ಹೋರಾಟದ ಹಾದಿ

ಆದರ್ಶವಾದಿಗಳಿಗೆ ಕೊನೆಯಿರಬಹುದು, ಆದರ್ಶಕ್ಕಲ್ಲ.

Ban On Cow slaughtering?

Posted by ajadhind on ಏಪ್ರಿಲ್ 4, 2010

recieved via mail
ಮಾನ್ಯರೇ,

ಮನೆಯ ಎದುರಿಗೋ ಪಕ್ಕಕ್ಕೋ ಯಾರಾದರೂ ದನ ಸಾಕಿದ್ದೇ ಆದಲ್ಲಿ ನಾವು, ನಾಗರವಾಸಿಗಳ ಮೊದಲ
ಪ್ರತಿಕ್ರಿಯೆ ‘ ಈ ನಗರಗಳಲ್ಲಿ ಯಾಕಾದಾರೂ ಈ ಪ್ರಾಣಿಗಳನ್ನು ಸಾಕಲು ಅನುಮತಿ
ಕೊಡ್ತಾರೋ’ ಎಂದೇ ಇರುತ್ತೆ. ಬೆಳಿಗ್ಗೆ ಎದ್ದ ಕೂಡಲೇ ನಮಗೆ ಹಾಲು ಬೇಕು, ಹೋಳಿಗೆ
ಮೇಲೆ ಸುರಿದುಕೊಳ್ಳಲು ತುಪ್ಪ, ರೊಟ್ಟಿಯ ಜೊತೆಗೆ ಬೆಣ್ಣೆ ಇದ್ದರೆ ಅದರ ರುಚಿಯೇ ಬೇರೆ
ಎನ್ನುವ ನಮಗೆ ಪಕ್ಕದಲ್ಲೇ ಸಗಣಿಯ ವಾಸನೆ ಇದ್ದರೆ ತಡೆಯಲಾಗುವುದಿಲ್ಲ. ದನಗಳ
ಸಾಕುವಿಕೆ ಅದರ ಕಷ್ಟಗಳೇನಿದ್ದರೂ ಅದು ಹಳ್ಳಿಗಳಿಗೇ ಸೀಮಿತವಾಗಿ ನಮಗೆ ಅದರಿಂದ ಬರುವ
ಉತ್ಪನ್ನಗಳ ಮೇಲಷ್ಟೇ ಕಣ್ಣು. ಅಬ್ಬಬ್ಬಾ ಎಂದರೆ ಗ್ರಹಪ್ರವೇಶದ ದಿನ ಬಲವಂತವಾಗಿ ಒಂದು
ದಾನವನ್ನು ಮನೆಯೊಳಗೆ ಹೊಡೆದುಕೊ0ನ್ಡು ಬಂದು ಅದು ಸೆಗಣಿ ಹಾಕುವವರಿಗೂ ಕಾದು ನಂತರ
ಮನೆಯಿಂದ ಓಡಿಸುವುದು, ಅಷ್ಟೇ.
ಅಷ್ಟಕ್ಕೂ ಈಗ ಹಳ್ಳಿಗಳಲ್ಲದಾರೂ ಎಷ್ಟು ಮಂದಿ ಎತ್ತು ದನ ಸಾಕುತ್ತಿದ್ದಾರೆ? ನಮ್ಮ
ಅಜ್ಜನ ಊರಲ್ಲಿ ನಾನೇ ನೋಡಿದಂತೆ ನಾನು ಚಿಕ್ಕವನಿದ್ದಾಗ ನಮ್ಮ ಮನೆಯಲ್ಲೇ ಆರಕ್ಕೂ
ಹೆಚ್ಚು ರಾಸುಗಳಿದ್ದವು, ಕೊನೆಗೆ ಒಂದೊಂದಾಗಿ ಎಲ್ಲವೂ ಮಾರಾಟವಾಗಿ ಎತ್ತಿನ ಗಾಡಿಯ
ಜೊತೆಯಲ್ಲಿ ಉಳಿದೆರಡು ಎತ್ತುಗಳು ಮಾರಲ್ಪಟ್ಟವು. ರಾಸುಗಳ ಮೇಲಿನ ಬೇಸರದಿಂದಲ್ಲ ಮಾರಟ
