ಲಕ್ಷ್ಮಣ ಅವರ ನಿದೇರ್ಶನದಂತೆ ಸಿಆರ್‌ಪಿಎಫ್‌ನ ಕಾನ್ಸ್‌ಸ್ಟೆಬಲ್ ಪಿ. ರಾಮಚಂದ್ರನ್ ನಾಯರ್, ವರ್ಗೀಸ್‌ನನ್ನು ಹತ್ಯೆ ಮಾಡಿದ್ದರು’ ಎಂದು ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಎಸ್. ವಿಜಯಕುಮಾರ್ ತೀರ್ಪಿನಲ್ಲಿ ಹೇಳಿದ್ದಾರೆ.

ಈ ಪ್ರಕರಣದಲ್ಲಿ ರಾಮಚಂದ್ರ ನಾಯರ್ ಪ್ರಥಮ ಆರೋಪಿಯಾಗಿದ್ದು, ಅವರು ಮೃತರಾದ್ದಾರೆ. ಎರಡನೇ ಆರೋಪಿಯಾಗಿರುವ 80 ವರ್ಷ ವಯಸ್ಸಿನ ಕೆ. ಲಕ್ಷ್ಮಣ ಅವರನ್ನು ನ್ಯಾಯಾಲಯ ದೋಷಿ ಎಂದು ಪರಿಗಣಿಸಿದೆ. ಆದರೆ, ಪ್ರಕರಣದ 3ನೇ ಆರೋಪಿಯಾದ 83 ವರ್ಷ ವಯಸ್ಸಿನ ಪಿ. ವಿಜಯನ್ ಅವರನ್ನು ದೋಷಿ ಎನ್ನಲು ಸಾಕಷ್ಟು ಸಾಕ್ಷ್ಯಗಳು ಇಲ್ಲದ ಕಾರಣ ಅವರನ್ನು ಸಂಶಯದ ಲಾಭದ ಮೇಲೆ ನಿರ್ದೋಷಿ ಎಂದು ಬಿಡುಗಡೆ ಮಾಡಲಾಗಿದೆ ಎಂದು ನ್ಯಾಯಾಲಯ ಹೇಳಿದೆ.

ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಈ ಇಬ್ಬರು ಮಾಜಿ ಪೊಲೀಸ್ ಅಧಿಕಾರಿಗಳು ಇಂದು ಗಾಲಿ ಕುರ್ಚಿಯಲ್ಲಿ ಆಗಮಿಸಿದ್ದರು. ನ್ಯಾಯಮೂರ್ತಿಗಳು ತೀರ್ಪು ಪ್ರಕಟಿಸುತ್ತಿದಂತೆ ಕೆ. ಲಕ್ಷ್ಮಣ ಅವರನ್ನು ಎರ್ನಾಕುಲಂನ ಉಪ ಕಾರಾಗೃಹಕ್ಕೆ ಕರೆದೊಯ್ಯಲಾಯಿತು. ಈ ಪ್ರಕರಣ ನಡೆದಾಗ ಕೋಯಿಕೋಡ್ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ವಿಜಯನ್, ತೀರ್ಪಿನ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ.

ಕೆ. ಲಕ್ಷ್ಮಣ ಮತ್ತು ಪಿ. ವಿಜಯನ್ ಅವರ ಆದೇಶದಂತೆ ವರ್ಗೀಸ್‌ನನ್ನು ಗುಂಡಿಕ್ಕಿ ಕೊಂದೆ ಎಂದು ಈ ಪ್ರಕರಣದ ಮೊದಲ ಆರೋಪಿ ರಾಮಚಂದ್ರನ್ ನಾಯರ್ 1998ರಲ್ಲಿ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದರು. ಇದರಿಂದ ಈ ಪ್ರಕರಣ ಬಹುದೊಡ್ಡ ಸುದ್ದಿಯಾಗಿ ಕುತೂಹಲ ಕೆರಳಿಸಿತ್ತು.

Posted in ಇನ್ನೊಂದು ಮುಖ, ನಕ್ಸಲಿಸ೦, ಪ್ರಸ್ತುತ | Tagged: , , | Leave a Comment »

ಇದು ನಮ್ಮ ಪ್ರಜಾಪ್ರಭುತ್ವ?!

Posted by ajadhind on ಅಕ್ಟೋಬರ್ 12, 2010

ಇಂತಹದೊಂದು ಪ್ರಜಾಪ್ರಭುತ್ವದಲ್ಲಿ ನಾವು ಭಾಗಿಯಾಗದೆ ಸಶಸ್ತ್ರ ಕ್ರಾಂತಿ ಮಾಡಲು ಹೊರಟಿರುವುದಕ್ಕೆ ಕ್ಷಮೆ ಕೇಳಬೇಕೆ?

Posted in ಇನ್ನೊಂದು ಮುಖ, ಕರ್ನಾಟಕ, ಪ್ರಸ್ತುತ | Leave a Comment »

ಪೋಲೀಸ್ ‘ಮಹಾನ್’ ನಿರ್ದೇಶಕರಿಗೊಂದು ಪತ್ರ

Posted by ajadhind on ಸೆಪ್ಟೆಂಬರ್ 4, 2010

“ಕೆಲವು ವ್ಯಕ್ತಿಗಳು ಅಮಾಯಕರಿಗೆ ದುರ್ಭೋದನೆ ಮಾಡಿ ಎಡಪಂಥೀಯ ಉಗ್ರವಾದದೆಡೆಗೆ ಸೆಳೆಯುತ್ತಿದ್ದಾರೆ” ಎಂದು ನೀವು ಹೇಳಿರುವುದಾಗಿ ವರದಿಯಾಗಿದೆ. ಬಹಳ ಸತ್ಯವಾದ ನುಡಿಮುತ್ತುದುರಿಸಿದ್ದೀರಿ. ಆಹಾ! ಇಂಥ ಒಬ್ಬ ಪೋಲೀಸ್ ಮಹಾನಿರ್ದೇಶಕ ಇಷ್ಥು ದಿನ ಎಲ್ಲಿ ಹೋಗಿದ್ದರು? ಎಂದೆನಿಸುತ್ತಿದೆ.

ಬರೀ ಸ್ವತಂತ್ರ್ಯದಿಂದ ಪ್ರಯೋಜನವಿಲ್ಲ, ಸಮತಾ ಸಮಾಜ ನಮ್ಮ ಕನಸಾಗಬೇಕು ಎಂದ ಭಗತ್ ಸಿಂಗ್, ಗ್ರಾಮಗಳ ಅಭಿವ್ರದ್ಧಿಯೇ ನಿಜವಾದ ಅಭಿವ್ರದ್ಧಿ ಎಂದ ಗಾಂಧಿ. ಇವರ ಮಾತುಗಳೆಲ್ಲ ದುರ್ಭೋಧನೆ ಎಂದು ನಮಗೆ ತಿಳಿಯದೆ ಹೋಯಿತಲ್ಲ ಎಂದು ದುಃಖವಾಗುತ್ತಿದೆ. ದುರ್ಭೋದಕರ ಸಂತತಿ ಇನ್ನು ನಶಿಸಿಲ್ಲ. ದೇಶದ ಸಂಪತ್ತನ್ನು ಲೂಟಿಗೈಯ್ಯುವವರ ಬಗ್ಗೆ ಪುಂಖಾನುಪುಂಖವಾಗಿ ಬರೆಯುವ ಪತ್ರಕರ್ತರು, ಹನ್ನೆರಡು ವರ್ಷದ ಅವಧಿಯಲ್ಲಿ ಮೃತ್ಯುವಿನ ಕುಣಿಕೆಗೆ ಜೋತುಬಿದ್ದ ಕೇವಲ ಒಂದೂವರೆ ಲಕ್ಷ ರೈತರ ಬಗ್ಗೆ ಬರೆದು ನಮ್ಮ ತಲೆಗೆ ದುರ್ಭೋಧನೆ ಬಿತ್ತುವ ಪಿ.ಸಾಯಿನಾಥ್ ರಂತವರ ವಿರುದ್ಧ ನೀವು ಕ್ರಮ ಕೈಗೊಂಡಲ್ಲಿ ಬಹಳ ಉಪಕಾರವಾಗುತ್ತೆ.

