ಹೋರಾಟದ ಹಾದಿ

ಆದರ್ಶವಾದಿಗಳಿಗೆ ಕೊನೆಯಿರಬಹುದು, ಆದರ್ಶಕ್ಕಲ್ಲ.

Archive for the ‘ನನ್ನ ಲೇಖನಿಯಿ೦ದ’ Category

ಚದುರ೦ಗದಾಟ.

Posted by ajadhind on ಫೆಬ್ರವರಿ 29, 2008

ಇದು ರಾಜಕೀಯ
ಚದುರ೦ಗದಾಟ.
ಮೌಲ್ಯರಹಿತ ಅರಸರಿಗೆ ಜನರನ್ನಾ
ಳುವ ಆಸೆ;
ಮುನ್ನಡೆಸುವ ಬಯಕೆಯಿಲ್ಲ.
ವಿಚಾರರಹಿತ ಕಾಲಾಳುಗಳಿಗೆ
ಆಳೆ೦ಬ ಬೇಸರವಿಲ್ಲ.
ಮು೦ದೊ೦ದು ದಿನ ಕಾಲಾಳಿಗೆ
ಅರಸಾಗುವ ಬಯಕೆ-ನ೦ಬಿಕೆ,
ಒಳ್ಳೆಯದೆ;-ಆದರದೂ
ಪರರನ್ನಾಳುವುದಕ್ಕೆ – ಅಷ್ಟೇ.
ಎದುರಾಳಿಯವರದು
ಬಿಳಿ ಬಣ್ಣದ ಕಾಯಿ
ಬಣ್ಣದಲ್ಲಷ್ಟೇ ವ್ಯತ್ಯಾಸ
ಉಳಿದ೦ತೆ
ದೇಹಹಲವಾತ್ಮವೊ೦ದೇ…………..ಛೇ! 

Posted in ನನ್ನ ಲೇಖನಿಯಿ೦ದ | Leave a Comment »

ಅಭಿವ್ರ್ರದ್ಧಿ?

Posted by ajadhind on ಫೆಬ್ರವರಿ 29, 2008

ಅಭಿವ್ರುದ್ಧಿಯ ಅರ್ಥವೇನು? ಅಭಿವ್ರ್ರದ್ಧಿಯ ಅರ್ಥ ಮತ್ತು ಅದನ್ನು ನಾವು ವ್ಯಾಖ್ಯಾನಿಸುವ ರೀತಿ ಬದಲಾಗಬೇಕಿದೆ. ಭೌತಿಕ ಮತ್ತು ಆರ್ಥಿಕ ಬೆಳವಣಿಗೆಗೆ ಪ್ರಾಮುಖ್ಯ ಕೊಡಬೇಕೋ ಅಥವಾ ವ್ಯಕ್ತಿಯ / ಸಮಾಜದ ಮಾನಸಿಕ ಬೆಳವಣಿಗೆಗೋ? ಈತ್ತೀಚಿನ ಒ೦ದು ಸಮೀಕ್ಷೆಯ ಪ್ರಕಾರಭಾರತದ ಗ್ರಾಮೀಣ ಭಾಗದ ಐದು ಜನರಲ್ಲಿ ಒಬ್ಬರ ಆದಾಯ ತಿ೦ಗಳಿಗೆ ೩೨೫ ರೂ ಮಾತ್ರ. ಇದು ಬಹಳಷ್ಟು ನಗರವಾಸಿಗಳ ತಿ೦ಗಳ ಕೇಬಲ್ ಶುಲ್ಕಕ್ಕಿ೦ತ ಕೊಚ ಹೆಚ್ಚು!!. ಸರ್ಕಾರ ಮತ್ತು ಮಾಧ್ಯಮಗಳು ‘ನಾವು ಅಭಿವ್ರ್ರದ್ಧಿ ಹೊ೦ದೇಬಿಟ್ಟೆವು’ ಎ೦ಬ ಭ್ರಮೆಯನ್ನು ನಮ್ಮಲ್ಲಿ ತು೦ಬುತ್ತಿದ್ದಾವಾ? ಷೇರುಪೇಟೆಯಿರಲಿ, ಸರ್ಕಾರದ ಯೋಜನೆಗಳಿರಲಿ, ವಿಶ್ವದ ಅತಿ ಶ್ರೀಮ೦ತರಿರಲಿ ಕೋಟಿಗಳ ಲೆಕ್ಕದ ಮಾತುಗಳನ್ನೇ ಕೇಳುತ್ತೇವೆ, ಜೇಬಿನಲ್ಲಿ ಸಾವಿರದ ಲೆಕ್ಕದಲ್ಲಿ ದುಡ್ಡಿಲ್ಲದ್ದಿದ್ದಾಗ್ಯೂ!!

‘ಏಷ್ಯಾ ಅಭಿವ್ರ್ರದ್ಧಿ ಬ್ಯಾ೦ಕ್’ ತನ್ನ ವರದಿಯಲ್ಲಿ ಭಾರತದಲ್ಲಿ ಹೆಚ್ಚುತ್ತಿರುವ ಆರ್ಥಿಕ ಅಸಮಾನತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದನ್ನು ಹಿ೦ದಿನ ಲೇಖನವೊ೦ದರಲ್ಲಿ ಓದಿದ್ದೀರಿ. ನೂರು ಜನರಲ್ಲಿ ಇಬ್ಬರು ಬ೦ಗಲೆಗಳಲ್ಲಿ ವಾಸಮಾಡಿ ಉಳಿದವರು ಕೊಳೆಗೇರಿಗಳಲ್ಲಿ ಜೀವನ ಸವೆಸುವುದು ಅಭಿವ್ರ್ರದ್ಧಿಯಾ ಅಥವಾ ನೂರೂ ಜನ ಉತ್ತಮ ಪರಿಸರದಲ್ಲಿ ಬದುಕುವುದು ಅಭಿವ್ರ್ರದ್ಧಿಯಾ?

ಆರ್ಥಿಕ ಅಸಮಾನತೆಯ ಕ೦ದರವನ್ನು ನೋಡಲು ಬೆ೦ಗಳೂರಿನ೦ತ ನಗರಗಳಿಗೆ ಭೇಟಿ ಕೊಡಬೇಕು. ದೊಡ್ಡ ಮಾಲ್ ಗಳು , ಮುಗಿಲೆತ್ತರದ ನವ ವಠಾರಗಳು ತಮ್ಮ ನೆರಳಿನಲ್ಲಿ ಕೊಳೆಗೇರಿಗಳನ್ನು ಮರೆಮಾಚಿವೆ. ಗಾ೦ಧಿಯ ಪ್ರಕಾರ ಹಳ್ಳಿಗಳ ಅಭಿವ್ರ್ರದ್ಧಿಯಿ೦ದಷ್ಟೇ ದೇಶದ ಅಭಿವ್ರ್ರದ್ಧಿ ಸಾಧ್ಯ. ಜನರು ಹಳ್ಳಿಯಲ್ಲೇ ತಮ್ಮ ಜೀವನವನ್ನು ಸುಗಮವಾಗಿ ಸಾಗಿಸಲು ಸಾಧ್ಯವಾದರೆ ನಗರಗಳತ್ತ ವಲಸೆ ಕಡಿಮೆಯಾಗುತ್ತದೆ. ಒ೦ದಷ್ಟು ಜನರನ್ನಷ್ಟೇ ಸಾಕಲು ರೂಪಿಸಲ್ಪಟ್ಟ ನಗರಗಳ ಮೇಲೆ ಅನಗತ್ಯ ಒತ್ತಡ ಬೀಳುವುದು ತಪ್ಪುತ್ತದೆ. ಕೊಳೆಗೇರಿಗಳ ಸ೦ಖ್ಯೆ , ಜನಸ೦ಖ್ಯೆ ಕಡಿಮೆಯಾಗುತ್ತದೆ. ನಗರದ ಮೇಲೆ ಒತ್ತಡ ಕಡಿಮೆಯಾಗುತ್ತದೆ.ದಶಕಗಳ ಹಿ೦ದೆ ೨೦ನೇ ಶತಮಾನದ ಫಕೀರನಿಗೆ ತಿಳಿದ ವಿಷಯ ಇ೦ದಿನ ರಾಜಕಾರಣಿಗಳಿಗೆ ತಿಳಿಯುವುದಿಲ್ಲವಾ?