ಮಾಡಿದ್ದು, ಅದು ಅವತ್ತಿನ ದಿನಕ್ಕೆ ಅವರಿಗೆ ಸರಿಯೆನಿಸಿದ ವ್ಯವಹಾರಿಕತೆ. ಅಷ್ಟಕ್ಕೂ
ಸಂಸ್ಕೃತಿಯ ರಕ್ಷಣೆಯ ಹೆಸರಿನಲ್ಲಿ ಗೋಮಂಸವನ್ನು ನಿಷೇದಿಸಿರುವಸರಕಾರದಕ್ರಮಎಷ್ಟರ
ಮಟ್ಟಿಗೆ ಸರಿ? ಸರಕಾರಕ್ಕೆ ಬೆದರಿಕೆ ಒಡ್ದುವ ರೀತಿಯಲ್ಲಿ ವರ್ತಿಸಿದ ಅನೇಕ ಸಂಗಟನೆಗಳ
ಅಭಿಪ್ರಾಯ ಎಷ್ಟರ ಮಟ್ಟಿಗೆ ಸಾಧು? ಪ್ರತಿಭಟನೆ ಮಾಡಿದವರಾಗಲಿ ನಿರ್ಧಾರ ತೆಗೆದುಕೊಂಡ
ಸರಕಾರಕ್ಕಾಗಲಿ ರಾಸುಗಳನ್ನು ಸಾಕಬೇಕಾದ ಅನಿವಾರ್ಯತೆಯಿಲ್ಲ. ಈಗಲೂ ಇಲಾತಿ
[ವಿಲಾಯಿತಿ] ಹಸುಗಳನ್ನು ಸಾಕುವವರು ಹುಟ್ಟಿದ ಕರು ಗಂಡಾದಲ್ಲಿ
ಬೇಸರಪಟ್ಟುಕೊಳ್ಳುವುದು ಸುಳ್ಳಲ್ಲ. ಅದು ಅವರು ನಡೆಸುವು ವ್ಯವಹಾರದಲ್ಲಿ ಒಂದು
ಹಿನ್ನಡೆಯಷ್ಟೇ. ಕರು ಒನ್ದಷ್ಟು ದೊಡ್ಡದಾದ ಮೇಲೆ ಅದನ್ನು ಮಾರಿದರಷ್ಟೇ ಅವರಿಗೆ
ವ್ಯವಹಾರದಲ್ಲಿ ಮುಂದುವರಿಯಲು ಸಾಧ್ಯ. ಪ್ರತಿ ಬಾರಿ ಗಂಡು ಕರುವೇ ಹುಟ್ಟಿ
ಅವೆಲ್ಲವನ್ನೂ ಶಾಸನದನ್ವಯ ಸಾಕಲೇಬೇಕಾದ ಅನಿವಾರ್ಯತೆ ಸೃಷ್ಟಿ ಆದರೆ ಅವರು
ಹೈನುಗಾರಿಕೆಯ ವೃತ್ತಿಯಲ್ಲಿ ಮುಂದುವರಿಯುವುದಾರು ಹೇಗೆ?
ಇನ್ನೂ ರಾಸುಗಳ ರಕ್ಷಣೆಗೋಸ್ಕರ ಬೀದಿಗಿಳಿದ ಸ್ವಾಮೀಜಿಗಳ ಬಗ್ಗೆ. ಪಾಪ ಅವರಿಗೆ
ರಾಸುಗಳ ಬಗ್ಗೆ ವಿಪರೀತ ಕಾಳಜಿ, ಅವುಗಳ ಹತ್ಯೆ[?] ಯಾದರೆ ನಮ್ಮ ಸಂಸ್ಕೃತಿಯೇ
ನಾಶವಾದಂತೆ ಎಂಬ ವಿಷಯವನ್ನು ಜನರಿಗೆ ಮನದಟ್ಟಾಗುವ0ತೆ ವಿವರಿಸುತ್ತಿದ್ದಾರೆ. ಆದರೆ
1997ರಿಂದ 2008ರವರೆಗೆ ನಮ್ಮ ದೇಶದ ಐದು ರಾಜ್ಯಗಳಲ್ಲಿ [ಕರ್ನಾಟಕ, ಮಹಾರಾಷ್ತ್ರ,
ಆಂಧ್ರಪ್ರದೇಶ, ಚತ್ತೀಸಗಢ, ಮಧ್ಯಪ್ರದೇಶ] ಸರಕಾರಿ ಲೆಕ್ಕದ ಪ್ರಕಾರವೇ ಒಂದು
ಲಕ್ಷಕ್ಕೂ ಅಧಿಕ ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಗ ಎಲ್ಲಿ ಹೋಗಿದ್ದರು
ಈ ಸ್ವಾಮಿಗಳು ಮತ್ತವರ ಸಂಸ್ಕೃತಿ ರಕ್ಷಕರು? ರೈತನ ಜೀವದ ಬೆಲೆ ಹಸುವಿಗಿಂತ ಕಡೆಯಾಗಿ
ಹೋಯಿತಾ? ಸ್ವಾಮೀಜಿಗಳ ಪಾದದಡಿಗೇನೋ ಸರಕಾರ ಕೋಟ್ಯಾಂತರ ರೂಪಾಯಿ ಕೊಡುತ್ತೆ ಅವುಗಳ
ಅಭಿವೃದ್ಧಿಗೆ, ಆದರೆ ಇವರು ಮಾಡಿದ ಕಾನೂನಿನಿಂದ ಮುದಿ ರಾಸುಗಳನ್ನು ಸಾಕುವ
ಅನಿವಾರ್ಯತೆಗೆ ಬೀಳುವ ರೈತರಿಗೆ ಸರಕಾರದಿಂದ ಯಾವ ಸಹಕಾರ ಸಿಗುತ್ತೆ? ಇರುವ ಗೋ
ಮಾಳಗಳನ್ನೇ ಸರಕಾರದ ಬೆಂಬಲದಿಂದ ಕಬಳಿಸುತ್ತಿರುವಾಗ?
ನಾಳೆ ಇನ್ನೊಬ್ಬ ಆಡಳಿತಾಧಿಕಾರಿ ಬಂದು ಯಾವುದೇ ಪ್ರಾಣಿ ವಧೆ ಸಲ್ಲದು ಎಂದರೆ ಅದನ್ನೂ
ಒಪ್ಪಬೇಕಾ? ಇವೆಲ್ಲದರ ಮೇಲೆ ಮೊದಲೇ ಆಕಾಶ ನೋಡುತ್ತಿರುವ ಕೋಳಿ ಮತ್ತು ಮೇಕೆ ಮಾಂಸದ
ಬೆಲೆಗಳು ಗೋಮಾಂಸದ ನಿಷೇದದಿಂದ ಮತ್ತಷ್ಟು ಏರಿಕೆಯಾಗದೆಇದ್ದೀತೆ?ಮಾಂಸಾಹಾರಿಗಳ
ವಿರುದ್ಧ ನವ ಬ್ರಾಹ್ಮಣಿಕೆಯ ಗುತ್ತಿಗೆ ಪಡೆದವರಂತೆ ವರ್ತಿಸುತ್ತಿರುವ ಸಂಸ್ಕೃತಿ
ರಕ್ಷಕರು ನಡೆಸುತ್ತಿರುವ ಪಿತೂರಿಯಲ್ಲವೇ ಇದು?

One Response to “Ban On Cow slaughtering?”

  1. One Man said

    ಕರ್ನಾಟಕ ಸರಕಾರ ಗೋ ಹತ್ತೆ ನಿಷೇದ ಕಾನೂನಿನ ಜೊತೆಯಲ್ಲಿ ಯಾರು ನಕ್ಸಲ್ ವಾದ,ನಕ್ಸಲರನ್ನು ಪ್ರತೆಕ್ಷ, ಪರುಕ್ಷವಾಗಿ ಸಹಾಯ ಮಾಡುತ್ತಾರೋ ಅವರನ್ನು ಕಠಿಣ ಸಿಕ್ಷೆಗೆವಳಪಡಿ ಸುವ ಕಾಇದೆ ಜಾರಿಗೆ ತರಬೇಕಿತ್ತು. ಬನ್ನಿ ನಕ್ಸಲ್ವಾದ ನಮ್ಮ ಕರುನಾಡಿನಿಂದ ಹಾಗು ಭಾರತದಿಂದ ಹೋಗಲಾಡಿಸುವ.

ನಿಮ್ಮ ಟಿಪ್ಪಣಿ ಬರೆಯಿರಿ