ಮುಸ್ಲಿಮರ ಕೈಕಡಿಯುವೆವೆಂದು ಅಬ್ಬರಿಸುವವರು, ಹಿಂದೂಗಳ ನಾಲಿಗೆ ಸೀಳಿ ಎಂದು ಉಪದೇಶಿಸುವವರು, ಕ್ರೈಸ್ತ ಪ್ರಾಧ್ಯಾಪಕರ ಕೈ ಕತ್ತರಿಸಿದವರು, ಜಾತಿಯ ಹೆಸರಿನಲ್ಲಿ ಮರ್ಯಾದ ಹತ್ಯೆ ನಡೆಸುವವರು, ಬುರ್ಖಾ  ಪರ ವಿರೋಧವಾಗಿ ಚಳುವಳಿ ನಡೆಸುವವರು, ನಗರ ಸ್ವಚ್ಚಗೊಳಿಸಲು ರಸ್ತೆಯಲ್ಲೇ ಹೋಮ ಹವನ ನಡೆಸುವವರು – ಇಂಥವರ ಸಂಖ್ಯೆ ಹೆಚ್ಚಾಗಲಿ. ಈ ಸಂತತಿಯವರ ಸುಭೋದನೆಯಿಂದ ನಾವು ಕೂಡ ಸಮ ಸಮಾಜ, ಭ್ರಷ್ಥಾಚಾರ ಮುಕ್ತ ಸಮಾಜದ ಕನಸು ಮರೆತು ಜಾತಿ ಮತ ಧರ್ಮ ಭಾಷೆ ಪ್ರಾಂತ್ಯದ ಅಮಲಿನಲ್ಲಿ ತೇಲುತ್ತಾ ಚಿಕ್ಕಪುಟ್ಟ ಕೆಲಸಗಳಿಗೂ ಸರ್ವರಿಗೂ ಲಂಚವೆಂಬ ಶ್ರೇಷ್ಠ ಪದಾರ್ಥವನ್ನು ಕೊಡುತ್ತಾ ಪ್ರಜಾಪ್ರಭುತ್ವದ ಚುನಾವಣೆಗಳಲ್ಲಿ ಪ್ರಭುಗಳಿಂದ ಹಣ ಸ್ವೀಕರಿಸಿ, ಹೆಚ್ಚು ಹಣ ಕೊಟ್ಟವರಿಗೆ ವೋಟು ಮಾರಿ ಅವರನ್ನು ಗೆಲ್ಲಿಸಿ ನಂತರ ಆ ಪ್ರಭುಗಳು ಪ್ರಜೆಗಳಿಗೆ ಮಾಡುವ ಅನ್ಯಾಯ, ದೇಶದ ಮೇಲೆ ಮಾಡುವ ಸವಾರಿಯನ್ನು ನೋಡುತ್ತಾ ಆನಂದಿಸುವುದರಲ್ಲಿ ಎಂಥ ಸುಖವಿದೆಯಲ್ಲವೇ? ಮಾನ್ಯ ಪೋಲೀಸ್ ಮಹಾನಿರ್ದೇಶಕರು ಇಂಥ ಸುಭೋದಕರ ಸಂಖ್ಯೆಯನ್ನು ಹೆಚ್ಚಿಸುವುದರ ಕಡೆಗೆ ಗಮನ ಹರಿಸಬೇಕೆಂದು ಈ ಮೂಲಕ ವಿನಂತಿಮಾಡುತ್ತಿದ್ದೇನೆ.

ಎಲ್ಲಕ್ಕಿಂತ ಮೊದಲು ರಾಜ್ಯದ ಪೋಲೀಸರು ಪ್ರತಿ ಕೇಸಿಗೆ average 2,100 ರುಪಾಯಿ ಪಡೆಯುತ್ತಾರೆ ಎಂದು ಅಧ್ಯಯನ ಮಾಡಿದವರಿಗೆ ತಕ್ಕ ಶಿಕ್ಷೆ ಕೊಡಬೇಕಾಗಿ ನಮ್ಮ ಆಗ್ರಹ.

ಇಂತಿ,

‘ದುರ್ಭೋದಕರ ನಡುವೆ ಸಿಕ್ಕಿಹಾಕಿಕೊಂಡಿರುವ ಅಮಾಯಕ’

Posted in ಕರ್ನಾಟಕ, ಪತ್ರಿಕಾ ಪ್ರಕಟಣೆ | Tagged: , | Leave a Comment »

ಆಂತರಿಕ ಪ್ರಜಾಪ್ರಭುತ್ವ.?