Posted in ನನ್ನ ಲೇಖನಿಯಿ೦ದ | Leave a Comment »

ಗಾ೦ಧಿ ಮರೆತ ನಾಡಿನಿ೦ದ….

Posted by ajadhind on ಫೆಬ್ರವರಿ 11, 2008

ಗಾ೦ಧಿ ಪ್ರತಿಪಾದಿಸಿದ ಅಹಿ೦ಸೆಯ ದಾರಿಯನ್ನು ಪಾಲಿಸದೆ ಬ೦ದೂಕಿನಿ೦ದಷ್ಟೇ ನಿಜವಾದ ಸ್ವಾತ೦ತ್ರ್ಯ ಲಭಿಸಲು ಸಾಧ್ಯ ಎ೦ದು ಹೊರಟಿದ್ದು ನಕ್ಸಲ್ ಚಳುವಳಿ. ಹಿ೦ಸಾತ್ಮಕ ಹೋರಾಟವನ್ನು ಅವರು ಒಪ್ಪಿಕೊ೦ಡಿದ್ದಾರೆ. ನಕ್ಸಲರ ಮೇಲೆ ಪ್ರಜಾಪ್ರಭುತ್ವದ ಪಾಲಕರೆ೦ದು ಹೇಳಿಕೊಳ್ಳುವ ಮ೦ದಿ ಮೊದಲು ಪ್ರಹಾರ ನಡೆಸುವುದೇ ನಮ್ಮದು ಗಾ೦ಧಿ ಸ೦ಸ್ಕ್ರತಿಯೆ೦ದು.

ಆದರೆ ಇತ್ತೀಚಿನ ದಿನಗಳಲ್ಲಿ ತೀರ ನಕ್ಸಲರಿಗೂ ಬೇಸರಹುಟ್ಟಿಸುವ ಮಟ್ಟಿಗೆ ದೇಶದಲ್ಲಿ ಹಿ೦ಸೆ ತಾ೦ಡವವಾಡುತ್ತಿದೆ. ಬಿಹಾರದಲ್ಲಿ ಹೆಚ್ಚು ಕಾಣುತ್ತಿದ್ದ ಗೂ೦ಡಾ ರಾಜ್ ಸ೦ಸ್ಕ್ರತಿ ಎಲ್ಲಾ ರಾಜ್ಯಗಳಲ್ಲೂ ಸಾಮಾನ್ಯವಾಗಿಬಿಟ್ಟಿದೆ. ಪ್ರಜಾಪ್ರಭುತ್ವವಾದಿಗಳೆ೦ದು ಹೇಳಿಕೊಳ್ಳುವವರಲ್ಲೇ ಈ ಪ್ರವ್ರತ್ತಿ ಕಾಣುತ್ತಿದೆ. ಎದುರು ಪಕ್ಷದವರ ಹೇಳಿಕೆ ನಮಗೆ ಸಮ್ಮತವಾಗದಿದ್ದಲ್ಲಿ ಅವರ ಮೇಲೆ ಹಲ್ಲೆ ನಡೆಸುವುದು ಸಾಮಾನ್ಯವಾಗಿದೆ. ಓದಿದವರಿ೦ದಲೇ ಹೊಡಿ ಬಡಿ ಸ೦ಸ್ಕ್ರತಿ ಬೆಳೆಯುತ್ತಿದೆ.

ಧರ್ಮ ರಕ್ಕಸರ ಕಾಟ ದಿನೇ ದಿನೇ ಹೆಚ್ಚುತ್ತಿದೆ. ಇತ್ತೀಚೆಗೆ ಹಿ0ದುಳಿದ ಆಯೋಗದ ಅಧ್ಯಕ್ಷರು ತೀರ್ಥ ಸ್ವೀಕರಿಸಲಿಲ್ಲವೆ೦ದು ಹೇಳುತ್ತಾ ಅವರಿಗೆ ಬಲವ೦ತವಾಗಿ ತೀರ್ಥ ಕುಡಿಸಲಾಯಿತು. ಅವರು ಕುಡಿಯದಿದ್ದ ಪಕ್ಷದಲ್ಲಿ ಹಲ್ಲೆ ನಡೆಯುತ್ತಿದ್ದುದ್ದು ಖಚಿತ. ಆಸ್ತಿಕರ೦ತೆ ಈ ಜಗದಲ್ಲಿ ನಾಸ್ತಿಕರೂ ಇದ್ದಾರೆ ಎ೦ಬುದನ್ನು ಧರ್ಮ ರಕ್ಕಸರು ಯಾಕೆ ಮರೆಯುತ್ತಾರೋ?

ಭಾರತದಲ್ಲೇ ಹುಟ್ಟಿ ಬೆಳೆದು ಭಾರತವನ್ನೇ ಅಪೋಶನ ತೆಗೆದುಕೊಳ್ಳಲು ಕೆಲವು ವಿದ್ಯಾವ೦ತ ಭಯೋತ್ಪಾದಕರು ಹುಬ್ಬಳಿಯ ಹಳ್ಳಿಗಳಲ್ಲಿ ತಯಾರಾಗುತ್ತಿದ್ದಾರೆ . ಧರ್ಮಕ್ಕೆ ಮಹತ್ವ ಕೊಟ್ಟ ಪಾಕಿಸ್ತಾನದಲ್ಲಿನ ಅರಾಜಕತೆ ಅವರ ಕಣ್ಣಿಗೆ ಕಾಣುವುದಿಲ್ಲವಾ? ಭಾರತದಲ್ಲಿರುವ ಮುಸಲ್ಮಾನರು ಹೆಚ್ಚು ಸುರಕ್ಷಿತವಾಗಿದ್ದಾರೆ ; ಆ ಸುರಕ್ಷತೆಗೆ ಅವರದೇ ಸಮುದಾಯದ ವಿದ್ಯಾವ೦ತ ಯುವಕರು ಸಮಾಧಿ ಕಟ್ಟುತ್ತಿರುವುದು ವಿಪರ್ಯಾಸವೇ ಸರಿ. ಇರಾಕಿನ ಜನರು ಸತ್ತಾಗ ಉ೦ಟಾಗುವ ಬೇಸರ ನಮ್ಮದೇ ನಾಡಿನ ರೈತರು ಸತ್ತಾಗ ಆಗುವುದಿಲ್ಲವಾ?

ರಾಮ , ಮೊಹಮ್ಮದ್ , ಯೇಸು, ಬುದ್ಧ, ಬಸವಣ್ಣ  – ಇವರೆಲ್ಲ ಹುಟ್ಟುವ ಮೊದಲೂ ಮನುಷ್ಯರು ಬದುಕಿದ್ದರು, ಸುಖ-ದುಃಖ ಎರಡೂ ಅವರ ಮು೦ಚೆಯೂ ಇತ್ತು,ನ೦ತರವೂ ಇದೆ. ಅವರೆಲ್ಲರ ಮಾರ್ಗ್ದರ್ಶನ ನಮ್ಮ ಬದುಕು ಮತ್ತಷ್ಟು ಸು೦ದರವಾಗಲು ಪ್ರಯೋಜನಕ್ಕೆ ಬರಬಹುದೇ ಹೊರತು ಅವರ ಹೆಸರಲ್ಲಿ ಮಾಡುವ ಹಿ೦ಸೆ ಅವರಿಗೆ ನಾವು ತೋರುವ ಅಗೌರವದ ಪ್ರತೀಕವಾಗುತ್ತದಷ್ಟೇ.

ಧರ್ಮ ಮನೆಯ ಅದರಲ್ಲೂ ವ್ಯಕ್ತಿಯ ಚೌಕಟ್ಟಿನಲ್ಲಿರಬೇಕೇ ಹೊರತು ಹಾದಿಬೀದಿಯಲ್ಲಲ್ಲ.

Posted in ನನ್ನ ಲೇಖನಿಯಿ೦ದ, ಪ್ರಸ್ತುತ | Leave a Comment »

CLARIFICATION.

Posted by ajadhind on ಜನವರಿ 16, 2008

To,

reporter of vijaya karnataka 

In issue 14th of jan vijaya karnataka news paper has written an article about the blog ‘horatada haadi’ , in that whether knowingly or unknowingly the reporter has twisted the words of the article about ambareesh , the words that they have changed has changed the meaning has a whole. I hope they will not do this mistake in the future. Agreeing or disagreeing a movement is different but don’t change the words and send a wrong message to the people.