Posted by ajadhind on ಜುಲೈ 28, 2010

source – prajavani

ಸೋನಿಯಾ ಗಾಂಧಿ ಹೆಸರು ಅಥವಾ ಅವರು ವಾಸಿಸುವ ‘10 ಜನಪಥ್’ ರಸ್ತೆಯು ಅಧಿಕಾರ ಕೇಂದ್ರಕ್ಕೆ ಅನ್ವರ್ಥ ಹೆಸರಾಗಿದೆ. ಸೋನಿಯಾ ಅವರ ಸಮ್ಮತಿ ಇಲ್ಲದೆ ಪಕ್ಷ ಮತ್ತು ಸರ್ಕಾರದಲ್ಲಿ ಯಾವುದೇ ಒಂದು ನಿರ್ಧಾರವಾಗಲಿ ಅಥವಾ ನೇಮಕವಾಗಲಿ ನಡೆಯುವುದೇ ಇಲ್ಲ. ಸೋನಿಯಾ ಗಾಂಧಿ ಅವರು ಶೀಘ್ರದಲ್ಲಿಯೇ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಮರು ಆಯ್ಕೆಯಾಗಲಿದ್ದು, ಈ ಹುದ್ದೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ಗೌರವಕ್ಕೆ ಪಾತ್ರವಾಗಲಿದ್ದಾರೆ. ದೇಶದ ಅತಿ ಹಳೆಯ ಮತ್ತು ಅತಿದೊಡ್ಡ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವ ಇಲ್ಲದಿರುವುದನ್ನೂ ಇದು ಮತ್ತೊಮ್ಮೆ ಸಾಬೀತುಪಡಿಸುತ್ತದೆ. ಪಕ್ಷದ ಸದಸ್ಯರು ಸೋನಿಯಾ ಅವರೇ ಅಧ್ಯಕ್ಷರೆಂದು ಕಣ್ಣುಮುಚ್ಚಿಕೊಂಡು ಆಯ್ಕೆ ಮಾಡುತ್ತಾರೆ. ಇದೊಂದು ಬರೀ ವಂಶಾಡಳಿತಕ್ಕೆ ಸಂಬಂಧಿಸಿದ ಭ್ರಾಂತಿ ಅಲ್ಲ. ಪಕ್ಷ ಮತ್ತು ಸರ್ಕಾರದಲ್ಲಿ ಸೋನಿಯಾ ಹೊಂದಿರುವ ಹಿಡಿತ ಮತ್ತು ಪ್ರಶ್ನಾತೀತ ನಾಯಕಿ ಆಗಿ ಬೆಳೆದಿರುವುದನ್ನೂ ಸಾಬೀತುಪಡಿಸುತ್ತದೆ. ವಾಸ್ತವದಲ್ಲಿ ಎರಡು ಪ್ರಮುಖ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿಗಳನ್ನು ಭಟ್ಟಂಗಿಗಳೇ ನಿಯಂತ್ರಿಸುತ್ತಿದ್ದಾರೆ. ದೇಶದ ಯಾವುದೇ ಭಾಗದಲ್ಲಿನ ರಾಜ್ಯಗಳ ವಿಧಾನಸಭೆಗಳಿಗೆ ಯಾವಾಗಲಾದರೂ ಚುನಾವಣೆ ನಡೆಯಲಿ, ಮುಖ್ಯಮಂತ್ರಿ ಆಯ್ಕೆ ಅಧಿಕಾರ ಒಬ್ಬ ವ್ಯಕ್ತಿಯಲ್ಲಿ ಇಲ್ಲವೇ ಒಂದೇ ವ್ಯವಸ್ಥೆಯಲ್ಲಿ ಕೇಂದ್ರೀಕೃತವಾಗಿರುತ್ತದೆ. ತಮ್ಮ ಬೆಂಬಲಿಗರಿಗಷ್ಟೇ ಆತ ಅಥವಾ ಆಕೆ ಟಿಕೆಟ್ ಹಂಚುತ್ತಾನೆ/ಳೆ. ಹೀಗಾಗಿ ಚುನಾಯಿತ ಪ್ರತಿನಿಧಿಗಳೂ ಪಕ್ಷದ ವರಿಷ್ಠ ಮಂಡಳಿ ಬಗ್ಗೆ ಭಯಭಕ್ತಿಯಿಂದಲೇ ವರ್ತಿಸುತ್ತಾರೆ. ಪಕ್ಷದ ಕೇಂದ್ರೀಯ ನಿಯಂತ್ರಣ ಮಂಡಳಿಗೆ ಉದ್ದಕ್ಕೂ ವಿಧೇಯರಾಗಿಯೇ ಇರುತ್ತಾರೆ. ಇವರೆಲ್ಲ ರಾಜ್ಯ ವಿಧಾನಸಭೆಯಲ್ಲಿ ತಮ್ಮ ನಾಯಕನನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ ಹೊಂದಿರುವುದಿಲ್ಲ. ಈ ಹೊಣೆಗಾರಿಕೆಯನ್ನು ಪಕ್ಷದ ಹೈಕಮಾಂಡ್‌ಗೆ ಒಪ್ಪಿಸುತ್ತಾರೆ. ದೆಹಲಿ, ರಾಜಸ್ತಾನ, ಹರಿಯಾಣ ಮತ್ತು ಮಿಜೋರಾಂಗಳಲ್ಲಿನ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ವಿಚಾರವನ್ನು ಸೋನಿಯಾ ಗಾಂಧಿ ಅವರ ನಿರ್ಧಾರಕ್ಕೆ ಬಿಡಲಾಗಿತ್ತು. ಮಧ್ಯಪ್ರದೇಶ ಮತ್ತು ಛತ್ತೀಸಗಡ್‌ಗಳಲ್ಲಿ ಬಿಜೆಪಿ ಗೆದ್ದು ಬಂದಾಗ, ನಾಯಕನ ಆಯ್ಕೆ ವಿಚಾರವನ್ನು ಎಲ್. ಕೆ. ಅಡ್ವಾಣಿ ವಿವೇಚನೆಗೆ ಬಿಡಲಾಗಿತ್ತು. ಬಿಜೆಪಿಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರೆಸ್ಸೆಸ್) ಮುಖಂಡರನ್ನು ಸಂಪರ್ಕಿಸಿಯೇ ಅವರು ತಮ್ಮ ನಿರ್ಧಾರ ಪ್ರಕಟಿಸಿದ್ದರು ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ದೆಹಲಿ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮರಳಿ ಗೆದ್ದಾಗ, ಮುಖ್ಯಮಂತ್ರಿ ಆಯ್ಕೆ ವಿಷಯದಲ್ಲಿ ಸೋನಿಯಾ ಗಾಂಧಿ ಎದುರು ಹೆಚ್ಚಿನ ಆಯ್ಕೆಗಳೇನೂ ಇದ್ದಿರಲಿಲ್ಲ. ಆದರೂ, ಶೀಲಾ ದೀಕ್ಷಿತ್ ಪ್ರಮಾಣ ವಚನ ಸ್ವೀಕರಿಸುವ ಮುನ್ನ ಸಾಕಷ್ಟು ದುಗುಡದಿಂದಲೇ ಕಾಲ ಕಳೆಯಬೇಕಾಯಿತು. ಶೀಲಾ ದೀಕ್ಷಿತ್, ಕಾಂಗ್ರೆಸ್‌ಗೆ ಮೂರನೇ ಬಾರಿಗೆ ಗೆಲುವು ತಂದುಕೊಟ್ಟರೆ, ಅವರು ಪ್ರಧಾನಿ ಆಗುವ ಸಾಧ್ಯತೆಗಳು ಇವೆ ಎನ್ನುವ ಗಾಳಿ ಸುದ್ದಿಗಳು ಆ ಸಂದರ್ಭದಲ್ಲಿ ಹರಡಿದ್ದವು. ಇಂತಹ ಆಧಾರರಹಿತ ಸುದ್ದಿಗಳು ಪಕ್ಷದಲ್ಲಿ ತಮ್ಮ ಬಗ್ಗೆ ಅವಿಶ್ವಾಸ ಮೂಡಿಸಲಿವೆ ಎಂದೂ ದೀಕ್ಷಿತ್ ಆತಂಕಗೊಂಡಿದ್ದರು. ‘ಇದೊಂದು ಅಸಂಬದ್ಧ, ಆಧಾರರಹಿತ ಸುಳ್ಳು ಸುದ್ದಿ’ ಎಂದು ಅವರು ಹಲವಾರು ಟೆಲಿವಿಷನ್ ಚಾನೆಲ್‌ಗಳಲ್ಲಿ ಹೇಳಿಕೊಳ್ಳಬೇಕಾಯಿತು. ತಮಗಾಗದವರು ಇಂತಹ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ ಎಂದೂ ಸ್ಪಷ್ಟಪಡಿಸಬೇಕಾಯಿತು. ರಾಜಸ್ತಾನದಲ್ಲಿ ಅಶೋಕ್ ಗೆಹ್ಲೋಟ್, ಪಕ್ಷಕ್ಕೆ ಗೆಲುವು ತಂದುಕೊಟ್ಟಾಗಲೂ ಅವರ ಆಯ್ಕೆ ಸುಗಮವಾಗಿರಲಿಲ್ಲ. ತಾವು ಕೂಡ ಮುಖ್ಯಮಂತ್ರಿ ಹುದ್ದೆಯ ವಾರಸುದಾರರು ಎಂದು ಹೇಳಿಕೊಂಡ ಕೆಲವರಿಗೆ ದೆಹಲಿಯ ಭಟ್ಟಂಗಿಗಳು ಬೆನ್ನು ತಟ್ಟಿ ಬೆಂಬಲ ನೀಡಿದ್ದರು. ಗೆಹ್ಲೋಟ್ ಅವರಿಂದಾಗಿಯೇ ಮತದಾರರು ಕಾಂಗ್ರೆಸ್ ಪಕ್ಷ ಗೆಲ್ಲಿಸಿದ್ದರೂ, ಶಾಸಕಾಂಗ ಪಕ್ಷದ ಮುಖಂಡನ ಆಯ್ಕೆ ಅಧಿಕಾರವನ್ನು ಸೋನಿಯಾ ಗಾಂಧಿ ಅವರಿಗೆ ನೀಡಲಾಗಿತ್ತು. ಗೆಹ್ಲೋಟ್ ಅವರು ಮುಖ್ಯಮಂತ್ರಿ ಗದ್ದುಗೆ ಪಡೆದುಕೊಂಡರೂ, ಜಾಟ್ ಮತ್ತು ಮೀನಾ ಸಮುದಾಯಕ್ಕೆ ಸೇರಿದ ಇಬ್ಬರು ಉಪ ಮುಖ್ಯಮಂತ್ರಿ ಹುದ್ದೆಗಳಿಗೆ ಸಮ್ಮತಿಸಿ, ಸೋನಿಯಾ ಪದತಳದಲ್ಲಿ ಶರಣಾಗಿದ್ದರು. ಹರಿಯಾಣದ ಭೂಪಿಂದರ್ ಹೂಡಾ ಅವರೂ ಮುಖ್ಯಮಂತ್ರಿ ಹುದ್ದೆಗೆ ಎರವಾಗುವುದನ್ನು ಸ್ವಲ್ಪದರಲ್ಲಿ ತಪ್ಪಿಸಿಕೊಂಡರು. ದೆಹಲಿಯಲ್ಲಿಯೇ ಬೀಡುಬಿಟ್ಟಿದ್ದ ಅವರು, ಸೋನಿಯಾ ಗಾಂಧಿ ಭೇಟಿಯಾಗಲು ಸಾಕಷ್ಟು ಸಮಯ ಬಾಗಿಲು ಕಾಯಬೇಕಾಯಿತು. ಮುಖ್ಯಮಂತ್ರಿ ಹುದ್ದೆ ಅಲಂಕರಿಸುವ ಮುನ್ನ ಚಂಡೀಗಡ ಮತ್ತು ದೆಹಲಿ ಮಧ್ಯೆ ಸಾಕಷ್ಟು ಬಾರಿ ವಿಮಾನಗಳಲ್ಲಿ ಓಡಾಡಬೇಕಾಯಿತು. ಹಿಂದಿನ ಚುನಾವಣೆಯಲ್ಲಿ ಓಂ ಪ್ರಕಾಶ್ ಚೌತಾಲಾ ಅವರ ಪಕ್ಷದ ಸಹಯೋಗದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತು. ಚೌತಾಲಾ, ಈ ಬಾರಿ ಸ್ವಂತ ಬಲ ನೆಚ್ಚಿಕೊಂಡು ಸ್ಪರ್ಧಿಸಿದ್ದರಿಂದ ಕಾಂಗ್ರೆಸ್‌ಗೆ ಭಾರಿ ಹಿನ್ನಡೆಯಾಗಿದ್ದರೂ ಪ್ರಯಾಸಪಟ್ಟು ಅಧಿಕಾರಕ್ಕೆ ಬಂದಿತ್ತು. ರಾಜ್ಯಸಭಾ ಸದಸ್ಯರ ಆಯ್ಕೆಯಲ್ಲಿಯೂ ಕಾಂಗ್ರೆಸ್ ಪಕ್ಷಕ್ಕಿಂತ ಸೋನಿಯಾ ಗಾಂಧಿ ಅವರೇ ಅಧಿಕಾರ ಚಲಾಯಿಸುತ್ತಾರೆ. ರಾಜೀವ್ ಗಾಂಧಿ ಅವರ ಸಲಹೆಗಾರರಾಗಿದ್ದ ಸತೀಶ್ ಶರ್ಮಾ ಪುನರಾಯ್ಕೆ ಬಗ್ಗೆ ಯಾರಿಗೂ ಅನುಮಾನಗಳು ಇದ್ದಿರಲಿಲ್ಲ. ಪೆಟ್ರೋಲ್ ಪಂಪ್ ಹಂಚಿಕೆ ವಿಷಯದಲ್ಲಿ ಸುಪ್ರೀಂಕೋರ್ಟ್, ಶರ್ಮಾ ಅವರನ್ನು ತಪ್ಪಿತಸ್ಥ ಎಂದು ತೀರ್ಪು ನೀಡಿತ್ತು. ಆದರೆ, ಸೋನಿಯಾ ಗಾಂಧಿ ಅವರಿಗೆ ಪ್ರಾಮಾಣಿಕತೆಗಿಂತ ಭಟ್ಟಂಗಿತನವೇ ಮುಖ್ಯವಾಗಿತ್ತು. ಸೋನಿಯಾ ಗಾಂಧಿ ಹೆಸರು ಅಥವಾ ಅವರು ವಾಸಿಸುವ ‘10 ಜನಪಥ್’ ರಸ್ತೆಯು ಅಧಿಕಾರ ಕೇಂದ್ರಕ್ಕೆ ಅನ್ವರ್ಥ ಹೆಸರಾಗಿದೆ. ಸೋನಿಯಾ ಅವರ ಸಮ್ಮತಿ ಇಲ್ಲದೆ ಪಕ್ಷ ಮತ್ತು ಸರ್ಕಾರದಲ್ಲಿ ಯಾವುದೇ ಒಂದು ನಿರ್ಧಾರವಾಗಲಿ ಅಥವಾ ನೇಮಕವಾಗಲಿ ನಡೆಯುವುದೇ ಇಲ್ಲ. ತಮ್ಮ ಮಾತನ್ನು ಶಿರಸಾವಹಿಸಿ ಪಾಲಿಸುವ ನಿಷ್ಠಾವಂತ ವ್ಯಕ್ತಿಯನ್ನು ಸೋನಿಯಾ, ಪ್ರಧಾನಿ ಮನಮೋಹನ್ ಸಿಂಗ್ ಅವರಲ್ಲಿ ಕಂಡುಕೊಂಡಿದ್ದಾರೆ. ಪಕ್ಷದ ಅಧ್ಯಕ್ಷರು ಮತ್ತು ಪ್ರಧಾನಿಗಳು ಪರ್ಯಾಯ ಅಧಿಕಾರ ಹೊಂದಿದ ಹಲವಾರು ನಿದರ್ಶನಗಳು ಕಾಂಗ್ರೆಸ್ ಪಕ್ಷದಲ್ಲಿ ಇವೆ. ಜವಾಹರಲಾಲ್ ನೆಹರೂ ಮಾತ್ರ ಇದಕ್ಕೆ ಅಪವಾದವಾಗಿದ್ದರು. ಅವರು ಪಕ್ಷದ ಅಧ್ಯಕ್ಷರಿಗೆ ಗೌರವ ನೀಡುತ್ತಿದ್ದರಲ್ಲದೆ ಅವರ ಮಾತೇ ಅಂತಿಮ ಎನ್ನುವುದನ್ನೂ ಪಾಲಿಸಿಕೊಂಡು ಬಂದಿದ್ದರು. ಲಾಲ್ ಬಹಾದ್ದೂರ್ ಶಾಸ್ತ್ರಿ ಮತ್ತು ಇಂದಿರಾ ಗಾಂಧಿ, ಅದರಲ್ಲೂ ಇಂದಿರಾ ಅವರು, ಕಾಂಗ್ರೆಸ್ ಪಕ್ಷದ ಅಧ್ಯಕ್ಷರ ಹುದ್ದೆಯನ್ನು ಚಪರಾಸಿ ಮಟ್ಟಕ್ಕೆ ಇಳಿಸಿದ್ದರು. ಇಎಂಎಸ್ ನಂಬೂದಿರಿಪಾಡ್ ನೇತೃತ್ವದ ಕೇರಳದ ಕಮ್ಯುನಿಸ್ಟ್ ಪಕ್ಷದ ಸರ್ಕಾರವನ್ನು ವಜಾ ಮಾಡಬಾರದು ಎನ್ನುವುದು ನೆಹರೂ ಅವರ ಕಾಳಜಿಯಾಗಿತ್ತು. ಆದರೆ, ಆಗಿನ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆಯಾಗಿದ್ದ ಇಂದಿರಾ ಗಾಂಧಿ ಸರ್ಕಾರ ವಜಾಕ್ಕೆ ಪಟ್ಟು ಹಿಡಿದಿದ್ದರು. ಪಕ್ಷದ ರಾಜಕೀಯ ಹಿತಾಸಕ್ತಿಗಾಗಿ ಸರ್ಕಾರ ವಜಾ ಮಾಡಲು ಬಯಸಿದ್ದರು. ಪಕ್ಷದ ಅಧ್ಯಕ್ಷೆಯಾಗಿ ಕೊನೆಗೂ ಅವರು ತಮ್ಮ ಹಟ ಸಾಧಿಸಿದ್ದರು. ಇಂದಿರಾ, ನೆಹರೂ ಅವರ ಪುತ್ರಿ ಎನ್ನುವುದು ಇಲ್ಲಿ ಮುಖ್ಯವಾಗಿರದೆ, ಕಾಂಗ್ರೆಸ್‌ನ ಅಧ್ಯಕ್ಷೆಯಾಗಿದ್ದರು ಎನ್ನುವುದು ಮುಖ್ಯವಾಗಿತ್ತು. ಪಕ್ಷದ ಅಧ್ಯಕ್ಷರೇ ಪ್ರಧಾನಿಯನ್ನು ನೇಮಕ ಮಾಡುವುದರಿಂದ ಅವರ ಮಾತಿಗೆ ಮಹತ್ವ ಇತ್ತು. ಒಂದು ವೇಳೆ ನೆಹರೂ ಅವರು ತಮ್ಮ ನಿಲುವಿಗೇ ಬಲವಾಗಿ ಅಂಟಿಕೊಂಡಿದ್ದರೆ ಸರ್ಕಾರ ವಜಾ ಆಗುತ್ತಿರಲಿಲ್ಲ. ಆದರೆ, ಅವರು ನಿಯಮಗಳಿಗೆ ಬದ್ಧರಾಗಿದ್ದರಿಂದ ಮತ್ತು ಪಕ್ಷದ ಹಿರಿಮೆ ಗೌರವಿಸುವ ಕಾರಣಕ್ಕೆ ಹಟ ಹಿಡಿಯಲಿಲ್ಲ. ನೆಹರೂ ಅವರ ಉತ್ತರಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಶಾಸ್ತ್ರಿ ಅವರು, ಪಕ್ಷದ ಅಧ್ಯಕ್ಷ ಕೆ. ಕಾಮರಾಜ್ ಅವರನ್ನು ದುಸ್ಸಾಹಸಿ ಎಂದೇ ಪರಿಗಣಿಸಿದ್ದರು. ತಾವು ಪ್ರಧಾನಿ ಆಗಲು ಕಾಮರಾಜ್ ನೆರವಾಗಿದ್ದರೂ, ಶಾಸ್ತ್ರಿ ಅವರು ಕಾಮರಾಜ್ ಅವರ ಅಧಿಕಾರ ಮೊಟಕುಗೊಳಿಸಿದ್ದರು. ರಾಷ್ಟ್ರಪತಿಗೆ ಸಲ್ಲಿಸಿದ ತಮ್ಮ ಸಂಪುಟ ಸದಸ್ಯರ ಹೆಸರಿನ ಪಟ್ಟಿಯನ್ನು ಶಾಸ್ತ್ರಿ ಅವರು ಕಾಮರಾಜ್ ಗಮನಕ್ಕೂ ತಂದಿರಲಿಲ್ಲ. ಇಂದಿರಾ ಗಾಂಧಿ ಅವರಂತೆ ಶಾಸ್ತ್ರಿ ಅವರು ಕನಿಕರ ಇಲ್ಲದ ವ್ಯಕ್ತಿಯಾಗಿರಲಿಲ್ಲ. ಆದರೆ, ಕಾಮರಾಜ್ ಅವರ ವರ್ಚಸ್ಸು ಕುಂದಲು ಮಾತ್ರ ಅವಕಾಶ ಮಾಡಿಕೊಟ್ಟಿರಲಿಲ್ಲ. ಕಾಮರಾಜ್ ಬೆಂಬಲದಿಂದ ಅಧಿಕಾರಕ್ಕೆ ಬಂದ ನಂತರವೂ, ಅಧ್ಯಕ್ಷ ಹುದ್ದೆಯಲ್ಲಿ ಮುಂದುವರೆದ ಇಂದಿರಾ ಗಾಂಧಿ, ಕಾಮರಾಜ್ ಮತ್ತವರ ಸಿಂಡಿಕೇಟ್ ತಮ್ಮ ಹಾದಿಗೆ ಅಡ್ಡಿಯಾಗಲಿದೆ ಎಂದೇ ಭಾವಿಸಿದ್ದರು. ವಿ. ವಿ. ಗಿರಿ ಅವರನ್ನು ರಾಷ್ಟ್ರಪತಿಯಾಗಿ ಆಯ್ಕೆ ಮಾಡುವ ಮೂಲಕ ಪಕ್ಷದ ಅಧಿಕೃತ ಅಭ್ಯರ್ಥಿ ಸಂಜೀವ ರೆಡ್ಡಿ ಅವರನ್ನು ಸೋಲಿಸಿ ಸಿಂಡಿಕೇಟ್‌ಗೆ ಪಾಠ ಕಲಿಸಿದ್ದರು. ಆನಂತರ ಪಕ್ಷದ ಹುದ್ದೆ ಮತ್ತು ಪ್ರಧಾನಿ ಗದ್ದುಗೆ ಎರಡನ್ನೂ ನಿರ್ವಹಿಸುತ್ತಲೇ ಮುಂದುವರೆದಿದ್ದರು. ತಾಯಿಯ ಆದರ್ಶವನ್ನೇ ಪುತ್ರ ರಾಜೀವ್ ಗಾಂಧಿ ಕೂಡ ಪಾಲಿಸಿಕೊಂಡು ಬಂದಿದ್ದರು. ಈ ಪರಂಪರೆಗೆ ಸೋನಿಯಾ ಗಾಂಧಿ ಅಪವಾದವಾಗಿದ್ದಾರೆ. ಕಾಂಗ್ರೆಸ್ ಮುಖಂಡರೆಲ್ಲ ಅವರನ್ನೇ ತಮ್ಮ ಅಧಿನಾಯಕಿ ಮತ್ತು ಪಕ್ಷವನ್ನು ಅಧಿಕಾರಕ್ಕೆ ತರುವ ಸಾಮರ್ಥ್ಯ ಅವರಲ್ಲಿ ಮಾತ್ರ ಇರುವುದನ್ನು ಒಪ್ಪಿಕೊಂಡಿದ್ದಾರೆ. ಇದು ಅವರ ಪರವಾಗಿರುವ ಅನುಕೂಲ. ಪಕ್ಷದವರು ತಮ್ಮ ಮೇಲೆ ಇಟ್ಟಿರುವ ನಂಬಿಕೆಯನ್ನು ಸೋನಿಯಾ ನಿಜ ಮಾಡಿಯೂ ತೋರಿಸಿದ್ದಾರೆ. ಪಕ್ಷದ ಅಧ್ಯಕ್ಷೆಯಾಗಿ ಅಧಿಕಾರವಹಿಸಿಕೊಂಡ ನಂತರ ಅವರು ಪಕ್ಷದಲ್ಲಿನ ವಿರೋಧವನ್ನು ಬಗ್ಗುಬಡಿದಿದ್ದಾರೆ. ಈಗ ಅವರ ಗುರಿ ಏನಿದ್ದರೂ, ಪುತ್ರ ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಆಗಿ ಮಾಡುವುದು. ಪ್ರಧಾನಿ ಗದ್ದುಗೆಯಲ್ಲಿ ರಾಹುಲ್ ಅವರನ್ನು ಪ್ರತಿಷ್ಠಾಪಿಸುವವರೆಗೆ ಮನಮೋಹನ್ ಸಿಂಗ್ ಅವರನ್ನೇ ಪ್ರಧಾನಿ ಹುದ್ದೆಯಲ್ಲಿ ಮುಂದುವರೆಸಲಿದ್ದಾರೆ. ಎರಡನೇ ಬಾರಿಗೆ ಪ್ರಧಾನಿ ಆದ ಕೂಡಲೇ ನಡೆದ ಸುದ್ದಿಗೋಷ್ಠಿಯಲ್ಲಿ ಸ್ವತಃ ಮನಮೋಹನ್ ಸಿಂಗ್ ಅವರೇ, ರಾಹುಲ್ ಗಾಂಧಿ ಅವರಿಗಾಗಿ ಯಾವುದೇ ಸಂದರ್ಭದಲ್ಲಿ ಪದತ್ಯಾಗ ಮಾಡಲು ತಾವು ಸಿದ್ಧ ಎಂದು ಘೋಷಿಸಿದ್ದರು. ಆರೆಸ್ಸೆಸ್ ತನ್ನ ಉದ್ದೇಶ ಏನೆಂಬುದನ್ನು ಸ್ಪಷ್ಟಪಡಿಸಿದ ನಂತರವೇ ಬಿಜೆಪಿಯು ನಿತಿನ್ ಗಡ್ಕರಿ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿತು. ಪಕ್ಷದ ನಿಯಂತ್ರಣ (ರಿಮೋಟ್ ಕಂಟ್ರೋಲ್) ವಿಷಯದಲ್ಲಿ ಬಿಜೆಪಿಯು ಕಾಂಗ್ರೆಸ್‌ಗಿಂತ ಭಿನ್ನವಾಗಿದೆ. ನಾಗಪುರದಲ್ಲಿ ಇರುವ ಆರೆಸ್ಸೆಸ್‌ನ ಪ್ರಧಾನ ಕಚೇರಿಯೇ ಬಿಜೆಪಿಯ ವರಿಷ್ಠ ಮಂಡಳಿಯಾಗಿದೆ. ರಾಜ್ಯ ವಿಧಾನಸಭೆ ಮತ್ತು ಸಂಸತ್ತಿನಲ್ಲಿನ ಕಾಂಗ್ರೆಸ್ ಮತ್ತು ಬಿಜೆಪಿಯ ಶಾಸಕರು – ಸಂಸದರು, ಪಕ್ಷದ ಅಧ್ಯಕ್ಷರ ಅಣತಿಯಂತೆ ವರ್ತಿಸುವ ಕೈಗೊಂಬೆಗಳಾಗಿದ್ದಾರೆ. ಚುನಾಯಿತ ಪ್ರತಿನಿಧಿಗಳು ಎಲ್ಲ ಪಕ್ಷಗಳಲ್ಲೂ ಸ್ವಂತಿಕೆ ಕಳೆದುಕೊಂಡಿದ್ದಾರೆ. ಎರಡೂ ಪಕ್ಷಗಳಲ್ಲಿ ವರಿಷ್ಠ ಮಂಡಳಿಯದ್ದೇ ಅಂತಿಮ ಮಾತು. ಶಾಸಕರು ಮತ್ತು ಸಂಸದರನ್ನು ಆಯ್ಕೆ ಮಾಡುವ ಸಂಪೂರ್ಣ ಅಧಿಕಾರವು ಕಾಂಗ್ರೆಸ್‌ನಲ್ಲಿ ಸೋನಿಯಾ ಗಾಂಧಿ ಮತ್ತು ಬಿಜೆಪಿಯಲ್ಲಿ ಆರೆಸ್ಸೆಸ್ ಬೆಂಬಲಿತ ಅಡ್ವಾಣಿ ಅಥವಾ ಗಡ್ಕರಿ ಅವರ ಬಳಿ ಇರುವಾಗ ಮತದಾರರು ಉತ್ತಮ ಜನಪ್ರತಿನಿಧಿಗಳೇ ಆಯ್ಕೆಯಾಗಬೇಕೆಂದು ಬಯಸುವುದು ಏಕೆ?