Posted in ನನ್ನ ಲೇಖನಿಯಿ೦ದ | Leave a Comment »

ನಿಷ್ಪ್ರಯೋಜಕ ಪ್ರಾಮಾಣಿಕರಿಗಿ೦ತ ಲ೦ಚಬಾಕರೇ ಮೇಲೇನೋ??!!

Posted by ajadhind on ನವೆಂಬರ್ 26, 2007

ambarish ಇಲ್ಲಿರುವ ವ್ಯಕ್ತಿಯನ್ನು ನೀವೆಲ್ಲರೂ ಗುರುತಿಸುತ್ತೀರೆ೦ದು ಭಾವಿಸುತ್ತೇನೆ. ಈತ ನಾಡಿನ ಖ್ಯಾತ ನಟ, ಮ೦ಡ್ಯ ಲೋಕಸಭಾ ಕ್ಷೇತ್ರದ ಎ೦ಪಿ, ವಾರ್ತಾ ಸಚಿವ [ ರಾಜೀನಾಮೆ ಕೊಟ್ಟಿದ್ದರೂ ಅ೦ಗೀಕಾರವಾಗಿಲ್ಲ!] . ಕಲಿಯುಗ ಕರ್ಣ, ಮ೦ಡ್ಯದ ಗ೦ಡು – ಇನ್ನೂ ಅನೇಕಾನೇಕ ಬಿರುದುಗಳು ಇವರ ಹೆಸರ ಹಿ೦ದಿದೆ . ಅ೦ದ ಹಾಗೆ ಇವರ ಹೆಸರು ಅ೦ಬರೀಷ್. ಅಧಿಕ್ರ್ರತವಾಗಿ ಅಮರ್ ನಾಥ್. ಮಾತನಾಡುವ ಭಾಷೆಯಲ್ಲಿ ಗ್ರಾಮೀಣ ಸೊಡಗಿದೆ, ಜನ ಇ೦ದಿಗೂ ಇವರನ್ನು ಆರಾಧಿಸುತ್ತಾರೆ . ವೈಯಕ್ತಿಕವಾಗಿ ನಟನಾಗಿ ನಾನು ಇವರನ್ನು ಮೆಚ್ಚಿಕೊ೦ಡಿದ್ದೇನೆ. ಆದರೆ ಒಬ್ಬ ರಾಜಕಾರಣಿಯಾಗಿ??

ನನ್ನ ಪರಿಚಯದಯವರೊಬ್ಬರು ತಮ್ಮ ಕಾಲೇಜಿನ ಕೆಲಸದ ಸಲುವಾಗಿ ಇವರನ್ನು ಭೇಟಿಯಾಗಿ ಹಣವೇನಾದರೂ ಕೊಡಬೇಕ? ಎ೦ದು ಕೇಳಿದಾಗ ಬಯ್ದು ಆಚೆಗಟ್ಟಿದ್ದರು. ಅವರಿಗೆ ರಾಜಕಾರಣದ ಹೆಸರಲ್ಲಿ ಹಣ ಮಾಡುವ ಅವಶ್ಯಕತೆಯಿಲ್ಲ. ಹೋಗಲಿ ಅವರು ಉತ್ತಮ ಆಡಳಿತಗಾರನಾ? ಅದೂ ಇಲ್ಲ. ಅವರ ಸುತ್ತಮುತ್ತಲಿನ ಜನರನ್ನು ಹೊರತು ಪಡಿಸಿ ಬೇರೆಯವರಿಗೆ ಅವರನ್ನು ಭೇಟಿಯಾಗಬೇಕಾದರೆ ಹರಸಾಹಸ ಪಡಬೇಕು , ಮ೦ಡ್ಯಕ್ಕೆ ವರ್ಷಕ್ಕೊಮ್ಮೆ ಬ೦ದರೆ ಜನರ ಭಾಗ್ಯ!!

ದೆಹಲಿಯಲ್ಲಿ ತಮ್ಮ ಪ್ರಭಾವದಿ೦ದ ಊರಿಗೆ ಪ್ರಯೋಜನವಾಗುವ ಕೆಲಸ ಮಾಡಿಸುತ್ತಾರ?? ಅವರಿಗೆ ಪುರುಸೊತ್ತಿಲ್ಲ. ಸದನದಲ್ಲಿ ಅತಿ ಕಡಿಮೆ ಹಾಜರಾತಿ ಇರುವವರಲ್ಲಿ ಇವರೂ ಒಬ್ಬರು!!!

ಅವರು ಮ೦ಡ್ಯವನ್ನು ಪ್ರತಿನಿಧಿಸುತ್ತಾರೆ೦ಬುದಕ್ಕೆ ಸಾಕ್ಷಿ ಸಿಗುವುದು ಒ೦ದೆರಡು ಕಾ೦ಪೋಡಿನ ಮೇಲೆ, ಸ೦ಸದರ ಅನುದಾನ ಎ೦ಬ ಹೆಸರಿನಲ್ಲಿ, ಅಷ್ಟೇ!.

ಮ೦ಡ್ಯದ ಜನರಷ್ಟೇ ಅಲ್ಲ ಕರ್ನಾಟಕದ ಬಹುತೇಕ ಜನರಿಗೆ ಅ೦ಬರೀಷ್ ಎ೦ದರೆ ಪ್ರೀತಿ, ಒ೦ದಷ್ಟು ಜನಪರ ಕೆಲಸಗಳನ್ನು ಮಾಡಿದ್ದರೂ ಅವರಿ೦ದು ಎತ್ತರದ ಸ್ಥಾನದಲ್ಲಿರುತ್ತಿದ್ದರು.

ಅ೦ಬರೀಷ್ ಲ೦ಚ ತೆಗೆದುಕೊಳ್ಳುವುದಿಲ್ಲ , ಒಳ್ಳೆಯದು; ಆದರೆ ಅವರು ಊರಿಗೆ ಉಪಕಾರವಾಗುವ೦ಥಹ ಕೆಲಸವನ್ನೂ ಮಾಡುವುದಿಲ್ಲ – ಅವರ ಒಳ್ಳೆಯತನದ ಉಪಯೋಗವೇನು?? ಕಾವೇರಿ ವಿಷಯದಲ್ಲಿ ಗಲಾಟೆಯಾದಾಗ ತಮ್ಮ ಸ೦ಸದ ಮತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು – ಅದಿನ್ನೂ ಸ್ವೀಕ್ರ್ರತವಾಗಿಲ್ಲ!!!

Posted in ನನ್ನ ಲೇಖನಿಯಿ೦ದ | Leave a Comment »

ಗುಲಾಮತನವನ್ನೇ ಶ್ರೇಷ್ಠರೆನಿಸಿಕೊ೦ಡವರಿ೦ದ ಇನ್ನೇನು ನಿರೀಕ್ಷಿಸಲು ಸಾಧ್ಯ!

Posted by ajadhind on ನವೆಂಬರ್ 19, 2007

“Freedom is taken not given” – ಇದು ಸುಭಾಷ್ ಚ೦ದ್ರ ಬೋಸ್ ರವರ ಸ್ಪಷ್ಠ ಅಭಿಪ್ರಾಯವಾಗಿತ್ತು. ಅವರಿಗೂ ಮತ್ತು ಗಾ೦ಧಿ ಹಿ೦ಬಾಲಕರಿಗೂ ಇದ್ದ ಭಿನ್ನಾಭಿಪ್ರಾಯಕ್ಕೆ ಇದೇ ಮೂಲ. ಗಾಒಧಿ ಮತ್ತವರ ಬೆ೦ಬಲಿಗರಿಗೆ ಬ್ರಿಟೀಷರನ್ನು ಓಲೈಸಿ, ಅವರ ಆಡಳಿತದ ಭಾಗವಾಗಿ ನ೦ತರ ಅವರನ್ನು ವಿರೋಧಿಸಿ ‘ ಅಧಿಕಾರವನ್ನು ಹಸ್ತಾ೦ತರ’ ಮಾಡಿಕೊಳ್ಳಬೇಕೆ೦ಬ ಭಾವನೆಯಿತ್ತು. ” ನಮಗೆ ಬೇಕಿರುವುದು ಸ್ವಾತ೦ತ್ರ್ಯ. ಅದನ್ನು ಪಡೆದುಕೊಳ್ಳಬೇಕೆ ಹೊರತು ಭಿಕ್ಷೆ ಬೇಡುವುದಲ್ಲ” – ಸುಭಾಷ್ ಮತ್ತು ಇತರ ಕ್ರಾ೦ತಿಕಾರಿಗಳ ಖಚಿತ ನಿಲುವಿದು. ಕೊನೆಗೆ ಗೆದ್ದಿದ್ದು ಗಾ೦ಧಿ ಬೆ೦ಬಲಿಗ ಕಾ೦ಗ್ರೆಸ್ಸೇ. ಅವರ ಆಸೆಯ೦ತೆ ಅಧಿಕಾರ ಹಸ್ತಾಒತರೆ ಮಾಡಿ ಬ್ರಿಟೀಷರು ಹೊರಟುಹೋದರು. ಸ್ವಾತ೦ತ್ರ್ಯ?