Posted in ಪ್ರಸ್ತುತ | Tagged: , , , , | Leave a Comment »

ಇದು ಸೋಲಾ ಅಥವಾ ಗೆಲುವಾ?

Posted by ajadhind on ಜುಲೈ 26, 2010

ಅಜಯ್ ಗುಲ್ಬರ್ಗ. ಆಂಗ್ಲ ಲೇಖನ ಓದಲು ಇಲ್ಲಿ ಕ್ಲಿಕ್ ಮಾಡಿ.

ಅನುವಾದ-ಆಜಾದ್ ಹಿಂದ್.

ಹೊನ್ನಕಿರಣಗಿ, ನದಿಸಿನ್ನುರ ಮತ್ತು ಫಿರೋಜಾಬಾದ್ನಲ್ಲಿ ಉಷ್ಣ ವಿದ್ಯುತ್ ಸ್ಥಾವರಕ್ಕೆ ಭೂಮಿ ವಶಪಡಿಸಿಕೊಳ್ಳಲು ಸರಕಾರ ಯಶಸ್ವಿಯಾಗಿದೆ. ತಿಂಗಳುಗಟ್ಟಲೆ ಹೋರಾಟ ಮಾಡಿದ ರೈತರು ಬುಮಿ ಕೊಡಲು ಒಪ್ಪಿದ್ದಾರೆ. ಇದೇ ಜುಲೈ ೨೩ ರಂದು ಈ ಯೋಜನೆಯಿಂದ ಪರಿಸರದ ಮೇಲಾಗುವ ಪರಿಣಾಮಗಳ ಬಗ್ಗೆ ಚರ್ಚಿಸಲು ಸಭೆ ಕರೆಯಲಾಗಿತ್ತು. ರೈತರಿಗೆ ಎಕರೆಗೆ ೯ ಲಕ್ಷ ರುಪಾಯಿ ನೀಡಲಾಗುತ್ತಿದೆ. ಸಾಂಕೇತಿಕವಾಗಿ ಅಂದು ಮೂವರಿಗೆ ಪರಿಹಾರ ವಿತರಿಸಲಾಯಿತು. ಅವರಲ್ಲೊಬ್ಬರಿಗೆ ೧ ಕೋಟಿ ರುಪಾಯಿಯನ್ನು ವಿತರಿಸಲಾಯಿತು.

ಪರಿಹಾರದ ಮೊತ್ತದಲ್ಲಿ ಹೆಚ್ಚಳ, ಪೌರಕಾರ್ಮಿಕರ ಹೋರಾಟದಲ್ಲಿ ಪಾಲ್ಗೊಂಡಿದ್ದ ಎಸ.ಕೆ.ಕಾಂತರ ಬಂಧನ, ಸರಕಾರದ ಬೆದರಿಕೆ – ಇವೆಲ್ಲಾ ಪ್ರತಿಭಟನೆ ಹಿಂತೆಗುದುಕೊಳ್ಳಲು ಕಾರಣವಾಯಿತು.

ಸಭೆಯಲ್ಲಿ ರೈತರು ತಮಗೆ ಸಿಕ್ಕುವ ಪರಿಹಾರದ ಬಗ್ಗೆ, ತಮ್ಮ ಮಕ್ಕಳಿಗೆ ಸಿಗಬಹುದಾದ ಕೆಲಸದ ಬಗ್ಗೆ ತಿಳಿಯಲು ಹೆಚ್ಚು ಉತ್ಸಾಹಿತರಾಗಿದ್ದರು. ಪರಿಸರದ ಪರಿಣಾಮಗಳ ಬಗ್ಗೆ ಚರ್ಚೆ ಹೆಚ್ಚಾಗಿ ಆಗಲಿಲ್ಲ.

ಕೊನೆಗೆ ಈ ಹೋರಾಟದಲ್ಲಿ ಗೆದ್ದಿದ್ದ್ಯಾರು, ಸೋತಿದ್ದ್ಯಾರು? ಸರಕಾರ? ರೈತರು? ಹೋರಾಟಗಾರರು? ಹಸಿದ ಜನ? ದೇಶದ ಪ್ರಗತಿಗೆ ವಿದ್ಯುತ್ ಅತ್ಯವಷ್ಯವಾಗಿ ಬೇಕು ಎಂಬ ಸಂಗತಿಯನ್ನು ಯಾರು ಅಲ್ಲಗೆಳೆಯಲಾರರು. ಆದರೆ ಕೆಲವೊಂದು ಮೂಲಭೂತ ಪ್ರಶ್ನೆಗಳು ಹಾಗೆಯೇ ಉಳಿದುಹೊಗುತ್ತವೆ

> ರಾಯಚೂರಿನ ಸುತ್ತಲು ನಡೆದಿರುವ ಅಧ್ಯಯನಗಳು ಅಲ್ಲಿರುವ ಉಷ್ಣ ವಿದ್ಯುತ್ ಸ್ಥಾವರದಿಂದ ಅಲ್ಲಿನ ತಾಪಮಾನದಲ್ಲಿ ಬದಲಾವಣೆಗಳಾಗಿವೆ ಎಂದು ಸೂಚಿಸುತ್ತದೆ. ಮೊದಲೇ ಬೇಸಿಗೆಯಲ್ಲಿ ೪೫ – ೪೭ ಡಿಗ್ರಿಯಲ್ಲಿ ಬೇಯುವ ಗುಲ್ಬರ್ಗದ ಮೇಲೆ ಈ ಸ್ಥಾವರದ ಪರಿಣಾಮಗಳು ಏನು?