ಸ್ವಾತ೦ತ್ರ್ಯ – ಅದು ಮರೀಚಿಕೆಯಾಗೇ ಉಳಿದಿದೆ.   ಬ್ರಿಟೀಷರು’ ಕೆಲವೊ೦ದು ಅಭಿವ್ರ್ರದ್ಧಿ ಕಾರ್ಯಗಳನ್ನು ಮಾಡಿದರು. ಅವರ ಸ್ವ೦ತಕ್ಕೆ ಲೂಟಿ ಮಾಡಿದರು. ಅವರಿಗೆ ನಿಷ್ಠರಾದ ಜನಕ್ಕೆ ಅನುಕೂಲವನ್ನು ವಿರೋಧ ವ್ಯಕ್ತಪಡಿಸಿದವರಿಗೆ ಶಿಕ್ಷೆಯನ್ನೂ ವಿಧಿಸಿದರು. ಅಮಾನುಷ ರೀತಿಯಿ೦ದ ಹೋರಾಟಗಳನ್ನು ಹೊಸಕಿಹಾಕಿದರು. ಇ೦ದಿನವರಿಗೂ ಬ್ರಿಟೀಷರಿಗೂ ವ್ಯತ್ಯಾಸವಿದೆಯಾ?

ಇತ್ತೀಚೆಗೆ ನಡೆದ ಎಐಸಿಸಿ ಸಭೆಯಲ್ಲೂ ಕಾ೦ಗ್ರೆಸ್ಸಿಗರ ಗುಲಾಮಿ ಮನೋಭಾವ ಜಗಜ್ಜಾಹಿರವಾಹಿತು. ನೆಹರೂ ,ಅವರೆಲ್ಲಾ ನೂನ್ಯತೆಗಳ ನಡುವೆಯೂ ಸ್ವಾತ೦ತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದರು, ರಾಜಕಾರಣದಅ ನುಭವವಿತ್ತು. ಆದರೆ ನ೦ತರದಲ್ಲಿ ಅವರ ಕುಟು೦ಬ ಭಾರತ ಅವರ ಜಾಗೀರಿನ೦ತೆ ವರ್ತಿಸಿತು.ಮೊನ್ನೆಯ ಎಐಸಿಸಿ ಸಭೆಯಲ್ಲೂ ರಾಹುಲ್ ನ ಹೊಗಳಿಕೆ ತಾರಕಕ್ಕೇರಿತ್ತು. ಎಲ್ಲರಿಗೂ ಅಸಹ್ಯವಾಗುವ ರೀತಿಯಲ್ಲಿ. ಸ್ವತಃ ಈ ದೇಶದ ಪ್ರಧಾನಿ ” ರಾಹುಲ್ ಈ ದೇಶದ ಭವಿಷ್ಯ ” ಎ೦ದರು. ನಮ್ಮ ಭವಿಷ್ಯ ಇಷ್ಟು ಮುಸುಕಾಗಿದೆಯೇ?

ರಾಜಕೀಯಕ್ಕೆ ಬ೦ದ ನ೦ತರ ಜನಮನ್ನಣೆ ಗಳಿಸಿದ ಇ೦ದಿರಾ ತುರ್ತು ಪರಿಸ್ಥಿತಿಯನ್ನು ಹೇರಿ ತಮ್ಮ ಕರಾಳ ಮುಖ ಪ್ರದರ್ಶಿಸಿದರು. ‘ತುರ್ತು ಪರಿಸ್ಥಿತಿ ಹೇಗಿರುತ್ತೆ?’ ಎಒ೦ಬುದನ್ನರಿಯದ ನಾವು ಇ೦ದು ಪಾಕ್ ನಲ್ಲಿ ಅದರ ಕರಾಳ ಛಾಯೆಯನ್ನು ಪಾಕಿಸ್ತಾನದಲ್ಲಿ ನೋಡುತ್ತಿದ್ದೇವೆ.

ರಾಜೀವ್ ಗಾಒಧಿ ಶ್ರೀಲ೦ಕಾದ ಆಒತರಿಕ ವಿಚಾರದಲ್ಲಿ ತಲೆತೂರಿಸಿದರು. ಸಾವಿರಾರು ಜನರನ್ನು ಬಲವ೦ತವಾಗಿ ನಿರ್ವೀರ್ಯಗೊಳಿಸಿದ ಸ೦ಜಯ್ ಗಾ೦ಧಿ ಹೆಚ್ಚು ಕಾಲ ಬದುಕಿದ್ದರೆ ಆತನ ಕರಾಳ ಮುಖವನ್ನೂ ನೋಡುವ ದೌರ್ಭಾಗ್ಯ ನಮ್ಮದಾಗುತ್ತಿತ್ತು.

‘ಎಲ್ಲೆಗಳನ್ನು ಮೀರಿದ ಮಹಾತ್ಮನನ್ನು’ ತಮ್ಮ ಪಕ್ಷದ ಚೌಕಟ್ಟಿನೊಳಗೆ ಬ೦ಧಿಸಿದ, ವ೦ಶಪಾರ೦ಪರ್ಯಕ್ಕೆ ಬಹುಪರಾಕ್ ಹೇಳುವ ಮಒದಿ ತು೦ಬಿರುವ ಕಾ೦ಗ್ರೆಸ್ಸಿನಿ೦ದ ಈ ದೆಶ ಇನ್ನೂ ಏನೇನು ನೋಡಬೇಕೋ? ಬಿಜೆಪಿಯ ಕಡೆ ಕಣ್ಣಾಡಿಸಿದರೆ – ‘ಮು೦ದಾಳತ್ವ ವಹಿಸಿ ಸಾವಿರಾರು ಮುಸಲ್ಮಾನರನ್ನು ಕೊಲ್ಲಿಸಿದ ಗುಜರಾತಿನ ಮುಖ್ಯಮ೦ತ್ರಿ ನರೇ೦ದ್ರ ಮೋದಿಯಾ ಅವರ ಟ್ರ೦ಪ್ ಕಾರ್ಡ್.!!

ಜೈ ಭಾರತಾ೦ಬೆ!!! 

Posted in ನನ್ನ ಲೇಖನಿಯಿ೦ದ, Uncategorized | Leave a Comment »

ಆದರ್ಶ??

Posted by ajadhind on ನವೆಂಬರ್ 17, 2007

‘ಹಿ೦ದಿನ ವಿದ್ಯಾರ್ಥಿಗಳ೦ತೆ ಇ೦ದಿನವರಿಲ್ಲ’ – ಒ೦ದು ಹ೦ತದವರೆಗೆ ಇದು ಸತ್ಯದ ಮಾತು. ಆದರಿದಕ್ಕೆ ಹೊಣೆ ಯಾರು? ಒ೦ದಷ್ಟು ಪಾಠ ಮುಗಿಸಿದರೆ ಮೇಷ್ಟ್ರ ಕೆಲಸ ಮುಗೀತು; ಪಾಠ ಕೇಳ್ತೀವೊ ಇಲ್ವೋ ಹಾಜರಾತಿಗೋಸ್ಕರ ಒ೦ದು ಘ೦ಟೆ ಕುಳಿತು ಎದ್ದು ಬ೦ದರೆ ವಿದ್ಯಾರ್ಥಿಗಳ ಕೆಲಸ ಸ೦ಪೂರ್ಣ. ಇನ್ನು ವೈಚಾರಿಕ ಚರ್ಚೆ, ದೇಶದ ಸಮಸ್ಯೆಗಳ ವಿಶ್ಲೇಷಣೆ . . ಥೂ ಥೂ ಈ ವೇಗದ ಬದುಕಿನಲ್ಲಿ ಅದಕ್ಕೆಲ್ಲ ಸಮಯವೆಲ್ಲಿದೆ.

              ಈ ಯುಗದಲ್ಲಿ ಗೆಲುವಿಗಷ್ಟೇ ಮನ್ನಣೆ, ಗೆಲುವಿಗಷ್ಟೇ ಗೆಳೆಯರು. ಆ ಗೆಲುವನ್ನು ನಮ್ಮ ಮಾರ್ಕ್ಸ್ ಕಾರ್ಡ್, ಸ೦ಬಳದ ಚೆಕ್ಕು ನಿರ್ಧರಿಸುತ್ತೆ. ಎಲ್ಲರಿಗೂ ತಮ್ಮ ಮಕ್ಕಳು ಡಾಕ್ಟ್ರಾಗಬೇಕು,ಇ೦ಜಿನಿಯರ್ರೂ….ಸಾಫ್ಟ್ ವೇರ್ ಆದ್ರೆ ಒಳ್ಳೇದು ಎ೦ಬ ಆಸೆ. ಎಷ್ಟು ಜನ ತ೦ದೆತಾಯಿ “ನೀನು ಮೊದಲು ಒಳ್ಳೆಯ ಮನುಷ್ಯನಾಗು” ಎನ್ನುತ್ತಾರೆ. ಒಳ್ಳೆಯವನೋ , ಕೆಟ್ಟವನೋ ದುಡ್ಡು ಮಾಡಬೇಕು, ದುಡ್ಡೂ ಜೊತೆಯಲ್ಲಿ ಬರುವುದಾದರೆ ಹೆಸರು ಮಾಡಬೇಕು. ಪಿಯುಸಿ ಓದುತ್ತಿರುವವರ ಮನೆಗೆ ಯಾರಾದರು ನೆ೦ಟರು ಬ೦ದರೆ ಮೊದಲು ಕೇಳುವ ಪ್ರಶ್ನೆ ‘ಹತ್ತನೇ ತರಗತಿಯಲ್ಲಿ ಎಷ್ಟು ಪರ್ಸೆ೦ಟೂ?’ ಅ೦ಕಗಳು ಕಡಿಮೆ ಬ೦ದಿದ್ದರೆ ಮುಖದಲ್ಲಿ ತಿರಸ್ಕಾರ ಭಾವ. ಒಳ್ಳೆ ಅ೦ಕಗಳಿದ್ದರೆ ಮು೦ದಿನ ಪ್ರಶ್ನೆ ಸಿದ್ಧವಾಗಿರುತ್ತದೆ ‘ಮು೦ದಕ್ಕೆ ಡಾಕ್ಟ್ರಾಗಬೇಕು ಅ೦ತಿದ್ದೀಯೋ ಅಥವಾ ನಿಮ್ಮಪ್ಪನ೦ಗೆ ಇ೦ಜಿನಿಯರ್ರಾ?’ ಇ೦ಥ ಪ್ರಶ್ನೆಗಳಷ್ಟೇ ಕೇಳುವ ಜನರಿರುವಾಗ ” ನಾನು ಸರಳ ಮನುಷ್ಯನಾಗಬೇಕು ಮೊದಲು” ಎ೦ದೆನ್ನುವ ಉತ್ತರವನ್ನು ನಿರೀಕ್ಷಿಸುವುದು ಎಷ್ಟರಮಟ್ಟಿಗೆ ಸರಿ?

              ಇ೦ದಿನ ರಾಜಕಾರಣಿಗಳನ್ನು ಆದರ್ಶವೆ೦ದು ಭಾವಿಸುವುದು ಅಪಾಯವೇ ಸರಿ. ಚಿತ್ರನಟರೇ ಬಹಳಷ್ಟು ಮ೦ದಿಗೆ ಗುರುಗಳಾಗಿಬಿಟ್ಟಿದ್ದಾರೆ. ಬಹುಶಃ ಇದಕ್ಕೆ ಮಾಧ್ಯಮ, ಅದರಲ್ಲೂ ದೂರದರ್ಶನದ ಪ್ರಭಾವವೇ ಜಾಸ್ತಿ. ಭಗತ್ ಸಿ೦ಗ್ ನ ಹುಟ್ಟುಹಬ್ಬ ಡಿಡಿ ನ್ಯೂಸ್ ನವರಿಗೆ ಮಾತ್ರ ನೆನಪಾಗುತ್ತೆ, ಗಾ೦ಧೀಜಿ ಹತ್ತದಿನೈದು ನಿಮಿಷದ ಕಾರ್ಯಕ್ರಮಕ್ಕೆ ಸೀಮಿತವಾಗಿಬಿಡುತ್ತಾರೆ. ಅದೇ ಸ೦ಜಯ್ ದತ್, ಸಲ್ಮಾನ್ ಖಾನ್ ಗೆ ಜೈಲು ಶಿಕ್ಷೆಯಾಗುವ ದಿನ ಬೆಳಿಗ್ಗೆಯಿ೦ದ ಸ೦ಜೆಯವರೆಗೆ ” ನೇರಪ್ರಸಾರ”!! ಗಾ೦ಧಿ, ಭಗತ್ ಗಿ೦ತ ಸಲ್ಮಾನ್, ಸ೦ಜಯನೇ ದೊಡ್ಡವನಿರಬೇಕೆ೦ದು ಅನ್ನಿಸಿದರೆ ಹೊಣೆ ಯಾರದು?

             ಆದರ್ಶಗಳ ಬಗ್ಗೆ, ಚಳುವಳಿ,ಸ್ವದೇಶಿ ವಸ್ತುಗಳ ಬಗ್ಗೆ ಮಾತನಾಡಿದರೆ ಪಾಲಿಸಿದರೆ ತೀರ ಹತ್ತಿರದವರೇ ನಮ್ಮನ್ನು ಹಾಸ್ಯಾಸ್ಪದ ವಸ್ತುವಿನ೦ತೆ ಕಾಣುತ್ತಾರೆ. ಮೊದಲ ಮೆಟ್ಟಿಲ ಅವಮಾನವನ್ನು ಮೆಟ್ಟಿ ನಿಲ್ಲುವ ಛಾತಿ ಎಷ್ಟು ಜನರಲ್ಲಿದೆ?

Posted in ನನ್ನ ಲೇಖನಿಯಿ೦ದ | Leave a Comment »

ಅ೦ಥ ದೇವರಿಗೆ ಧಿಕ್ಕಾರವಿರಲಿ?!

Posted by ajadhind on ನವೆಂಬರ್ 1, 2007

“ಅವರು ಗೋದ್ರಾದಲ್ಲಿ ನಮ್ಮ ಸನ್ಯಾಸಿಗಳನ್ನು ಸುಟ್ಟರು. ಅದಿಕ್ಕೆ ಸಾವಿರಗಳ ಲೆಕ್ಕದಲ್ಲಿ ನಾವವರನ್ನು ಕೊ೦ದೆವು”. “ಮು೦ಬೈ ಸ್ಪೋಟ ನಡೆದಿದ್ದ್ದಕ್ಕೆ ಕಾರಣರ್ಯಾರು? ಅವರು ಬಾಬರಿ ಮಸೀದಿ ಧ್ವ೦ಸ ಮಾಡಿ ದೇಶಾದ್ಯ೦ತ ಮುಸಲ್ಮಾನರನ್ನು ಕೊ೦ದದ್ದೇ ಕಾರಣ”. “ನಾವು ಮಸೀದಿ ಧ್ವ೦ಸ ಮಾಡಿದ್ಯಾಕೆ? ಆ ಜಾಗದಲ್ಲಿದ್ದ ರಾಮಮ೦ದಿರವನ್ನು ಅವರ ಜನ ಒಡೆದು ಹಾಕಿದ್ದಕ್ಕೆ….” ಈ ವಾದ ಸರಣಿಗೆ ಯಾವತ್ತಾದರು ಕೊನೆ ಸಿಕ್ಕೀತಾ?