>ರಾಯಚೂರು ವಿದ್ಯುತ್ ಸ್ಥಾವರ ತನ್ನ ಸಂಪೂರ್ಣ ಸಾಮರ್ಥ್ಯಕ್ಕೆ ತಕ್ಕಂತೆ ಕಾರ್ಯ ನಿರ್ವಹಿಸಿದರೆ ರಾಜ್ಯದ ಬಹುತೇಕ ವಿದ್ಯುತ್ ಸಮಸ್ಯೆ ಬಗೆಹರಿಯುತ್ತದೆ. ಆದರೆ ಅದರ ಕಡೆಗೆ ಗಮನವರಿಸದ ಸರಕಾರ ಹೊಸ ಯೋಜನೆಗೆ ಯಾಕಿಷ್ಟು ಉತ್ಸಾಹ ತೋರಿಸುತ್ತಿದೆ?

>ವಿದ್ಯುತ್ ನ ಸಾಗಾಣಿಕೆಯಲ್ಲಿ ೨೦ – ೩೦% ನಷ್ಟು ನಷ್ಟವಾಗುವುದನ್ನು ತಡೆಗಟ್ಟಿದರು ಸಮಸ್ಯೆಯ ಬಹುಭಾಗವನ್ನು ತಗ್ಗಿಸಬಹುದು ಎಂದು ಈ ಕ್ಷೇತ್ರದ ಪರಿಣಿತರು ಹೇಳಿದರು ಸರಕಾರ ಆ ನಿಟ್ಟಿನಲ್ಲಿ ಯಾಕೆ ಯೋಚಿಸುವುದಿಲ್ಲ?

>ನಗರಗಳಲ್ಲಿ ಒಮ್ಮೆ ಪ್ರದಕ್ಷಿಣೆ ಹಾಕಿದರೆ ಕೇವಲ ಜಾಹಿರಾತಿಗೆ ಎಷ್ಟು ವಿದ್ಯುತ್ ವ್ಯಯವಾಗುತ್ತಿದೆ ಎಂಬುದರ ಅರಿವಾಗುತ್ತದೆ. ನಾವು ವಿದ್ಯುತ್ ಉತ್ಪಾದನೆಯಲ್ಲಿ ಸಂಪೂರ್ಣ ಸ್ವಾವಲಂಬಿಗಲಾಗುವ ತನಕ ಈ ರೀತಿಯ ಪೋಲನ್ನು ನಿಲ್ಲಿಸಬಹುದಲ್ಲವೇ?

>ಕೊನೆಯದಾಗಿ – ರೈತರಿಗೆ ಹಣ ದಕ್ಕಿತು, ಸರಕಾರಕ್ಕೆ ಜಾಗ, ಬಹುಶ ಅವರ ಅಧಿಕಾರಿಗಳಿಗೆ ಕಮಿಷನ್, ನಮಗೆ ವಿದ್ಯುತ್. ಆದರೆ ಮುಂದಿನ ಜನಾಂಗದ ಆಹಾರ ಭದ್ರತೆ? ಹೆಚ್ಚುತ್ತಿರುವ ದರಗಳಿಂದ ಖರೀದಿ ಶಕ್ತಿ ಕಳೆದುಕೊಳ್ಳುತ್ತಿರುವ ಜನರ ಬವಣೆ? ಬೇಳೆಯ ಬೆಲೆ ೧೦೦ ರು ತಲುಪುತ್ತೆ ಮತ್ತು ನಾವು ಬೇಳೆಯನ್ನು ಹೆಚ್ಚಾಗಿ ಬೆಳೆಯುವ ಪ್ರದೇಶಗಳನ್ನು ವಿದ್ಯುತ್ ಸ್ಥಾವರಕ್ಕೆ ವಶಪಡಿಸಿಕೊಳ್ಳುತ್ತೇವೆ.

“ಪ್ರಜಾಪ್ರಭುತ್ವ” ಭಾರತ ಅಮರವಾಗಲಿ!!

Posted in ಕರ್ನಾಟಕ, ಪ್ರಸ್ತುತ | Tagged: , , | Leave a Comment »

ತಲೆಯ ಮೇಲೆ ಮಲ ಸುರಿದುಕೊಂಡರು

Posted by ajadhind on ಜುಲೈ 21, 2010

Posted in ಇನ್ನೊಂದು ಮುಖ, ಕರ್ನಾಟಕ | Tagged: | Leave a Comment »

PRESS RELEASE OVER JNANESHWARI TRAIN DERAILMENT

Posted by ajadhind on ಜುಲೈ 4, 2010

last press release from azad

Posted in ಇನ್ನೊಂದು ಮುಖ, ಪತ್ರಿಕಾ ಪ್ರಕಟಣೆ | Tagged: , , , | Leave a Comment »

DAYS AND NIGHT IN THE HEARTLAND OF REBELLION – PART 4[KANNADA]

Posted by ajadhind on ಜುಲೈ 4, 2010

days and night in the heartland of rebellion by goutham navlakha – 4

Posted in ಅನುವಾದ, ನಕ್ಸಲಿಸ೦ | Tagged: | Leave a Comment »

ಕರ್ನಾಟಕದ ಗೃಹ ಮಂತ್ರಿಗೊಂದು ಪತ್ರ.