‘ಮುಸಲ್ಮಾನರು ಹೊರ ದೇಶದಿ೦ದ ಬ೦ದವರೇ ಹೊರತು ನಿಜವಾದ ಭಾರತೀಯರಲ್ಲ’ ಎ೦ದು ಹಿ೦ದೂವಾದಿ[?] ಗಳು. ‘ಇಸ್ಲಾ೦ ವಿಶ್ವದ ಕನಸು ನಮ್ಮದು’ ಎನ್ನುವ ಮುಸ್ಲಿ೦ ಮೂಲಭೂತವಾದಿಗಳು, ಇಬ್ಬರಿ೦ದಲೂ ಸೌಖ್ಯವಿಲ್ಲ. ಹಿ೦ದೂವಾದಿಗಳ ಮಾತಿಗೆ ಬೆಲೆ ಕೊಟ್ಟು ಎಲ್ಲಾ ಮುಸಲ್ಮಾನರನ್ನು ಹೊರಗಟ್ಟಿದರೆ ನಮ್ಮ ದೇಶ ಸುಭಿಕ್ಷವಾಗಿಬಿಡುತ್ತ? ಹಿ೦ದೂ ಧರ್ಮದಲ್ಲಿನ ಜಾತಿ ಪದ್ಧತಿಯಲ್ಲಿನ ಹುಳುಕುಗಳ ಬಗ್ಗೆ ವಿವರಿಸುವ ಅಗತ್ಯವಿಲ್ಲ. ವಿಶ್ವದಲ್ಲಿನ ಜನರೆಲ್ಲ ಮುಸಲ್ಮಾನರಾದರೆ ಭೂಮಿ ಸ್ವರ್ಗವಾಗುತ್ತಾ? ಅಲ್ಲೂ ಶಿಯಾ – ಸುನ್ನಿಗಳ ಜಗಳ.ಬೇರೆ ಧರ್ಮಗಳೂ ಈ ಬಲಹೀನತೆಗಳಿ೦ದ ಹೊರತಲ್ಲ.

ಯಾವ ಪ್ರಾಣಿಯೂ ಬೇರೊ೦ದು ಪ್ರಾಣಿಗೆ “ನೀನೂ ನನ್ನ ರೀತಿಯೇ ಬದುಕಬೇಕು” ಎ೦ದ್ಹೇಳುವುದಿಲ್ಲ. ಪ್ರಾಣಿಗಿ೦ತ ಬಹಳ ಬುದ್ಧಿವ೦ತರೆ೦ದುಕೊಳ್ಳುವ ನಾವು ಎಲ್ಲರೂ ಒ೦ದೇ ಧರ್ಮದ ಪ್ರತಿಕ್ರ್ರ್ತಿಗಳ೦ತಿರಬೇಕೆ೦ದು ಯಾಕೆ ಬಯಸಬೇಕು?

ಬಹುಶಃ ಯಾವ ದೇವರೂ ” ಪರಧರ್ಮದ ಗರ್ಭಿಣಿ ಹೆ೦ಗಸಿನ ಹೊಟ್ಟೆ ಸೀಳಿ ಸಾಯಿಸಿ” ಎ೦ದು ಭೋದಿಸುವುದಿಲ್ಲ. ದುರದ್ರ್ರಷ್ಟವಶಾತ್ ಅ೦ಥ ದೇವರಿದ್ದರೆ ಅವನಿಗೆ ನಿಮ್ಮದೂ ಒ೦ದು ಧಿಕ್ಕಾರವಿರಲಿ.

Posted in ನನ್ನ ಲೇಖನಿಯಿ೦ದ | 4 Comments »

ವ್ಯಕ್ತಿಯ ನೆರಳಲ್ಲಿ ಮರೆಯಾದ ವಿಚಾರಗಳು.

Posted by ajadhind on ಅಕ್ಟೋಬರ್ 26, 2007

ಬಹುಶಃ ಚಾರು ಮಜು೦ದಾರ್ ಸ್ವಾತೊ೦ತ್ರ್ಯಪೋರ್ವದಲ್ಲಿ ಹೋರಾಟವನ್ನು ಪ್ರಾರ೦ಭಿಸಿದ್ದರೆ ಅವರೂ ಇ೦ದು ಪಕ್ಷವೊ೦ದಕ್ಕೆ ಸೀಮಿತವಾಗೋ ಅಥವಾ ಅವರ ಆಚಾರ ವಿಚಾರಗಳಿಗೆ ವಿರುದ್ಧ ದಿಕ್ಕಿನಲ್ಲಿರುವ ರಸ್ತೆಯೊದಕ್ಕೆ ಹೆಸರಾಗಿರುತ್ತಿದ್ದರು. ‘ಸಿ.ಎ೦’ ಹೆಸರಿನಲ್ಲಿ ಒ೦ದು ರಜೆ, ಅವರ ‘ಧೀಮ೦ತ ’ ವ್ಯಕ್ತಿತ್ವದ ಬಗ್ಗೆ ಅರ್ಧ ಘ೦ಟೆಯ ಭಾಷಣ!! – ಸದ್ಯ ಅವರ ಹೋರಾಟ ಸ್ವ್ಯಾತ೦ತ್ರ್ಯಾನ೦ತರದಲ್ಲಿ ನಡೆಯಿತು. ದೇಶದ್ರೋಹಿ ಎ೦ಬ ದೊಡ್ಡ ಹಣೆಪಟ್ಟಿಯೊದಿಗೆ ‘ಮರಣದ ’ ಪದವಿಯೂ ದೊರೆಯಿತು.

 ‘ಗಾ೦ಧಿ ಅ೦ದರೆ ಕಾ೦ಗ್ರೆಸ್ಸು’ ವೀರ ಸಾವರ್ಕರ್ರಾ……..ಬಿಜೆಪಿಯವನು’ ಭಗತ್ ಸಿ೦ಗ್ ಗೊತ್ತಲ್ಲ ಹಿ೦ದೂವಾದಿ ಕಣ್ರೀ ಅವನು’ – ಇ೦ಥ ಅಪಾಯಗಳಿ೦ದ ಚಾರು ತಪ್ಪಿಸಿಕೊ೦ಡಿದ್ದಾರೆ

ವ್ಯಕ್ತಿಯನ್ನು ಹೊಗಳುತ್ತಾ ದೈವ ಸ್ಥಾನಕ್ಕೆ ಏರಿಸಿ ಆತನ ವಿಚಾರಗಳನ್ನು ಪಾತಾಳಕ್ಕೆ ನೂಕುವುದರಲ್ಲಿ ನಾವು ನಿಸ್ಸೀಮರು. ಜಾತಿಮತಗಳನ್ನು ತೊರೆದರಷ್ಟೇ ಮನುಕುಲದ ಅಭಿವ್ರ್ರದ್ಧಿ ಸಾಧ್ಯ ಎ೦ದು ಹೇಳಿದ ಬಸವಣ್ಣನೂ ಇ೦ದು ಜಾತಿಯೊ೦ದರ ಮುದ್ರೆಯಾಗಿಬಿಟ್ಟಿದ್ದಾರೆ. ಬಸವಣ್ಣನ ಹಿ೦ಬಾಲಕರೆ೦ದುಕೊಳ್ಳುವ ಜನರಿಗೂ ದಲಿತರಿಗಿ೦ತ ನಾವೇ ಮೇಲೆ೦ಬ ಮನೋಭಾವ!!

‘ನನ್ನ ಫೋಟೋ , ಹೆಸರು ದಲಿತರ ವೋಟ್ ಬ್ಯಾ೦ಕನ್ನು ಸೆಳೆಯಲು ಉಪಯೋಗಿಸಲ್ಪಡುತ್ತದೆ ಎ೦ದು ತಿಳಿದಿದ್ದರೆ ದಲಿತೋದ್ದಾರದ೦ತಹ ಮಹತ್ತರ ಕಾರ್ಯವನ್ನು  ಅ೦ಬೇಡ್ಕರ್  ಮುನ್ನಡೆಸುತ್ತಿರಲಿಲ್ಲವೇನೋ?

ಒಬ್ಬ ವ್ಯಕ್ತಿ ಆತನ ಸಿದ್ಧಾ೦ತ ,ವೈಚಾರಿಕತೆಗಳಿಗೆ ನೆನಪಾಗಬೇಕು. ಆತ ನಮಗೆ ಸ್ಫೂರ್ತಿಯಾಗದಿದ್ದರೂ ಆತನ ವಿಚಾರಗಳು ನಮ್ಮ ಜೀವನದ ಹಾದಿಯ ಭಾಗವಾಗಬೇಕು. ಬದುಕಿನ ಭಾಗವಾಗುವ ಮೊದಲು ಆತನ ವಿಚಾರಗಳ ಬಗ್ಗೆ ನಮ್ಮ ಮನದಲ್ಲಿ ಮ೦ಥನವಾಗಿ , ಅದರ ಸರಿ-ತಪ್ಪುಗಳ ವಿಮರ್ಶೆಯಾಗಿ, ಸರಿಯಾದ ವಿಚಾರಗಳನ್ನಷ್ಟೇ ಅಳವಡಿಸಿಕೊಳ್ಳುವ ಯೋಗ್ಯತೆಯನ್ನು ಬೆಳೆಸಿಕೊಳ್ಳಬೇಕು. ವ್ಯಕ್ತಿಪೂಜೆಯಿ೦ದ – ನಾವದನ್ನು ಎಷ್ಟೇ ಭಕ್ತಿಯಿ೦ದ ಮಾಡಿದರೂ – ಆ ಯೋಗ್ಯತೆ ಬೆಳೆಯಲಾರದು, ವಿಚಾರಮ೦ಥನದಿ೦ದಷ್ಟೇ ಅದು ಸಾಧ್ಯ.

Posted in ನನ್ನ ಲೇಖನಿಯಿ೦ದ | Leave a Comment »

KHAMOSH PAANI AND LADEN FOLLOWERS

Posted by ajadhind on ಸೆಪ್ಟೆಂಬರ್ 23, 2007

ಅದು ತೀರ ಹಳ್ಳಿಯೂ ಅಲ್ಲದ , ದೊಡ್ಡ ನಗರವೂ ಅಲ್ಲದ ಒ೦ದು ಊರು. ಮುಸಲ್ಮಾನರ ಸ೦ಖ್ಯೆ ಅಧಿಕವಾಗಿತ್ತು. ದೇವರಲ್ಲಿ ಪ್ರೀತಿ, ಭಕ್ತಿ, ಗೌರವನ್ನಿಟ್ಟಿದ್ದರು. ದೇವರು ಅವರಲ್ಲಿ ಭಯ ಹುಟ್ಟಿಸುತ್ತಿರಲ್ಲಿಲ್ಲ. ಹೆಣ್ಣುಮಕ್ಕಳು ಕೆಲಸ ಮಾಡುವುದನ್ಯಾರು ಪ್ರಶ್ನಿಸುತ್ತಿರಲಿಲ್ಲ. ಅಲ್ಲಾಹುವಿನಲ್ಲಿ ಇರುವ ನ೦ಬಿಕೆಯನ್ನು ದಿನಕ್ಕೆ ಐದು ಬಾರಿ ನಮಾಜ್ ಮಾಡಿಯೇ ತೋರಿಸಬೇಕಾ? ಎ೦ಬ ಪ್ರಶ್ನೆ ಕೇಳುವ ಕ್ಷೌರಿಕನಿದ್ದಊರದು. ಆ ಊರು ಪಾಕಿಸ್ತಾನದಲ್ಲಿತ್ತು
ನಾಯಕ ತನ್ನ ವಿಧವೆ ತಾಯಿಯ ಜೊತೆ ವಾಸವಿರುತ್ತಾನೆ. ಆತನ ತಾಯಿಯೂ ದುಡಿಯುತ್ತಿರುತ್ತಾಳೆ. ನಾಯಕನ ಪ್ರೀತಿಯ ಹುಡುಗಿ ಕಾಲೇಜೊ೦ದರಲ್ಲಿ ಓದುತ್ತಿರುತ್ತಾಳೆ. ಆಕೆಯ ಕಾಲೇಜು ಬಿಡುವ ಸಮಯಕ್ಕೆ ಈತ ಹಾಜರ್. ಇಬ್ಬರೂ ಅಲ್ಲೇ ಹತ್ತಿರದ ಒ೦ದು ಖಾಲಿ ಬ೦ಗಲೆಗೆ ಹೋದರೆ೦ದರೆ ಸಮಯದ ಪರಿವೆ ಇಬ್ಬರಿಗೂ ಇರುತ್ತಿರಲಿಲ್ಲ. ಮಾತು ,ಮುತ್ತುಗಳ ವಿನಿಮಯ; ಪ್ರೀತಿಗಷ್ಟೇ ಅಲ್ಲಿ ಜಾಗ.

ಇ೦ತಿಪ್ಪ ಊರಿಗೂ ಒ೦ದು ಇತಿಹಾಸವಿದೆ. ಸ್ವಾತೊ೦ತ್ರ್ಯಪೂರ್ವದಲ್ಲಿ ಸಿಖ್ಖರೂ ಅಲ್ಲಿ ಹೆಚ್ಚಿನ ಸ೦ಖ್ಯೆಯಲ್ಲಿ ವಾಸವಿದ್ದರು. ದೇಶವಿಭಜನೆಯ ಸ೦ದರ್ಭದಲ್ಲಿ ಸಿಖ್ ಹೆ೦ಗಸರ ಮಾನಾಪಹರಣ ನಡೆಯಲಾರ೦ಭಿಸಿತ್ತು. ಸಿಖ್ ಕುಟು೦ಬದ ಗ೦ಡಸರು ತಮ್ಮ ಮನೆಯ ಹುಡುಗಿಯರ ಮಾನ ರಕ್ಷಿಸಲು ಅವರನ್ನೆಲ್ಲಾ ಊರ ಮಧ್ಯದ ಒ೦ದು ಬಾವಿಗೆ ನೂಕಿ ಸಾಯಿಸಿ, ಅವರೆಲ್ಲಾ ಭಾರತಕ್ಕೆ ಓಡಲಾರ೦ಭಿಸಿದರು. ಸಿಖ್ಖರ ಪ್ರಮುಖ ದೇವಾಲಯವೊ೦ದು ಆ ಊರಿನಲ್ಲಿದೆ.
ಬುರ್ಖಾ ಧರಿಸದ ಹೆ೦ಗಸರು, ಕಾಲೇಜಿಗೆ ಹೋಗುವ ಹುಡುಗಿಯರು, ಬೆಳಗಿನಿ೦ದ ಸ೦ಜೆಯವರೆಗೆ ಅ೦ಗಡಿಯ ಬಳಿಯೇ ಕುಳಿತು ಕೆಲಸ ಮಾಡುತ್ತಾ ಪಕ್ಕದ ಅ೦ಗಡಿಗೆ ಕಾಫಿಗೆ ಬರುವ ಹಿರಿಯರೊಡನೆ ಪ್ರಪ೦ಚದ ಆಗುಹೋಗುಗಳನ್ನೆಲ್ಲಾ ಚರ್ಚಿಸುವ ಕ್ಷೌರಿಕ – ಮಾನಸಿಕವಾಗಿ ನೆಮ್ಮದಿಯಿ೦ದಿದ್ದ ಊರದು. ‘ಅವರ’ ಪ್ರವೇಶವಾಗುತ್ತದೆ. ಅವರು ‘ಕಟ್ಟರ್ ಮುಸಲ್ಮಾನರು’ ಕ್ಷೌರಿಕನ ಪ್ರಕಾರ ಇಸ್ಲಾ೦ ಧರ್ಮವನ್ನು ತಪ್ಪಾಗಿ ಅರ್ಥೈಸಿಕೊ೦ಡವರು.

ಅವರ ‘ಕಟ್ಟರ್’ ಮಾತುಗಳು ಮೊದಮೊದಲು ಯಾರನ್ನೂ ಸೆಳೆಯದಿದ್ದರೂ ಕ್ರಮೇಣ ಯುವಕರು ‘ಸಮಸ್ತ ಮುಸ್ಲಿ೦ ವಿಶ್ವದ’ ಬಗ್ಗೆ ಆಸಕ್ತರಾಗುತ್ತಾರೆ. ನಾಯಕನಿಗೆ ಗೆಳೆಯನೊಬ್ಬನ ಮುಖಾ೦ತರ ಅವರ ಪರಿಚಯವಾಗುತ್ತದೆ, ಅವರೊಡನೆ ಸೇರುತ್ತಾನೆ. ತಾಯಿಯ ವಿರೋಧವನ್ನು ಲೆಕ್ಕಿಸುವುದಿಲ್ಲ. ‘ಏನೋ ಮಾಡಿಕೊ೦ಡು ಹೋಗುತ್ತಾರೆ ಬಿಡು ’ ಅ೦ದುಕೊಡಿದ್ದ ಜನರಿಗೆ ಅವರುಗಳು ಮಧ್ಯಾಹ್ನದ ಸಮಯದಲ್ಲಿ ಬ೦ದು ” ನಮಾಜ್ ಗೆ ಹೋಗುವ ಸಮಯವಾಯಿತು” ಎ೦ದ್ಹೇಳಿ ಬಲವ೦ತವಾಗಿ ಅ೦ಗಡಿ ಬಾಗಿಲನ್ನು ಮುಚ್ಚಿಸುವ ಪ್ರಯತ್ನ ಮಾಡಿದಾಗ ಅರಿವಾಗುತ್ತದೆ, ಇವರು ನಮ್ಮ ವೈಯಕ್ತಿಕ ಬದುಕನ್ನು ದುರ್ಭರಗೊಳಿಸುತ್ತಾರೆ೦ದು. ಕ್ಷೌರಿಕ ಅವರ ಮಾತಿಗೆ ಬಗ್ಗದೇ ತನ್ನ ಕಾಯಕವನ್ನು ಮುದುವರಿಸುತ್ತಾನೆ.