Posted by ajadhind on ಜೂನ್ 23, 2010

” ಕರ್ನಾಟಕದಲ್ಲಿ ಈಗ ನಕ್ಸಲರು ಇಲ್ಲ. ನಕ್ಸಲ್ ಚಟುವಟಿಕೆಯನ್ನು ಸಂಪೂರ್ಣವಾಗಿ ನಿರ್ನಾಮ ಮಾಡಿದ್ದೇವೆ. ನಕ್ಸಲ್ ಪೀಡಿತ ಪಟ್ಟಿಯಿಂದ ಕರ್ನಾಟಕ ಹೊರಕ್ಕೆ.” – ಗೃಹ ಸಚಿವ ವಿ.ಎಸ್.ಆಚಾರ್ಯ.
ನಕ್ಸಲರೆಂದರೆ ಕಾಡಿನಲ್ಲಿದ್ದು ಬಂದೂಕು ಹಿಡಿದಿರುವವರು ಮಾತ್ರ ಎಂದು ತಿಳಿದವರಿಂದ ಮಾತ್ರ ಈ ರೀತಿಯ ಹೇಳಿಕೆ ಬರಲು ಸಾಧ್ಯ. ಹೌದು , ಬಹಳಷ್ಟು ಜನ ಪ್ರಮುಖ ನಾಯಕರ ಬಂಧನದಿಂದ ರಾಜ್ಯದಲ್ಲಿ ನಕ್ಸಲರ ಸಂಖ್ಯೆ ಕ್ಷೀಣಿಸಿದೆ. ಆದರೆ ಕರ್ನಾಟಕ ‘ನಕ್ಸಲ್ ಮುಕ್ತ’ರಾಜ್ಯವಾ?.
ಮೊದಲನೆಯದಾಗಿ ನಕ್ಸಲ್ ಚಳುವಳಿ ಭಾರತದಾದ್ಯಂತ ವ್ಯಾಪಿಸಲು ಮೂಲ ಕಾರಣ ದೇಶದ ಆಡಳಿತದಲ್ಲಿನ ಲೋಪದೋಷಗಳು, ರಾಜ್ಯಕ್ಕೂ ಅದು ಅನ್ವಯವಾಗುತ್ತೆ. ಒಂದೊಮ್ಮೆ ನಕ್ಸಲ್ ಹೋರಾಟ ಸಂಪೂರ್ಣವಾಗಿ ನಿಲ್ಲಬೇಕಾದರೆ ಸರಕಾರಗಳು ಸರಿಯಾಗಿ ಕಾರ್ಯ ನಿರ್ವಹಿಸಬೇಕು. ಆದರೆ ಅದು ಆಗುತ್ತಿದೆಯೇ? ಕರ್ನಾಟಕದ ಉದಾಹರಣೆಯನ್ನೇ , ಅದರಲ್ಲೂ ಕೇವಲ ಈಗಿನ ಸರಕಾರದ ಉದಾಹರಣೆಯನ್ನೇ ತೆಗೆದುಕೊಳ್ಳುವುದಾದರೆ ಬಿ.ಜೆ.ಪಿ. ಸರಕಾರ ಅಧಿಕಾರಕ್ಕೆ ಬಂದ ನಂತರ ಕೊಟ್ಟಿರುವ ಆಡಳಿತ ಜನರಲ್ಲಿ ಭರವಸೆ ಮೂಡಿಸುವ ಹಾಗಿದೆಯಾ? ಗಣಿ ಮಾಫಿಯಾದವರ ಅಟ್ಟಹಾಸ , ಮಂತ್ರಿಗಳ ಭ್ರಷ್ಟಾಚಾರ, ಹಾದರ, ಕೋಮುಗಲಭೆಗಳು, ಎಲ್ಲಾ ಕೋಮಿನ ಮೂಲಭೂತವಾದಿಗಳ ಅಟ್ಟಹಾಸ, ಉತ್ತರ ಕರ್ನಾಟಕದಲ್ಲಾದ ಪ್ರವಾಹ ಸಂತ್ರಸ್ತರಿಗೆ ಎಲ್ಲಾ ಪಕ್ಷದವರು ಮಾಡಿದ ಮಾಡುತ್ತಿರುವ ಮೋಸ – ಜನರು ಈ ಕಾರಣಕ್ಕಾಗಿ ‘ಪ್ರಜಾ ಪ್ರಭುತ್ವದಲ್ಲಿ’ ನಂಬಿಕೆ ಇಡಬೇಕಾ? ಅಲ್ಲಿಗೂ ಜನರು ಸರಕಾರಕ್ಕೆ ಬೆಂಬಲ ಕೊಡುವಂತೆ ಇದ್ದಾರೆ ಎಂಬುದಕ್ಕೆ ಕಾರಣ ಅವರಿಗೆ ಮತ್ಯಾವ ಪರ್ಯಾವವೂ ಕಾಣದಿರುವುದೇ ಆಗಿದೆ.
ಸದ್ಯದ ಮಟ್ಟಿಗೆ ರಾಜ್ಯದಲ್ಲಿ ನಕ್ಸಲ್ ಚಟುವಟಿಕೆ ಹಿನ್ನೆಡೆ ಅನುಭವಿಸಿರಬಹುದು. ಆದರೆ ರಾಜ್ಯದ ಜನರಿಗೆ ಒಂದು ಸಂದೇಶ ಮುಟ್ಟಿದೆ. ನಮ್ಮನ್ನು ಸರಕಾರ ನಿರ್ಲ್ಯಕ್ಷಿಸುತ್ತಿದ್ದಾಗ ನಕ್ಸಲ್  ಚಳುವಳಿ ಮಾತ್ರ ನಮ್ಮ ಸಮಸ್ಯೆಗಳಿಗೆ ಉತ್ತರವಾಗಬಲ್ಲದು ಎಂದು. ಇದು ಮಲೆನಾಡಿನಲ್ಲಿ ನಕ್ಸಲರಿಗೆ ಸಿಕ್ಕ ಗೆಲುವು. ಸರಕಾರದ ಅಧಿಕಾರಿಗಳೇ ಹೇಳಿರುವಂತೆ ಕೆಲವು ಉತ್ತಮ ಅಧಿಕಾರಿಗಳ ನೆರವಿನಿಂದ ಮಲೆನಾಡಿನಲ್ಲಿ ನಕ್ಸಲ್ ಪ್ರಭಾವ ತಗ್ಗಿದೆಯಂತೆ. ಅಲ್ಲಿಗೆ ಉತ್ತಮ ಕೆಲಸ ಮಾಡುವ ಅಧಿಕಾರಿಗಳು ನಮ್ಮ ಜಾಗಕ್ಕೆ ಬರಬೇಕಾದರೆ ಮತ್ತು ಅಧಿಕಾರಿಗಳು ನಮ್ಮ ಪ್ರದೇಶದಲ್ಲಿ ಉತ್ತಮ ಕೆಲಸ ಮಾಡಬೇಕಾದರೆ ಒಂದಷ್ಟು ದಿನಗಳ ಮಟ್ಟಿಗಾದರೂ ಅಲ್ಲಿನ ಜನರು ನಕ್ಸಲ್ ಹೋರಾಟದಲ್ಲಿ ಭಾಗವಹಿಸಬೇಕೆಂದು ಸರಕಾರವೇ ಪರೋಕ್ಷವಾಗಿ ತಿಳಿಸಿದಂತಾಯಿತು.
ಉಳಿದಂತೆ ರಾಜ್ಯದ ಬಹುತೇಕ ಶಾಂತ ರೀತಿಯ ಹೋರಾಟಗಳನ್ನು ರಾಜ್ಯ ಸರಕಾರ ತನ್ನ ಕುತಂತ್ರದಿಂದ, ಅಧಿಕಾರದ ಬಲಪ್ರಯೋಗದಿಂದ ಹತ್ತಿಕ್ಕಿರುವುದನ್ನು ಜನರು ನೋಡಿದ್ದಾರೆ. ಇತ್ತೀಚಿನ ಉದಾಹರಣೆ ಗುಲ್ಬರ್ಗದ ಅಣು ವಿದ್ಯುತ್ ಸ್ಥಾವರ.
ಅಭಿವೃದ್ಧಿಯ ಹೆಸರಿನಲ್ಲಿ ಸಾವಿರಾರು ಎಕರೆಗಳನ್ನು ಕೃಷಿಯೇತರ ಚಟುವಟಿಕೆಗಳಿಗೆ ಕೊಡಲು ಹೊರಟಿದೆ ನಮ್ಮ ಸರಕಾರ. ನಕ್ಸಲ್ ಹೋರಾಟವನ್ನು ಬಿಟ್ಟು ಉಳಿದ ಯಾವುದೇ ಹೋರಾಟವನ್ನು ಅಲ್ಲಿನ ಜನ ನೆಚ್ಚಿಕೊಂಡರೆ ಗುಲ್ಬರ್ಗದ ರೈತರಿಗಾದ ಸ್ಥಿತಿಯೇ ಅವರಿಗೂ ಆಗುವ ಸಾಧ್ಯತೆಗಳು ಅಧಿಕ. ಒಂದೊಮ್ಮೆ ಸರಕಾರ ತನ್ನ ಅಧಿಕಾರದ ಬಲದಿಂದ ಜನರನ್ನು ಬೆದರಿಸಿ ಕೃಷಿಯೋಗ್ಯ ಭೂಮಿಯನ್ನು ವಶಪಡಿಸಿಕೊಂಡರೆ ನಂತರದ ದಿನಗಳಲ್ಲಿ ಆಕಾಶದ ಕಡೆ ಮುಖ ಮಾಡುವ ಆಹಾರ ಉತ್ಪನ್ನಗಳ ಬೆಲೆಯ ಬಿಸಿ ಜನರಿಗಿ ಮುಟ್ಟಿದಾಗ ಶುರುವಾಗುವ ಹೋರಾಟವನ್ನು ತಡೆಯಲು ಸರಕಾರದ ಬಳಿ ‘ ಅಪರೇಷನ್ ಗ್ರೀನ್ ಹಂಟ್’ ನಂತಹ ಯೋಜನೆಗಳನ್ನು ಬಿಟ್ಟು ಬೇರೆ ಯೋಚನೆಗಳಿವೆಯೇ?

Posted in ಕರ್ನಾಟಕ, ನಕ್ಸಲಿಸ೦, ಪತ್ರಿಕಾ ಪ್ರಕಟಣೆ, ಪ್ರಸ್ತುತ | Tagged: , , , | Leave a Comment »