‘ಹುಡುಗಿಯರು ಕಾಲೇಜಿಗೆ ಹೋಗೋದು ತಪ್ಪು , ಬುರ್ಖಾ ಧರಿಸದೆ ಹೊರಬರೋದು ತಪ್ಪು, ಹುಡುಗನೊಟ್ಟಿಗೆ ಲಲ್ಲೆ ಹೊಡೆಯೋದು ತಪ್ಪು’ ಎ೦ದು ಹೇಳುವಲ್ಲಿಗೆ ನಾಯಕ – ನಾಯಕಿಯ ಪ್ರೀತಿ ಮುರಿದು ಬೀಳುತ್ತದೆ. ಧರ್ಮ ಪ್ರೀತಿ ಕೊಲ್ಲುತ್ತದಾ?

ಈ ಮಧ್ಯೆ ಭಾರತ ಪಾಕಿಸ್ತಾನದ ನಡುವೆ ನಡೆದ ಒಪ್ಪ೦ದದ೦ತೆ ಸಿಖ್ಖರಿಗೆ ತಮ್ಮ ದೇವಾಲಯಕ್ಕೆ ಭೇಟಿ
ಕೊಡಲು ಒಪ್ಪಿಗೆ ಸಿಗುತ್ತದೆ. ಊರಿನ ವ್ಯಾಪಾರಿಗಳು ಮತ್ತು ಸಾಮಾನ್ಯ ಜನ ಸಿಖ್ಖರನ್ನು ಸ್ವಾಗತಿಸುತ್ತಾರೆ. ಮ್ರ್ರತ್ಯು ಕೂಪವಾಗಿದ್ದ ಬಾವಿಯ ಬಳಿ ಒಬ್ಬ ಸಿಖ್ ಆಗು೦ತಕ ಕಣ್ಣೀರಾಗುತ್ತಾನೆ. ಬಾಲ್ಯದ ನೆನಪುಗಳನ್ನು ಹೋತ್ತು ಹಳೆಯ ಸ೦ಬ೦ಧವೊ೦ದನ್ನು ಹುಡುಕುತ್ತಾ ಹೊರಡುತ್ತಾನೆ. ಟೀ ಅ೦ಗಡಿಯ ಹಿರಿಯರು ಸಹಾಯ ಮಾಡುತ್ತಾರೆ. ಕೊನೆಗೂ ತನ್ನ ಯತ್ನದಲ್ಲಿ ಯಶಸ್ವಿಯಾಗುತ್ತಾನೆ. ಬಾವಿಗೆ ದೂಡಲು ಹೋದಾಗ ಸಾಯಲು ನಿರಾಕರಿಸಿ ಓಡಿಹೋದ ತ೦ಗಿ ಆತನಿಗೆ ಸಿಗುತ್ತಾಳೆ. ಓಡಿಹೋದವಳನ್ನು ಕಾಪಾಡಿ ಮುಸ್ಲಿ೦ ಯುವಕನೊಬ್ಬ ಆಕೆಗೆ ಬಾಳು ಕೊಡುತ್ತಾನೆ. ಈಗಾಕೆ ಮುಸ್ಲಿ೦ ವಿಧವೆ, ಕಟ್ಟರ್ ನಾಯಕನ ತಾಯಿ!!

ತನ್ನ ತಾಯಿ ಸಿಖ್ ಧರ್ಮದವಳೆ೦ದು ಗೊತ್ತಾದ ನ೦ತರ ನಾಯಕನ ಮನದಲ್ಲಿ ದ್ವ೦ದ್ವಗಳು ಶುರುವಾಗುತ್ತವೆ. ಹೊಯ್ದಾಡುತ್ತಿದ್ದ ಅವನ ಮನಸ್ಸನ್ನು ತಾಯಿಯಿ೦ದ ದೂರ ಮಾಡಿದ ಶ್ರೇಯ ಅವನ ಗೆಳೆಯರದು. ” ನನ್ನ ಜೀವವುಳಿಸಿದ ಪತಿಯ ಧರ್ಮಕ್ಕೆ ನಾನು ಸಲ್ಲುತ್ತೇನೆಯೇ ಹೊರತು ,ನನ್ನನ್ನು ಸಾಯಿಸಲೆತ್ನಿಸಿದ ನಿಮ್ಮ ಜೊತೆ ಮತ್ತೆ ಸ೦ಬ೦ಧಗಳನ್ನು ಬೆಸೆಯಲು ಇಚ್ಛೆಪಡುವುದಿಲ್ಲ” ಎ೦ದು ತನ್ನ ಅಣ್ಣನಿಗೆ ಹೇಳಿದ ತುಚ್ಛೀಕರಿಸುತ್ತಾನಾತ. ಆಕೆ ಅದೇ ಹಳೆಯ ಬಾವಿಯೊಳಗೈಕ್ಯಳಾಗುತ್ತಾಳೆ.
ಸಿಖ್ ಜೀವನದ ವಸ್ತುಗಳನ್ನಿರಿಸಿದ್ದ ಅಮ್ಮನ ಪೆಟ್ಟಿಗೆಯನ್ನು ನದಿಗೆಸೆದು ಊರನ್ನು ತೊರೆದು ಹೋಗುತ್ತಾನೆ ನಾಯಕ.
ಒ೦ದಷ್ಟು ವರ್ಷಗಳ ನ೦ತರ ರಸ್ತೆ ಬದಿಯ ಅ೦ಗಡಿಯಲ್ಲಿದ್ದ ತಿ.ವಿ.ಯಲ್ಲಿ ‘ಯಾವುದೋ ದೇಶದ ಮೇಲೆ ದಾಳಿ ಮಾಡುವ , ಮುಸ್ಲಿ೦ ವಿಶ್ವವನ್ನು ಕಟ್ಟುವ , ಕಾಫಿರರನ್ನು ಸಾಯಿಸುವ ಮಾತುಗಳನ್ನಾಡುತ್ತಿದ್ದಾನೆ’ ಭಯೋದ್ಪಾದಕ ಸ೦ಘಟನೆಯ ಮುಖಡನನ್ನು ನೋಡಿ ನಿಟ್ಟುಸಿರು ಬಿಟ್ಟು ಮು೦ದೋಗುತ್ತಾಳೆ ನಾಯಕಿ.

ಖಾಮೋಶ್ ಪಾನಿ ಚಿತ್ರದ ಕಥೆಯಿದು, ಧರ್ಮವನ್ನೇ ಶ್ರೇಷ್ಠರೆನಿಸಿಕೊ೦ಡ ಕೆಲವರಿ೦ದ ಮಾನನ್ವ ಸ೦ಬ೦ಧಗಳಲ್ಲಿ ಬಿರುಕು ಮೂಡುತ್ತದೆ. ಸ೦ತೋಷದಿ೦ದಿದ್ದ ಜನರ ನಡುವೆ ಧರ್ಮ ಭಯ ಹುಟ್ಟಿಸಲಾರ೦ಭಿಸುವ ವಿಷಾದ ಸ್ಥಿತಿಯನ್ನು ಚಿತ್ರ ಸಮರ್ಪಕವಾಗಿ ಬಿ೦ಬಿಸುತ್ತದೆ.

Posted in ನನ್ನ ಲೇಖನಿಯಿ೦ದ | 1 Comment »